Home / ಕವನ / ಕವಿತೆ / ವಾರಿಜಮುಖಿ ದೊಡ್ಡಶಹರ ಹುಬ್ಬಳ್ಳಿಯೊಳು

ವಾರಿಜಮುಖಿ ದೊಡ್ಡಶಹರ ಹುಬ್ಬಳ್ಳಿಯೊಳು

ವಾರಿಜಮುಖಿ ದೊಡ್ಡಶಹರ ಹುಬ್ಬಳ್ಳಿಯೊಳು
ಕೋರಿ ಗಂಗಪ್ಪ ಸಾವುಕಾರನು ||ಪ||

ಧಾರುಣಿಯೊಳು ಸಣ್ಣ ಊರು ಕರಡೀಗುಡ್ಡ
ಹಾರೈಸುತ ವ್ಯವಹಾರಕ್ಹೋಗಿ ಒಬ್ಬ
ವೀರ ಜಂಗಮನ ಹೇಣತಿ ಕೆಣಕಲು
ಮಾರಿಗೋಲಿಯೊಳು ಮರಣಹೊಂದಿದಾ ||ಅ.ಪ.||

ಸನುಮತಿಯಲ್ಲಿ ಸಾಧು ಸಜ್ಜನ ಸಂಪ್ರೀತನು
ಧನ ಸಿರಿ ಕನಕ ವಸ್ತು ಕೈಗೊಂಡು ಮೆರೆವ ಸಂಪ್ರೀತನು
ಗಣಗಣರತ್ನ ವಾಣಿಜ್ಯ ಕುಲಜಾತನು
ಅನುದಿನ ಕೂಡಿ ನಡೆವ ಸ್ನೇಹಿತ ಮಾಂತಯ್ಯನ ಪ್ರೀತನು
ಏನು ಹೇಳಲಿ ತನಗಾಗುವ ಹಾನಿಯು
ಕಣಗಾಣದೆ ಕೆಟ್ಟ ಹೆಣ್ಣಿನ ಸಂಗದಿ
ಮುಣ್ಣುಗೂಡಿಸಿ ಮಾಯದ ಉರ್ಲಗಣ್ಣಿಗೆ
ವಣ ಅಪಮೃತ್ಯುವಿನಿಂದ ಸತ್ತುಹೋದನೈ ||೧||

ಜಡಬುದ್ಧಿಗೆ ಜನ್ಮಾಂತರ ವಿಧಿಕೃತ ಕೂಡಿತು
ತಡೆಯದೆ ವಿಷಯದಿ ಮಾಯವ
ಒಡಲೊಳ್ ಮತ್ಸರ ಮೂಡಿತು
ಅಡಗಿಮಾಡಿ ಉಣಬಸಬೇಕೆಂಬುದು ಕಲಹವ ದೂಡಿತು
ಪ್ರೀತಿಯೆಡೆಗೊಂಡು ಅರಿವಿಲ್ಲದ ಕಲಹಕ ದೂಡಿತು
ನಡೆತಪ್ಪಿತುಯೆಂದೆನೆನುತಲೆ ಜಂಗಮ
ಕಡುರೋಷದಿ ಹಿಡಿದೆದ್ದು ಖಡ್ಲದಿಂ
ಕಡಿಯಲು ಪಕ್ಕದಿ ಎಲುಬು ಮುರಿದು ಶಿರ
ಸಿಡಿಮಿಡಿಗೊಳ್ಳುತಲಿ ಪೊಡವಿಗುದುರಿತೌ ||೨||

ಕೆಲ ಬಲದವರೆಚ್ಚಿಸಲು ಪೋಲೀಸ ಕೇಳಿದಾ
ಅಳವಳಗೊಳುತಲಿ ಮನದೊಳಗತಿ ಕೋಪವ ತಾಳಿದಾ
ಬಲುಗಡ ಕುಲಕರ್ಣಿಗಳ ಕರಿಯಂತ್ಹೇಳಿದಾ
ಒಳಗಿಂದೊಳಗೆ ಬರೆದು ಹುಜೂರರಿಗೆ ರೀಪೋರ್ಟವ ಮಾಡಿದಾ
ಒಳಮಾತಿಲೆ ಅಯ್ಯನ ಕೈ ಖಡ್ಗವ ಕೆಳಗಿಳುಹಿಸಿ
ಎಳೆದೊಯ್ದು ಚಾವಾಡಿಗೆ ಸೆಳೆದು ಪಿಚಂಡಿಯ ಬಿಗಿದು ಬೇಗನೆ
ಕಳುಹಿಸಿ ಸುದ್ದಿ ಹುಬ್ಬಳ್ಳಿಯ ಸ್ಥಳಕ್ಕೆ ||೩||

ಸುದ್ದಿ ಕೇಳಿ ಹುಚ್ಚಪ್ಪತಮ್ಮ ಅತಿ ದುಃಖದಿ ಎದಿ ಬಾಯಿ
ಗುದ್ದಿಕೊಳ್ಳುತ ಬಿದ್ದ್ಹೊರಳಿದ ಭೂಮಿಗೆ ಶೋಕದಿ ಸತಿ ಸುತ-
ರಿದ್ದರಾತ್ಮ ಬಾಂಧವರು ಬಂದರಲ್ಲೇ ರೌದ್ರದಿ-
ಸಧ್ಯಕ್ಕ್ಹೋಗಿ ಹೆಣ ಹುಗಿಯಲು ನಡೆದರು ದಗ್ಧದೀ
ಮಧ್ಯರಾತ್ರಿಯಲೆದ್ದು ಶ್ರವಕ ಮಣ್ಣ
ಮುದ್ದಿಯೊಳಗೆ ಮುಚ್ಚಿಟ್ಟ ವಾರ್ತಿಯದು
ಚೋದ್ಯವಾಯಿತು ಶಿಶುನಾಳಧೀಶನಿಗೆ
ತಿದ್ದಿ ನಿನಗೆ ನಾ ತಿಳಿಸಿದೆ ಗೆಳತಿ ||೪||

****

 

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...