Home / ಕವನ / ಕವಿತೆ / ಇಂಕದವನ ಕವಿತೆ

ಇಂಕದವನ ಕವಿತೆ

‘ಸರ್ ಕವಿತೆ ಸಿರಿಯಸ್ ಅಗಿ ಇರಬೇಕಾ
ಅಥವಾ ಲೈಽಟ್ ಆಗಿ ಓದಿಬಿಡಬೇಕಾ…
ಅಂತ
ಅಪರೂಪಕ್ಕೆ ಸ್ಟೇಜ ಹತ್ತಿದ ಕವಿ ಸುಂದರೇಶು
ಎದುರುಸಾಲಿನಲ್ಲಿ ಕುಳಿತ
ತನ್ನ ೪-೫ ಸಂಕಲನಕ್ಕೆ ಮುನ್ನುಡಿ ಬರೆದ
ವಗೈರೆ ವಗೈರೆ ಕವಿಗಳಿಗೆ
ಚುಚ್ಚಿ ಚುಚ್ಚಿ ಎರಡೆರಡು ಸಲ ಕೇಳಿಯೇ ಬಿಟ್ಟ.

– ಬಂಡಾಯದವ ಬಂಡಾಯ ಎಬ್ಬಿಸು ಅಂದಿದ್ದ
– ನವ್ಯದವ ಸರಳ ಸೂಕ್ಷ್ಮವಾಗಿ ಹೇಳು ಅಂದಿದ್ದ
– ನವೋದಯದವ ಒಂದಿಷ್ಟು ಉಲ್ಟಾಪಲ್ಟಾ ಶಬ್ದಗಳನ್ನಿಡು ಅಂದಿದ್ದ
– ದಲಿತರವ ಹೇಳಿದ್ದ,
ಲೈಟ್ ಆಗಿಯೂ ಬೇಡ ಸಿರಿಯಸ್ಸಾಗಿಯೂ ಬೇಡ
ಒಬ್ಬೊಬ್ಬರನ್ನ ಅಟ್ಯಾಕ್ ಅಟ್ಯಾಕ್ ಮಾಡು ಅಂದಿದ್ದ
– ಸ್ತ್ರೀವಾದಿಯೊಬ್ಬಳು,
ಹೆಣ್ಣಿನ ಸೌಂದರ್ಯ ಅದೆಷ್ಟು ವರ್ಣಿಸಿದ್ದಿಯಪ್ಪಾ!
ಎಲ್ಲಾ ಸಮಸಮವಾಗಿಯೇ ಬರೆ, ಛೂ ಬಿಟ್ಟದ್ದಳು.

ಸುಂದರೇಶು ಸುಸ್ತಾಗಿದ್ದ
ಅವರವರ ಗುಣ ನಡತೆಗಳ
ಮುನ್ನುಡಿ ಹಿನ್ನುಡಿಗಳ ಸಲಹೆ ಓದಿ ಓದಿ.

ಆದರೂ ಕವಿಗೋಷ್ಠಿಯ ಅವಕಾಶ ಬಿಟ್ಟಾನೆಯೇ!
ಎಲ್ಲರ ಮನ ಗೆಲ್ಲಲೋ ಕೊಲ್ಲಲೋ
‘ಅವರವರ ಭಕುತಿಗೆ ಒಲೆಯುತಿಹನು
ಶಿವ’ ಎಂಬಂತೆ
ಅವರೆಲ್ಲ ಬಯಸಿದ ಮಾತು ಕತೆಗಳನು
ಝಾಲಾಡಿಸಿ ಬೇಸತ್ತು
ಕೊನೆಗೆ
ಎಲ್ಲರ ಸಲಹೆ ಸೂಚನೆ ಧಿಕ್ಕರಿಸಿ
ತಾನೂ ಒಬ್ಬ ವಿಶೇಷತೆ ಉಳಿಸಿಕೊಳ್ಳುವ
ಇಂಕದವನಾಗಿ (ಇಂ+ ಕ, ಇಂಗ್ಲಿಷ್‌+ಕನ್ನಡ)
ಇಂಕದ ಪದ್ಯ ಓದುತ್ತ
ಒಬೊಬ್ಬರನ್ನೇ ದುರುಗುಟ್ಟುತ್ತಿದ್ದ.
*****

Tagged:

Leave a Reply

Your email address will not be published. Required fields are marked *

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...