Home / ಕವನ / ಕವಿತೆ / ಸಂಚಲನ

ಸಂಚಲನ

ಈ ನೆಲ ಬರಡಾಗಿ ಬಿದ್ದಿದೆ ಜಡವಾಗಿ
ಇದನ್ನೆಬ್ಬಿಸಿ ಹಸಿರ ಚಿಗುರಿಸುವುದು ಹೇಗೆ?
ಈ ಗಿಡಗಳು ಬಾಡಿ ಬರಲಾಗಿವೆ
ಇವು ಹೂಗಳ ಬಿಟ್ಟು ಕಾಯಿ ಹಣ್ಣುಗಳಾಗಿ
ಸಫಲವಾಗುವುದು ಹೇಗೆ?

ಮಾನವರ ನಡುವೆ ಗೋಡೆ ಗೋಡೆಗಳು
ಸಂದುಗೊಂದುಗಳಲ್ಲೇ ನೋಟಗಳು
ಇವನೆಲ್ಲ ಕೆಡವಿ ಎಲ್ಲರೂ ಒಂದೇ
ಆಕಾಶ ನೋಡುತ್ತ ಬಯಲಲ್ಲಿ ಹಾಡುತ್ತ
ಕುಣಿಯುವಂತೆ ಮಾಡುವುದು ಹೇಗೆ?

ಈ ಬಂಡಿ ಮುಂದೆ ಹೋಗಲೇ ಒಲ್ಲದು
ಎತ್ತುಗಳು ನೆಲಕಚ್ಚಿ ಬಿದ್ದಿದೆ
ಇವುಗಳ ಬಾಲ ತಿರುವಿ ಮೇಲಕ್ಕೆಬ್ಬಿಸಿ
ಬಂಡಿ ಮುಂದೆ ಹೋಗಲು
ಎಳೆಯುವಂತೆ ಮಾಡುವುದು ಹೇಗೆ?

ಈ ಕಣ್ಣುಗಳು ಮತ ಧರ್ಮಗಳ
ಬಣ್ಣ ಗಾಜುಗಳಿಂದ ಅಲಂಕೃತವಾಗಿವೆ
ನೋಡಿದ್ದೆಲ್ಲ ಬಣ್ಣ ಬಣ್ಣ
ಗಾಜುಗಳ ಒಡೆದು ವರ್ಣರಹಿತವಾದ
ನಿಜ ಮಾನವನ ಎದೆಯಾಗಸವ
ನೋಡುವಂತೆ ಮಾಡುವುದು ಹೇಗೆ?

ಈ ಬಳ್ಳಿಗಳು ಅಲ್ಲಲ್ಲಿಗೆ ಅಲ್ಲಲ್ಲಿಗೆ
ಮುರುಟಿಕೊಂಡು ಸಂದುಗೊಂದುಗಳಲ್ಲಿ
ತೂರಿಕೊಳ್ಳುತ್ತಿವೆ ಕತ್ತಲಲ್ಲೇ ಸುತ್ತುತ್ತಿವೆ
ಇವು ಗಾಳಿ ಬೆಳಕುಗಳಿಗೆ
ಚಾಚಿಕೊಂಡು ಅಗಲ ಉದ್ದವಾಗಿ
ಹಬ್ಬುವಂತೆ ಮಾಡುವುದು ಹೇಗೆ?

ಈ ಹುಳುಗಳು ತಮ್ಮ ಸುತ್ತಲೇ ಸುತ್ತುತ್ತ
ತಮ್ಮ ಬಾಲಗಳ ತಾವೇ ನುಂಗುತ್ತ
ಒದ್ದಾಡುವುದ ಬಿಡಿಸಿ
ಮೈಸೆಟಸಿ ನೆಟ್ಟಗೆ ಮುಂದಕ್ಕೆ
ಸಾಗುವಂತೆ ಮಾಡುವುದು ಹೇಗೆ?

ಬಕಪಕ್ಷಿಗಳು ತೇಲುಗಣ್ಣು ಮಾಡಿಕೊಂಡು
ಗದ್ದುಗೆಯೇರಿ ಕುಳಿತುಕೊಂಡು
ಮೇಲುಮೇಲಕ್ಕೆ ಕೈ ಮಾಡಿ ಗುಂಡಿಗಳಲ್ಲಿ
ಎಲ್ಲ ಮೀನುಗಳ ಬಳಿಗೆ ಸೇರಿಸಿಕೊಂಡು
ತೇಲಾಡುವಂತೆ ಮಾಡುತ್ತಿವೆ
ಅವುಗಳನ್ನು ಬಿಡಿಸಿ ಹಾಯಾಗಿ
ಸಾಗರದಪಾರ ತಿಳಿ ಜಲದ ಮೇಲೆ
ಲೀಲಾಜಾಲವಾಗಿ ಈಜಾಡುವಂತೆ
ಮಾಡುವುದು ಹೇಗೆ?

ಕಟ್ಟಿದ ಸಂಕೋಲೆಗಳಿಂದ
ಕೆಸರೂಳಗೆ ಕಾಲುಗಳ ಕೀಳಲಾರದೆ
ಕೀಳಲು ಸೆಣಸಾಡುತ್ತ ಎಳೆದಾಡುವ
ಈ ಪ್ರಾಣಿಗಳ ಬೇಡಿಗಳ ಬಿಡಿಸಿ
ಗಟ್ಟಿ ನೆಲದ ಮೇಲೆ
ಓಡಾಡುವಂತೆ ಮಾಡುವುದು ಹೇಗೆ?
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...