Home / ಕವನ / ಕವಿತೆ / ಪ್ರತಿಮೆಯಾದರು

ಪ್ರತಿಮೆಯಾದರು

ಯಾರಿಗೂ ಕೇಳಿಲ್ಲ
ಹೇಳಿಲ್ಲ
ನಿಂತ ನಿಲುವಲಿ
ಎಲ್ಲರಿಗೂ ಕಾಣುವಂತೇ…
ವಿಧಾನಸೌಧದಾ ಎದುರಲ್ಲೇ…
ಪ್ರತಿಮೆಯಾದರು…
ಈ ನಮ್ಮ ಅಂಬೇಡ್ಕರ್‍.


ಪ್ರತಿಮೆಗೂ ಮಿಗಿಲು
ಮುಗಿಲು, ಹಗಲು-
ವಿಸ್ಮಯ ಪ್ರತಿಭೆ ಅವರದು!
ಮಲ್ಲಿಗೆ ಮನಸನು, ವಿಶಾಲ ಹೃದಯವನು…
ಕಲ್ಲು ಮಾಡಿ,
ಕೇರಿಗೆ ಸೀಮಿತ ಮಾಡಿ,
ಪ್ರತಿಮೆ ನಿಲ್ಲಿಸಿದವರು ನಾವು!!


ಸ್ವಾರ್ಥಕೆ ನಿತ್ಯ ಎಳೆ ಎಳೆ ತಂದೂ…
ಸುಮ್ಮ ಸುಮ್ಮನೆ ಹಿಗ್ಗಿಸಲೋಗಿ,
ತನ್ನ ಜನ, ತನಗೇ ಮಾನ, ಹರಾಜಾಕಿದ್ದು,
ಕೈ, ಕೈ, ಕಾಲು, ಕಾಲು, ಕನ್ನಡ್ಕ ತೆಗೆವರೆಂದೂ…
ಈ ಮೊದಲು ತಿಳಿದಿದ್ದರೆ,
ಪ್ರತಿಮೆಯಾಗುವದಾ ಬಿಟ್ಟು,
ಸ್ವರ್ಗ ಸೇರುತ್ತಿದ್ದರು…?!


ಸೂರ್‍ಯ ಕೋಟಿನ
ಬೆಳೆಕ್ಹೆಂಚು ಮಾಡಿ,
ಬಲು ಸಣ್ಣರಾದವರು
ಮೆಚ್ಚಿಸಲ್ಹೋಗಿದ್ದ ಕಂಡು-
ಹೌಹಾರಿ ನಿಂತಲ್ಲೇ…
ವಿಧಾನಸೌಧದ ಎದುರಲ್ಲೇ…
ಪ್ರತಿಮೆಯಾದರು…
ಈ ನಮ್ಮ ಅಂಬೇಡ್ಕರ್‍.


ಜಗದಗಲ
ಮುಗಿಲಗಲವನು!
ಬರೀ ಕೇರಿಗೇ…
ಸೀಮಿತಗೊಳಿಸಿದ್ದಕ್ಕೆ
ಮಮ್ಮಲ ಮರುಗಿ,
ಕೊರಗಿ,
ನಿಂತಲ್ಲೇ…
ವಿಧಾನಸೌಧದಾ ಮುಂದೆ:
ಪ್ರತಿಮೆಯಾದರು…
ಈ ನಮ್ಮ ಅಂಬೇಡ್ಕರ್‍.


ಪೂರ್ಣ ಮುಖಿ
ಚಂದ್ರವದನನ-
ಈ ಪುಟ್ಟ ಕನ್ನಡಿಯೊಳಗೆ,
ತೋರಿದ್ದ ಕಂಡು:
ಕೆಂಡಮಂಡಲವಾಗಿ
ನಿಂತಲ್ಲೇ…
ವಿಧಾನಸೌಧದ ಎದುರಲ್ಲೇ…
ಪ್ರತಿಮೆಯಾದರು…
ಈ ನಮ್ಮ ಅಂಬೇಡ್ಕರ್‍.


ನಮ್ಮವರು: ಮೇಲಿನವರ ಅಂಜಿಸಲು…
ಹೇಗೆಗೋ ಬಿಂಬಿಸಲ್ಹೋಗಿ…
ಸ್ವಯಂ ಪ್ರಭೆ ಅರಿದೆ,
ಬಿಂಬವ ಪ್ರತಿಬಿಂಬವಾಗಿಸಿದ್ದು ಕಂಡೂ
ಮೌನದಲಿ,
ಪ್ರತಿಮೆಯಾದರು…
ವಿಧಾನಸೌದದ ಎದುರಲ್ಲೇ…
ಈ ನಮ್ಮ ಅಂಬೇಡ್ಕರ್‍.


ಪ್ರತಿ ಹೆಜ್ಜೆ ಹೆಜ್ಜೆಗೂ…
ವಾದ, ಪ್ರತಿವಾದಕೂ…
ಈ ನಮ್ಮ ಅಂಬೇಡ್ಕರ್‍ ಬೇಕು!
ಭಾರತದ ಸಂವಿಧಾನ ಬೇಕೇ ಬೇಕು!
ಬದುಕಿದ್ದಾಗ: ಸವರ್ಣೀಯರ ಕಾಟ…
ಮೀಸಲಾತಿಯ ಪರದಾಟ…
ಬೇಸತ್ತು, ಬೌದ್ಧ ಧರ್ಮ ಸ್ವೀಕಾರ!!
ಸತ್ತಾಗ: ಈಗ ತನ್ನವರ ಕಾದಾಟ!
ಹೊಲೆ, ಮಾದಿಗನೆಂಬ ಜಗ್ಗಾಟ…
ಸಹಿಸಲಾಗದೆ… ಪ್ರತಿಮೆಯಾದರು!!
ಈಗ ಒಡೆಬಾರದಶ್ಟೇ…
ಪ್ರತಿಮೆಯನು…
ಪ್ರತಿಭೆಯನು…
ಭಾಜನು,
ಭುವಿ,
ಬೆಳಕನ್ನುಽಽ…
ಅಶ್ಟೇ…ಽಽ
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...