Home / ಬಾಲ ಚಿಲುಮೆ / ಕವಿತೆ / ಎಲ್ಲದಾನವ್ನು ಮನಸ್ಯಾ

ಎಲ್ಲದಾನವ್ನು ಮನಸ್ಯಾ

ಈ ಜಂಗಳ್ಯಾಗೆ ಎಲ್ಲದಾನವ್ನು ಮನಸ್ಯಾ ಅಂಬೋನು
ಕೆಲವು ಕಾಗದಾ ತಿಂಬೋ ಕತ್ತೆಗ್ಳು
ಕೆಲವು ಮೈಗೆ ಮಣ್ಣುಮೆತ್ತಿಗೆಂಡು ಮಣ್ಣುತಿಂಬೋ ಮುಕ್ಕುಗ್ಳು
ಕೆಲವು ಹೆಣಾತಿನ್ನೋ ಹದ್ದುಗಳು
ಕೆಲವು ಮಾಂಸಾ ಮೂಸೋ ನಾಯಿಗಳು
ಕೆಲವು ದುರ್ವಾಸನೆ ಗಟಾರದೊಳಗೇ ಹೊರಳೋ ಹಂದಿಗ್ಳು

ಕೆಲವೋ ಸತ್ತೋರ ಗೋರಿಗೆ ಬಟ್ಟೆ ಸುತ್ತಿ
ಸುತ್ತಿ ಬಳಸೋ ಮರುಳುಗುಳು
ಕೆಲವು ಗುಡಾಣಗಳಾದರೆ ಕೆಲವು ಗುಬ್ಬಚ್ಚಿ ಗೂಡುಗಳು
ಕೆಲವು ಕಿವಿಯಿಲ್ಲದ ಸೋರೆಬಾಯಿಗ್ಳು
ಕೆಲವು ಬಣ್ಣ ಬಣ್ಣ ಬದಲಸೋ ಊಸರವಳ್ಳಿಗುಳು
ಕೆಲವು ಸಣ್ಣ ಸಣ್ಣ ಪ್ರಾಣಿ ತಿನ್ನೋ ದಾಸರಹಾವುಗಳು

ಕೆಲವು ಹೊಟ್ಟೇನ ಕೈಯಾಗಿಟ್ಟುಗೊಂಡು
ಚಾಚಿರೊ ತಟ್ಟೆಗಳು

ಕೆಲವು ಕುಂಡಿ ತೊಳಿಯೊ ನೀರ್ನೆ ತೀರ್ಥಾಂತ
ಕುಡಿಯೊ ಕಿಲುಬು ಸೌಟುಗ್ಳು
ಕೆಲವು ಚಿಗುರೋದೂ ಬ್ಯಾಡಾ ಬಗ್ಗೋದೂ ಬ್ಯಾಡಾ
ಅಂಬೋ ಮೋಟುಗುಳು
ಕೆಲವು ತಲಿಯಿಲ್ದೆ ಆಡ್ಡಾದಿಡ್ಡಿ ನಡೆಯೊ ಮುಂಡುಗ್ಳು
ಕೆಲವು ಬಾಯ್ಬಾಯ್ಬಡಕೊಳ್ಳೊ, ಕೈಕಾಲಿಲ್ಲದ ರುಂಡುಗ್ಳು
ಹೃದಯಾನ ಬಾಯಾಗೆ ಹಿಂಡಿ ಹಾಡೋವು ಕೆಲವು
ಅದನ್ನೆ ಎಲುಬಿಂದ ಚುಚ್ಚಿ ರಕ್ತ ತಗದು
ಬಿಳಿಕರಿಮಾಡೋವು ಕೆಲವು

ವಾತಾ ಪಿತ್ಥ ಕಫ ನೆಣ ನರಾ ಏನೇನೋ ಕಾರಿಕೊಂಡು
ಸ್ವಚ್ಛನೆಲ್ಲ ಕೆಡಿಸಿ ಕಲೆಕಲೆ ಮಾಡೋವು ಕೆಲವು
ಕೆಲವು ಹೂವಿನಿಂದ ಕಲ್ಲನ್ನು ಕುಟ್ಟಿಕುಟ್ಟಿ ನಾಳಿನ
ಮೂರ್ತಿಗಳ ಮಾಡ್ತೀವಿ
ಅಂಬೋ ಬೆಪ್ಪುಗಳು

ಹೀಗೆ ಎಲ್ಲಿ ನೋಡಿದ್ರೂ ವಿರೂಪ ವಿಕೃತ ವೇಷಗಳು
ಇಂಥಾ ಗಲ್ಯಾಗೆ ಎಲ್ಲದಾನವ್ನು ಮನಸ್ಯಾ
ಕೈಕಾಲು ತಲೆ ಎದೆ ಬಟ್ಟೆ ರಟ್ಟೆ ಬಾಯಿ ಬೆಳ್ಳು ಕಳ್ಳು ಕಣ್ಣು
ಎಲ್ಲಾ ಸರಿಯಾಗಿರೋ ಮನಸ್ಯಾ
*****
(೨೧-೯-೭೭)

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...