Home / ಕವನ / ಕವಿತೆ / ಇಂಕದವನ ಕವಿತೆ

ಇಂಕದವನ ಕವಿತೆ

‘ಸರ್ ಕವಿತೆ ಸಿರಿಯಸ್ ಅಗಿ ಇರಬೇಕಾ
ಅಥವಾ ಲೈಽಟ್ ಆಗಿ ಓದಿಬಿಡಬೇಕಾ…
ಅಂತ
ಅಪರೂಪಕ್ಕೆ ಸ್ಟೇಜ ಹತ್ತಿದ ಕವಿ ಸುಂದರೇಶು
ಎದುರುಸಾಲಿನಲ್ಲಿ ಕುಳಿತ
ತನ್ನ ೪-೫ ಸಂಕಲನಕ್ಕೆ ಮುನ್ನುಡಿ ಬರೆದ
ವಗೈರೆ ವಗೈರೆ ಕವಿಗಳಿಗೆ
ಚುಚ್ಚಿ ಚುಚ್ಚಿ ಎರಡೆರಡು ಸಲ ಕೇಳಿಯೇ ಬಿಟ್ಟ.

– ಬಂಡಾಯದವ ಬಂಡಾಯ ಎಬ್ಬಿಸು ಅಂದಿದ್ದ
– ನವ್ಯದವ ಸರಳ ಸೂಕ್ಷ್ಮವಾಗಿ ಹೇಳು ಅಂದಿದ್ದ
– ನವೋದಯದವ ಒಂದಿಷ್ಟು ಉಲ್ಟಾಪಲ್ಟಾ ಶಬ್ದಗಳನ್ನಿಡು ಅಂದಿದ್ದ
– ದಲಿತರವ ಹೇಳಿದ್ದ,
ಲೈಟ್ ಆಗಿಯೂ ಬೇಡ ಸಿರಿಯಸ್ಸಾಗಿಯೂ ಬೇಡ
ಒಬ್ಬೊಬ್ಬರನ್ನ ಅಟ್ಯಾಕ್ ಅಟ್ಯಾಕ್ ಮಾಡು ಅಂದಿದ್ದ
– ಸ್ತ್ರೀವಾದಿಯೊಬ್ಬಳು,
ಹೆಣ್ಣಿನ ಸೌಂದರ್ಯ ಅದೆಷ್ಟು ವರ್ಣಿಸಿದ್ದಿಯಪ್ಪಾ!
ಎಲ್ಲಾ ಸಮಸಮವಾಗಿಯೇ ಬರೆ, ಛೂ ಬಿಟ್ಟದ್ದಳು.

ಸುಂದರೇಶು ಸುಸ್ತಾಗಿದ್ದ
ಅವರವರ ಗುಣ ನಡತೆಗಳ
ಮುನ್ನುಡಿ ಹಿನ್ನುಡಿಗಳ ಸಲಹೆ ಓದಿ ಓದಿ.

ಆದರೂ ಕವಿಗೋಷ್ಠಿಯ ಅವಕಾಶ ಬಿಟ್ಟಾನೆಯೇ!
ಎಲ್ಲರ ಮನ ಗೆಲ್ಲಲೋ ಕೊಲ್ಲಲೋ
‘ಅವರವರ ಭಕುತಿಗೆ ಒಲೆಯುತಿಹನು
ಶಿವ’ ಎಂಬಂತೆ
ಅವರೆಲ್ಲ ಬಯಸಿದ ಮಾತು ಕತೆಗಳನು
ಝಾಲಾಡಿಸಿ ಬೇಸತ್ತು
ಕೊನೆಗೆ
ಎಲ್ಲರ ಸಲಹೆ ಸೂಚನೆ ಧಿಕ್ಕರಿಸಿ
ತಾನೂ ಒಬ್ಬ ವಿಶೇಷತೆ ಉಳಿಸಿಕೊಳ್ಳುವ
ಇಂಕದವನಾಗಿ (ಇಂ+ ಕ, ಇಂಗ್ಲಿಷ್‌+ಕನ್ನಡ)
ಇಂಕದ ಪದ್ಯ ಓದುತ್ತ
ಒಬೊಬ್ಬರನ್ನೇ ದುರುಗುಟ್ಟುತ್ತಿದ್ದ.
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...