Home / ಕವನ / ಕವಿತೆ / ದ್ವಂದ್ವದಾಟ

ದ್ವಂದ್ವದಾಟ

ತಂಗಾಳಿ ಬೀರಿದೆ, ಬಿರುಗಾಳಿ ಬೀಸಿದೆ
ಜಗವೆಲ್ಲ ನಲಿದಿದೆ, ಅಳುವಿನಲ್ಲಿ ಮುಳುಗಿದೆ
ಗಗನ ಹೊಳೆದಿದೇ, ಮೇಘ ಮುತ್ತಿದೆ
ಮೊಗವೊಂದು ಬಾಡಿದೆ, ಮತ್ತೊಂದು ಅರಳಿದೆ

ಅತ್ತ ಮರಣ-ಇತ್ತ ಜನನ; ಇಳೆಯೊಳೆಲ್ಲೆಡೆ
ಕತ್ತಲಂತೆ ಬೆಳಕಂತೆ ಎರಡು ಕೂಡಿವೆ
ತುತ್ತೊಂದೆಡೆ ಹೊಟ್ಟೆಗಿಲ್ಲ, ಮೃಷ್ಟಾನ್ನವೊಂದೆಡೆ
ಅತ್ತ ಹಾಗೆ, ಇತ್ತ ಹೀಗೆ ಜಗವ ತೂಗಿದೆ

ತಾಮಸರು ನಿಂದಿಹರು, ಸುರಜನರು ಬ೦ದಿಹರು
ಕಿಕ್ಕಿರಿದ ಜಗತುಂಬ ಪುಣ್ಯ ಪಾಪಂತೆ
ಮುಕ್ಕರಿಪ- ಎಚ್ಚರಿಪ ಜನರೆಲ್ಲರಿಲ್ಲಿಹರು
ಇಕ್ಕೆಲದ ಜನವೆಲ್ಲ ಜಗವನ್ನೇ ಜೈಸಿದೆ

ಬ್ರಹ್ಮಚರ್ಯ-ಕಾಮಚರ್ಯ ಎಲ್ಲ ನಡೆದಿವೆ
ಸುತ್ತೆಲ್ಲಾ ರಣಕಹಳೆ, ನಡುವಿದೆ ಶಾಂತಿ ಹೊಳೆ
ಧರ್ಮ-ಕರ್ಮ-ದುಷ್ಕರ್ಮ ಕೂಡಿ ಬಾಳಿವೆ
-ಮಿಥ್ಯ ಎಲ್ಲ ಸೇರಿ ಸಮರಸದ ಜಡಿಮಳೆ

ದೇವಗುಡಿಯೊಂದು, ನಾಸ್ತಿಕ ನುಡಿ ಇನ್ನೊ೦ದು
ಬೇವು-ಬೆಲ್ಲ, ಶಿಗೆ-ಎಣ್ಣೆ, ಅಬ್ಬ ತಾಕಲಾಟವೆ
ನೀವು-ನಾನು, ನೀನು-ನಾವು, ಮೇಲು-ಕೀಳು ಎಂದು
ಅವನು ಹೋಲೆಯನಿವನು ಒಡೆಯ; ಅಳುವೆ-ಬಾಳುವೆ

ಪ್ರಳಯ, ನಾಶ, ದುಃಖ, ನರಕ ಸೊಕ್ಕಿನಿಂದ ನಕ್ಕಿವೆ
ಬೆಳವು, ಉಳಿವು, ಸಿರಿಯು, ಸರ್ಗ ಎಲ್ಲ ಉಕ್ಕಿವೆ
ಏಳು-ಬೀಳು, ದಿಬ್ಬ-ತಗ್ಗು, ಇರುಳು-ಹಗಲು ಸೇರಿವೆ
ಸೆಳೆದು-ಎಳೆದು ಜನವನೆಲ್ಲಾ ಕಾಡಿ-ನೀಡಿ ನೋಡಿವೆ
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...