ಮಾನ

ಅಂತರದಲ್ಲಾಡುವಳತೆಗೋಲು ಅಳೆದೂ ಸುರಿದೂ
ಹಗಲಿರುಳು ಬಟ್ಟೆ ತೊಡಿಸುತ್ತದೆ-ಕಳಚುತ್ತದೆ-ತೊಡಿಸುತ್ತದೆ
ತನಗೆ ಸರಿಕಂಡಂತೆ ಕೆಲವ ತಲೆಮೇಲಿಂದಿಳಿಬಿಡುತ್ತದೆ
ಮತ್ತೆ ಕೆಲವ ಕಾಲೊಳಗಿಂದ ಮೇಲೇರಿಸುತ್ತದೆ

ಕೆಲವು ಸೈಲು ಜೋಲಾಗಿ, ನೆಲ ಬಳಿಯುತ್ತಾ ಹರಿದು
ಚಿಂದಿಯಾಗುತ್ತವೆ
ಕೆಲವು ನನ್ನ ಮೈಕೈ ಕಾಲುಗಳೊಡನೆ ಮುಖವನ್ನೂ ಮುಚ್ಚಿ
ಮೂಕವಾಗಿಸಿ, ಕಿವುಡಾಗಿಸಿ, ಕುರುಡಾಗಿಸಿ, ಉಸಿರು ಕಟ್ಟಿಸುತ್ತವೆ
ಇನ್ನೂ ಕೆಲವು ಸಂದುಗೂಂದುಗಳ ಹೊಲಿಗೆ ಕಿತ್ತುಕೊಳ್ಳುತ್ತದೆ ಮೈ
ಬಿಗಿಯ ತಾಳಲಾರದೆ ಒಂದೂ ಸರಿಹೊಂದವು

ನನಗಾಗಿ ದುಡಿಯುವಾ ಕೋಲಿಗೆ ಕೂಲಿಯೇ ಇಲ್ಲ
ಆದರೂ ನನ್ನಳತೆಯೇ ಅದಕ್ಕೆ ಸಿಗದೆ, ಎರವಲ ಬಟ್ಟೆಗಳಿಂದಲೆ
ನನ್ನನಂದಗೊಳಿಸುವ ಬಾಡಿಗೆ ರೂಪ ಕೊಡುವ ಯತ್ನಮಾಡುತ್ತಿದೆ
‘ನನ್ನದೇ ಅಳತೆ ತೆಗೆದುಕೊ, ನನ್ನದೇ ಆದ ಬಟ್ಟೆ ಸಿದ್ಧಮಾಡು’
ಎಂದರೆ ನನ್ನ ಅಳತೆಯೇ ಅದಕ್ಕೆ ನಂಬಿಕೆ ಇದ್ದಂತಿಲ್ಲ,
ಅಥವಾ ನನ್ನಳತೆಯೇ ಅದಕ್ಕೆ ಅಳವಟ್ಟಿಲ್ಲವೋ!
ಹಾಗೆ ಕೇಳಿದಾಗ ಅದು ನನ್ನ ಪಾಡಿಗೆ ಬಿಟ್ಟಾಗ
ಬೆತ್ತಲೆಗುಡುಗುವ, ಸುಡುವ, ತೋಯುವ, ನೋಯುವ ಕಷ್ಟ
ಭಯಂಕರ,
ಆದರೂ ಅದರ ಕೈ ಕಾಲು ಹಿಡಿದು ಕಾಡಿ ಬೇಡಿದ್ದರಿಂದ
ಪರಿಸ್ಥಿತಿ ಸ್ವಲ್ಪ ಸುಧಾರಿಸುತ್ತಿದೆ

ಎರವಲೇನೂ ಇಲ್ಲವಾದರೂ
ಮಾಸಲು ತೇಪೆಯ ಬಟ್ಟೆಗಳೀಗಿಲ್ಲವಾದರೂ
ಬಿಗಿತ ಜೋಲಾಟಗಳೇನೂ ತಪ್ಪಿಲ್ಲ,
ಇಷ್ಟು ಇರುವುದು ಸಹಜ ಸ್ವಾಮೀ ಎನ್ನುತ್ತದೆ
ಇತ್ತೀಚೆಗೆ ಬಂದ ಪರದೇಶಿ ಬಟ್ಟೆಗಳಬ್ಬರದಲ್ಲಂತೂ
ಅಳತೆಕೋಲು ದಿಕ್ಕೂ ತಪ್ಪಿದಂತಾಗಿದೆ. ಇವುಗಳಲ್ಲಿ
ನನ್ನ ಮಾನ ಮುಚ್ಚುವ ಅಳತೆಗೊಗ್ಗುವ ಬಟ್ಟೆ ಸಿಗುವುದೇ
ಕಠಿಣವಾಗಿದೆ
ಬಟ್ಟೆಯೇ ಇಲ್ಲದೆ ನಾನೇ ಎಲ್ಲಿ ಪರದೇಶಿಯಾಗಿಬಿಡುವೆನೋ ಎಂಬ
ಭಯವಾವರಿಸಿದೆ
*****
(೨೨-೭-೧೯೭೩)

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...