Home / ಕವನ / ಕವಿತೆ / ಇಂಕದವನ ಕವಿತೆ

ಇಂಕದವನ ಕವಿತೆ

‘ಸರ್ ಕವಿತೆ ಸಿರಿಯಸ್ ಅಗಿ ಇರಬೇಕಾ
ಅಥವಾ ಲೈಽಟ್ ಆಗಿ ಓದಿಬಿಡಬೇಕಾ…
ಅಂತ
ಅಪರೂಪಕ್ಕೆ ಸ್ಟೇಜ ಹತ್ತಿದ ಕವಿ ಸುಂದರೇಶು
ಎದುರುಸಾಲಿನಲ್ಲಿ ಕುಳಿತ
ತನ್ನ ೪-೫ ಸಂಕಲನಕ್ಕೆ ಮುನ್ನುಡಿ ಬರೆದ
ವಗೈರೆ ವಗೈರೆ ಕವಿಗಳಿಗೆ
ಚುಚ್ಚಿ ಚುಚ್ಚಿ ಎರಡೆರಡು ಸಲ ಕೇಳಿಯೇ ಬಿಟ್ಟ.

– ಬಂಡಾಯದವ ಬಂಡಾಯ ಎಬ್ಬಿಸು ಅಂದಿದ್ದ
– ನವ್ಯದವ ಸರಳ ಸೂಕ್ಷ್ಮವಾಗಿ ಹೇಳು ಅಂದಿದ್ದ
– ನವೋದಯದವ ಒಂದಿಷ್ಟು ಉಲ್ಟಾಪಲ್ಟಾ ಶಬ್ದಗಳನ್ನಿಡು ಅಂದಿದ್ದ
– ದಲಿತರವ ಹೇಳಿದ್ದ,
ಲೈಟ್ ಆಗಿಯೂ ಬೇಡ ಸಿರಿಯಸ್ಸಾಗಿಯೂ ಬೇಡ
ಒಬ್ಬೊಬ್ಬರನ್ನ ಅಟ್ಯಾಕ್ ಅಟ್ಯಾಕ್ ಮಾಡು ಅಂದಿದ್ದ
– ಸ್ತ್ರೀವಾದಿಯೊಬ್ಬಳು,
ಹೆಣ್ಣಿನ ಸೌಂದರ್ಯ ಅದೆಷ್ಟು ವರ್ಣಿಸಿದ್ದಿಯಪ್ಪಾ!
ಎಲ್ಲಾ ಸಮಸಮವಾಗಿಯೇ ಬರೆ, ಛೂ ಬಿಟ್ಟದ್ದಳು.

ಸುಂದರೇಶು ಸುಸ್ತಾಗಿದ್ದ
ಅವರವರ ಗುಣ ನಡತೆಗಳ
ಮುನ್ನುಡಿ ಹಿನ್ನುಡಿಗಳ ಸಲಹೆ ಓದಿ ಓದಿ.

ಆದರೂ ಕವಿಗೋಷ್ಠಿಯ ಅವಕಾಶ ಬಿಟ್ಟಾನೆಯೇ!
ಎಲ್ಲರ ಮನ ಗೆಲ್ಲಲೋ ಕೊಲ್ಲಲೋ
‘ಅವರವರ ಭಕುತಿಗೆ ಒಲೆಯುತಿಹನು
ಶಿವ’ ಎಂಬಂತೆ
ಅವರೆಲ್ಲ ಬಯಸಿದ ಮಾತು ಕತೆಗಳನು
ಝಾಲಾಡಿಸಿ ಬೇಸತ್ತು
ಕೊನೆಗೆ
ಎಲ್ಲರ ಸಲಹೆ ಸೂಚನೆ ಧಿಕ್ಕರಿಸಿ
ತಾನೂ ಒಬ್ಬ ವಿಶೇಷತೆ ಉಳಿಸಿಕೊಳ್ಳುವ
ಇಂಕದವನಾಗಿ (ಇಂ+ ಕ, ಇಂಗ್ಲಿಷ್‌+ಕನ್ನಡ)
ಇಂಕದ ಪದ್ಯ ಓದುತ್ತ
ಒಬೊಬ್ಬರನ್ನೇ ದುರುಗುಟ್ಟುತ್ತಿದ್ದ.
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...