ದ್ವಂದ್ವದಾಟ

ತಂಗಾಳಿ ಬೀರಿದೆ, ಬಿರುಗಾಳಿ ಬೀಸಿದೆ
ಜಗವೆಲ್ಲ ನಲಿದಿದೆ, ಅಳುವಿನಲ್ಲಿ ಮುಳುಗಿದೆ
ಗಗನ ಹೊಳೆದಿದೇ, ಮೇಘ ಮುತ್ತಿದೆ
ಮೊಗವೊಂದು ಬಾಡಿದೆ, ಮತ್ತೊಂದು ಅರಳಿದೆ

ಅತ್ತ ಮರಣ-ಇತ್ತ ಜನನ; ಇಳೆಯೊಳೆಲ್ಲೆಡೆ
ಕತ್ತಲಂತೆ ಬೆಳಕಂತೆ ಎರಡು ಕೂಡಿವೆ
ತುತ್ತೊಂದೆಡೆ ಹೊಟ್ಟೆಗಿಲ್ಲ, ಮೃಷ್ಟಾನ್ನವೊಂದೆಡೆ
ಅತ್ತ ಹಾಗೆ, ಇತ್ತ ಹೀಗೆ ಜಗವ ತೂಗಿದೆ

ತಾಮಸರು ನಿಂದಿಹರು, ಸುರಜನರು ಬ೦ದಿಹರು
ಕಿಕ್ಕಿರಿದ ಜಗತುಂಬ ಪುಣ್ಯ ಪಾಪಂತೆ
ಮುಕ್ಕರಿಪ- ಎಚ್ಚರಿಪ ಜನರೆಲ್ಲರಿಲ್ಲಿಹರು
ಇಕ್ಕೆಲದ ಜನವೆಲ್ಲ ಜಗವನ್ನೇ ಜೈಸಿದೆ

ಬ್ರಹ್ಮಚರ್ಯ-ಕಾಮಚರ್ಯ ಎಲ್ಲ ನಡೆದಿವೆ
ಸುತ್ತೆಲ್ಲಾ ರಣಕಹಳೆ, ನಡುವಿದೆ ಶಾಂತಿ ಹೊಳೆ
ಧರ್ಮ-ಕರ್ಮ-ದುಷ್ಕರ್ಮ ಕೂಡಿ ಬಾಳಿವೆ
-ಮಿಥ್ಯ ಎಲ್ಲ ಸೇರಿ ಸಮರಸದ ಜಡಿಮಳೆ

ದೇವಗುಡಿಯೊಂದು, ನಾಸ್ತಿಕ ನುಡಿ ಇನ್ನೊ೦ದು
ಬೇವು-ಬೆಲ್ಲ, ಶಿಗೆ-ಎಣ್ಣೆ, ಅಬ್ಬ ತಾಕಲಾಟವೆ
ನೀವು-ನಾನು, ನೀನು-ನಾವು, ಮೇಲು-ಕೀಳು ಎಂದು
ಅವನು ಹೋಲೆಯನಿವನು ಒಡೆಯ; ಅಳುವೆ-ಬಾಳುವೆ

ಪ್ರಳಯ, ನಾಶ, ದುಃಖ, ನರಕ ಸೊಕ್ಕಿನಿಂದ ನಕ್ಕಿವೆ
ಬೆಳವು, ಉಳಿವು, ಸಿರಿಯು, ಸರ್ಗ ಎಲ್ಲ ಉಕ್ಕಿವೆ
ಏಳು-ಬೀಳು, ದಿಬ್ಬ-ತಗ್ಗು, ಇರುಳು-ಹಗಲು ಸೇರಿವೆ
ಸೆಳೆದು-ಎಳೆದು ಜನವನೆಲ್ಲಾ ಕಾಡಿ-ನೀಡಿ ನೋಡಿವೆ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಲೂಟಿವಿದ್ಯೆ
Next post ಗದ್ಯ-ಪದ್ಯ

ಸಣ್ಣ ಕತೆ

  • ಗಂಗೆ ಅಳೆದ ಗಂಗಮ್ಮ

    ಕನ್ನಡ ನಾಡು ಆರ್ಯದ್ರಾವಿಡ ಸಂಸ್ಕೃತಿಗಳನ್ನು ಅರಗಿಸಿಕೊಂಡು ತನ್ನದಾದ ಒಂದು ಉಚ್ಚ ಸಂಸ್ಕೃತಿಯಿಂದ ಬಹು ಪುರಾತನ ಕಾಲದಿಂದಲೂ ಕೀರ್ತಿಯನ್ನು ಪಡೆದಿದೆ. ಇಂತಹ ನಾಡಿನಲ್ಲಿ ಕಾಣುವ ಅವಶೇಷಗಳು ಒಂದೊಂದು ಹಿರಿಸಂಸ್ಕೃತಿಯ… Read more…

  • ಗೃಹವ್ಯವಸ್ಥೆ

    ಬೆಳಗು ಮುಂಜಾನೆ ಎಂಟು ಗಂಟೆಗೆ ಹೊಗೆಬಂಡಿಯು XX ಸ್ಟೇಶನಕ್ಕೆ ಬಂದು ನಿಂತಿತು. ಸಂತ್ರಾಧಾರವಾಗಿ ಮಳೆ ಹೊಡೆಯುತ್ತಿರುವದರಿಂದ ಪ್ರಯಾಣಸ್ಥರು ಬೇಸತ್ತು ಗಾಡಿಯಿಂದ ಯಾವಾಗ ಇಳಿಯುವೆವೋ ಎಂದೆನ್ನುತ್ತಿದ್ದರು. ನಿರ್ಮಲಾಬಾಯಿಯು ಅವಳ… Read more…

  • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

    ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…

  • ಜಡ

    ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…

  • ಮೋಟರ ಮಹಮ್ಮದ

    ನಮ್ಮಂತಹ ಈಗಿನ ಜನಗಳಿಗೆ ಹೊಲ, ಮನೆ, ಪೂರ್ವಾರ್ಜಿತ ಆಸ್ತಿ ಪಾಸ್ತಿಗಳಲ್ಲಿ ಹೆಚ್ಚು ಆದರವಿಲ್ಲೆಂದು ನಮ್ಮ ಹಿರಿಯರು ಮೇಲಿಂದ ಮೇಲೆ ಏನನ್ನೋ ಒಟಗುಟ್ಟುತ್ತಿರುತ್ತಾರೆ. ನಾವಾದರೋ ಹಳ್ಳಿಯನ್ನು ಕಾಣದೆ ಎಷ್ಟೋ… Read more…