Home / ಕಥೆ / ಕಿರು ಕಥೆ / ಬೇಸರವಿಲ್ಲದ ಲಿಪಿ

ಬೇಸರವಿಲ್ಲದ ಲಿಪಿ

ಒಬ್ಬ ಸನ್ಯಾಸಿ ಸಮುದ್ರ ದಂಡೆಯ ಗುಡ್ಡ ಕಲ್ಲ ಮೇಲೆ ಕುಳಿತು ಧ್ಯಾನ ತಪದಲ್ಲಿ ತೊಡಗಿದ್ದ. ಒಂದು ಶಿಷ್ಯರ ಗುಂಪು ಗುರುವನ್ನು ಹುಡುಕಿಕೊಂಡು ಬರುವಾಗ ಈ ಸನ್ಯಾಸಿಯನ್ನು ನೋಡಿ ಆಕರ್ಷಿತರಾಗಿ ಅವರಿಗೆ ಅಡ್ಡ ಬಿದ್ದು ನಮಸ್ಕರಿಸಿದರು.

“ನಮಗೆ ಜ್ಞಾನೋದಯವಾಗಬೇಕಾಗಿದೆ ನಾವು ಏನು ಮಾಡಬೇಕು?” ಎಂದು ಕೇಳಿದರು.

“ನೀವು ಎರಡು ಗುಂಪುಗಳಾಗಿ, ಒಂದು ಗುಂಪು ಈ ದಡದಲ್ಲಿ, ಇನ್ನೊಂದು ಗುಂಪು ಸಮುದ್ರದಾಚೆಯ ದಡದಲ್ಲಿ ಇರಿ. ನೀವು ಮಾಡಬೇಕಾದದು ಇಷ್ಟೆ, ಸಮುದ್ರ ಬೇಸರವಿಲ್ಲದೆ ನೊರೆಯಿಂದ ಸತ್ಯದ ಲಿಪಿ ಬರೆಯುತ್ತಲೇ ಇರುತ್ತದೆ. ಸೂರ್ಯನ ಕಿರಣದಲ್ಲಿ ಒಣಗಿಹೋಗುವ ಮುನ್ನ ಅದನ್ನು ಓದಿಕೊಂಡು ಆಚೆಯ ದಡದ ನಿಮ್ಮ ಸ್ನೇಹಿತರಿಗೆ ಹೇಳಿ, ಇದು ನಿರಂತರ ಸಾಗುತ್ತಿರಲಿ.

ಆಚೆಯ ದಡದ ನಿಮ್ಮ ಸ್ನೇಹಿತರು ಮಾಡಬೇಕಾದುದು ಇಷ್ಟೆ. ಸಮುದ್ರ, ಮರಳು ದಂಡೆಯ ಮೇಲೆ ಅಲೆಯ ನೊರೆ ಹಾಕುವುದರೊಳಗೆ ಮರಳನ್ನು ಎಣಿಸಿ ಅದರ ಮೊತ್ತದ ಗಣಿತವನ್ನು ನಿಮಗೆ ಸಮುದ್ರ ದಾಟಿ ಬಂದು ಹೇಳಲಿ, ನಿಮಗೆ ಈರ್ವರಿಗೂ ಜ್ಞಾನೋದಯವು ಶತಸಿದ್ಧ” ಎಂದ ಸನ್ಯಾಸಿ.

“ಜ್ಞಾನೋದಯ ಇಷ್ಟೇನೇನಾ?” ಎಂದರು ಶಿಷ್ಯರ ಗುಂಪು.

“ನಾವೇಕೆ ಸಮುದ್ರ ದಾಟಿ ಶ್ರಮಪಡಬೇಕು. ಬಂಡೆ ಮೇಲೆ ಅಲೆ ಬರೆದ ನೊರೆ ಲಿಪಿಯಲ್ಲಿ ಏನಿತ್ತು ಎಂಬುದನ್ನು ಅಲೆಯಿಂದ ಮರಳು ಒದ್ದೆಯಾಗುವ ಮುನ್ನ ಎಷ್ಟು ಮರಳಿನ ಹರಳಿತ್ತು ಎಂಬುದನ್ನು ಸೂರ್ಯನನ್ನ ಕೇಳಿದರೆ ನಮಗೆ ಜ್ಞಾನೋದಯವಾಗುವುದಿಲ್ಲವೇ?” ಎಂದರು ಶಿಷ್ಯಕೋಟಿ.

“ನಿಮ್ಮ ದಾರಿ ನಿಮಗಿರುವಾಗ, ನಿಮಗೇಕೆ ಗುರು ಮತ್ತು ಜ್ಞಾನೋದಯ”, ಎಂದರು ಗುಡ್ಡದ ಸನ್ಯಾಸಿ.
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...