ಮಾನ

ಅಂತರದಲ್ಲಾಡುವಳತೆಗೋಲು ಅಳೆದೂ ಸುರಿದೂ
ಹಗಲಿರುಳು ಬಟ್ಟೆ ತೊಡಿಸುತ್ತದೆ-ಕಳಚುತ್ತದೆ-ತೊಡಿಸುತ್ತದೆ
ತನಗೆ ಸರಿಕಂಡಂತೆ ಕೆಲವ ತಲೆಮೇಲಿಂದಿಳಿಬಿಡುತ್ತದೆ
ಮತ್ತೆ ಕೆಲವ ಕಾಲೊಳಗಿಂದ ಮೇಲೇರಿಸುತ್ತದೆ

ಕೆಲವು ಸೈಲು ಜೋಲಾಗಿ, ನೆಲ ಬಳಿಯುತ್ತಾ ಹರಿದು
ಚಿಂದಿಯಾಗುತ್ತವೆ
ಕೆಲವು ನನ್ನ ಮೈಕೈ ಕಾಲುಗಳೊಡನೆ ಮುಖವನ್ನೂ ಮುಚ್ಚಿ
ಮೂಕವಾಗಿಸಿ, ಕಿವುಡಾಗಿಸಿ, ಕುರುಡಾಗಿಸಿ, ಉಸಿರು ಕಟ್ಟಿಸುತ್ತವೆ
ಇನ್ನೂ ಕೆಲವು ಸಂದುಗೂಂದುಗಳ ಹೊಲಿಗೆ ಕಿತ್ತುಕೊಳ್ಳುತ್ತದೆ ಮೈ
ಬಿಗಿಯ ತಾಳಲಾರದೆ ಒಂದೂ ಸರಿಹೊಂದವು

ನನಗಾಗಿ ದುಡಿಯುವಾ ಕೋಲಿಗೆ ಕೂಲಿಯೇ ಇಲ್ಲ
ಆದರೂ ನನ್ನಳತೆಯೇ ಅದಕ್ಕೆ ಸಿಗದೆ, ಎರವಲ ಬಟ್ಟೆಗಳಿಂದಲೆ
ನನ್ನನಂದಗೊಳಿಸುವ ಬಾಡಿಗೆ ರೂಪ ಕೊಡುವ ಯತ್ನಮಾಡುತ್ತಿದೆ
‘ನನ್ನದೇ ಅಳತೆ ತೆಗೆದುಕೊ, ನನ್ನದೇ ಆದ ಬಟ್ಟೆ ಸಿದ್ಧಮಾಡು’
ಎಂದರೆ ನನ್ನ ಅಳತೆಯೇ ಅದಕ್ಕೆ ನಂಬಿಕೆ ಇದ್ದಂತಿಲ್ಲ,
ಅಥವಾ ನನ್ನಳತೆಯೇ ಅದಕ್ಕೆ ಅಳವಟ್ಟಿಲ್ಲವೋ!
ಹಾಗೆ ಕೇಳಿದಾಗ ಅದು ನನ್ನ ಪಾಡಿಗೆ ಬಿಟ್ಟಾಗ
ಬೆತ್ತಲೆಗುಡುಗುವ, ಸುಡುವ, ತೋಯುವ, ನೋಯುವ ಕಷ್ಟ
ಭಯಂಕರ,
ಆದರೂ ಅದರ ಕೈ ಕಾಲು ಹಿಡಿದು ಕಾಡಿ ಬೇಡಿದ್ದರಿಂದ
ಪರಿಸ್ಥಿತಿ ಸ್ವಲ್ಪ ಸುಧಾರಿಸುತ್ತಿದೆ

ಎರವಲೇನೂ ಇಲ್ಲವಾದರೂ
ಮಾಸಲು ತೇಪೆಯ ಬಟ್ಟೆಗಳೀಗಿಲ್ಲವಾದರೂ
ಬಿಗಿತ ಜೋಲಾಟಗಳೇನೂ ತಪ್ಪಿಲ್ಲ,
ಇಷ್ಟು ಇರುವುದು ಸಹಜ ಸ್ವಾಮೀ ಎನ್ನುತ್ತದೆ
ಇತ್ತೀಚೆಗೆ ಬಂದ ಪರದೇಶಿ ಬಟ್ಟೆಗಳಬ್ಬರದಲ್ಲಂತೂ
ಅಳತೆಕೋಲು ದಿಕ್ಕೂ ತಪ್ಪಿದಂತಾಗಿದೆ. ಇವುಗಳಲ್ಲಿ
ನನ್ನ ಮಾನ ಮುಚ್ಚುವ ಅಳತೆಗೊಗ್ಗುವ ಬಟ್ಟೆ ಸಿಗುವುದೇ
ಕಠಿಣವಾಗಿದೆ
ಬಟ್ಟೆಯೇ ಇಲ್ಲದೆ ನಾನೇ ಎಲ್ಲಿ ಪರದೇಶಿಯಾಗಿಬಿಡುವೆನೋ ಎಂಬ
ಭಯವಾವರಿಸಿದೆ
*****
(೨೨-೭-೧೯೭೩)

Tagged:

Leave a Reply

Your email address will not be published. Required fields are marked *

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...