Home / ಕವನ / ಕವಿತೆ / ದ್ವಂದ್ವದಾಟ

ದ್ವಂದ್ವದಾಟ

ತಂಗಾಳಿ ಬೀರಿದೆ, ಬಿರುಗಾಳಿ ಬೀಸಿದೆ
ಜಗವೆಲ್ಲ ನಲಿದಿದೆ, ಅಳುವಿನಲ್ಲಿ ಮುಳುಗಿದೆ
ಗಗನ ಹೊಳೆದಿದೇ, ಮೇಘ ಮುತ್ತಿದೆ
ಮೊಗವೊಂದು ಬಾಡಿದೆ, ಮತ್ತೊಂದು ಅರಳಿದೆ

ಅತ್ತ ಮರಣ-ಇತ್ತ ಜನನ; ಇಳೆಯೊಳೆಲ್ಲೆಡೆ
ಕತ್ತಲಂತೆ ಬೆಳಕಂತೆ ಎರಡು ಕೂಡಿವೆ
ತುತ್ತೊಂದೆಡೆ ಹೊಟ್ಟೆಗಿಲ್ಲ, ಮೃಷ್ಟಾನ್ನವೊಂದೆಡೆ
ಅತ್ತ ಹಾಗೆ, ಇತ್ತ ಹೀಗೆ ಜಗವ ತೂಗಿದೆ

ತಾಮಸರು ನಿಂದಿಹರು, ಸುರಜನರು ಬ೦ದಿಹರು
ಕಿಕ್ಕಿರಿದ ಜಗತುಂಬ ಪುಣ್ಯ ಪಾಪಂತೆ
ಮುಕ್ಕರಿಪ- ಎಚ್ಚರಿಪ ಜನರೆಲ್ಲರಿಲ್ಲಿಹರು
ಇಕ್ಕೆಲದ ಜನವೆಲ್ಲ ಜಗವನ್ನೇ ಜೈಸಿದೆ

ಬ್ರಹ್ಮಚರ್ಯ-ಕಾಮಚರ್ಯ ಎಲ್ಲ ನಡೆದಿವೆ
ಸುತ್ತೆಲ್ಲಾ ರಣಕಹಳೆ, ನಡುವಿದೆ ಶಾಂತಿ ಹೊಳೆ
ಧರ್ಮ-ಕರ್ಮ-ದುಷ್ಕರ್ಮ ಕೂಡಿ ಬಾಳಿವೆ
-ಮಿಥ್ಯ ಎಲ್ಲ ಸೇರಿ ಸಮರಸದ ಜಡಿಮಳೆ

ದೇವಗುಡಿಯೊಂದು, ನಾಸ್ತಿಕ ನುಡಿ ಇನ್ನೊ೦ದು
ಬೇವು-ಬೆಲ್ಲ, ಶಿಗೆ-ಎಣ್ಣೆ, ಅಬ್ಬ ತಾಕಲಾಟವೆ
ನೀವು-ನಾನು, ನೀನು-ನಾವು, ಮೇಲು-ಕೀಳು ಎಂದು
ಅವನು ಹೋಲೆಯನಿವನು ಒಡೆಯ; ಅಳುವೆ-ಬಾಳುವೆ

ಪ್ರಳಯ, ನಾಶ, ದುಃಖ, ನರಕ ಸೊಕ್ಕಿನಿಂದ ನಕ್ಕಿವೆ
ಬೆಳವು, ಉಳಿವು, ಸಿರಿಯು, ಸರ್ಗ ಎಲ್ಲ ಉಕ್ಕಿವೆ
ಏಳು-ಬೀಳು, ದಿಬ್ಬ-ತಗ್ಗು, ಇರುಳು-ಹಗಲು ಸೇರಿವೆ
ಸೆಳೆದು-ಎಳೆದು ಜನವನೆಲ್ಲಾ ಕಾಡಿ-ನೀಡಿ ನೋಡಿವೆ
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...