Home / ಕವನ / ಕವಿತೆ / ವಾರಿಜಮುಖಿ ದೊಡ್ಡಶಹರ ಹುಬ್ಬಳ್ಳಿಯೊಳು

ವಾರಿಜಮುಖಿ ದೊಡ್ಡಶಹರ ಹುಬ್ಬಳ್ಳಿಯೊಳು

ವಾರಿಜಮುಖಿ ದೊಡ್ಡಶಹರ ಹುಬ್ಬಳ್ಳಿಯೊಳು
ಕೋರಿ ಗಂಗಪ್ಪ ಸಾವುಕಾರನು ||ಪ||

ಧಾರುಣಿಯೊಳು ಸಣ್ಣ ಊರು ಕರಡೀಗುಡ್ಡ
ಹಾರೈಸುತ ವ್ಯವಹಾರಕ್ಹೋಗಿ ಒಬ್ಬ
ವೀರ ಜಂಗಮನ ಹೇಣತಿ ಕೆಣಕಲು
ಮಾರಿಗೋಲಿಯೊಳು ಮರಣಹೊಂದಿದಾ ||ಅ.ಪ.||

ಸನುಮತಿಯಲ್ಲಿ ಸಾಧು ಸಜ್ಜನ ಸಂಪ್ರೀತನು
ಧನ ಸಿರಿ ಕನಕ ವಸ್ತು ಕೈಗೊಂಡು ಮೆರೆವ ಸಂಪ್ರೀತನು
ಗಣಗಣರತ್ನ ವಾಣಿಜ್ಯ ಕುಲಜಾತನು
ಅನುದಿನ ಕೂಡಿ ನಡೆವ ಸ್ನೇಹಿತ ಮಾಂತಯ್ಯನ ಪ್ರೀತನು
ಏನು ಹೇಳಲಿ ತನಗಾಗುವ ಹಾನಿಯು
ಕಣಗಾಣದೆ ಕೆಟ್ಟ ಹೆಣ್ಣಿನ ಸಂಗದಿ
ಮುಣ್ಣುಗೂಡಿಸಿ ಮಾಯದ ಉರ್ಲಗಣ್ಣಿಗೆ
ವಣ ಅಪಮೃತ್ಯುವಿನಿಂದ ಸತ್ತುಹೋದನೈ ||೧||

ಜಡಬುದ್ಧಿಗೆ ಜನ್ಮಾಂತರ ವಿಧಿಕೃತ ಕೂಡಿತು
ತಡೆಯದೆ ವಿಷಯದಿ ಮಾಯವ
ಒಡಲೊಳ್ ಮತ್ಸರ ಮೂಡಿತು
ಅಡಗಿಮಾಡಿ ಉಣಬಸಬೇಕೆಂಬುದು ಕಲಹವ ದೂಡಿತು
ಪ್ರೀತಿಯೆಡೆಗೊಂಡು ಅರಿವಿಲ್ಲದ ಕಲಹಕ ದೂಡಿತು
ನಡೆತಪ್ಪಿತುಯೆಂದೆನೆನುತಲೆ ಜಂಗಮ
ಕಡುರೋಷದಿ ಹಿಡಿದೆದ್ದು ಖಡ್ಲದಿಂ
ಕಡಿಯಲು ಪಕ್ಕದಿ ಎಲುಬು ಮುರಿದು ಶಿರ
ಸಿಡಿಮಿಡಿಗೊಳ್ಳುತಲಿ ಪೊಡವಿಗುದುರಿತೌ ||೨||

ಕೆಲ ಬಲದವರೆಚ್ಚಿಸಲು ಪೋಲೀಸ ಕೇಳಿದಾ
ಅಳವಳಗೊಳುತಲಿ ಮನದೊಳಗತಿ ಕೋಪವ ತಾಳಿದಾ
ಬಲುಗಡ ಕುಲಕರ್ಣಿಗಳ ಕರಿಯಂತ್ಹೇಳಿದಾ
ಒಳಗಿಂದೊಳಗೆ ಬರೆದು ಹುಜೂರರಿಗೆ ರೀಪೋರ್ಟವ ಮಾಡಿದಾ
ಒಳಮಾತಿಲೆ ಅಯ್ಯನ ಕೈ ಖಡ್ಗವ ಕೆಳಗಿಳುಹಿಸಿ
ಎಳೆದೊಯ್ದು ಚಾವಾಡಿಗೆ ಸೆಳೆದು ಪಿಚಂಡಿಯ ಬಿಗಿದು ಬೇಗನೆ
ಕಳುಹಿಸಿ ಸುದ್ದಿ ಹುಬ್ಬಳ್ಳಿಯ ಸ್ಥಳಕ್ಕೆ ||೩||

ಸುದ್ದಿ ಕೇಳಿ ಹುಚ್ಚಪ್ಪತಮ್ಮ ಅತಿ ದುಃಖದಿ ಎದಿ ಬಾಯಿ
ಗುದ್ದಿಕೊಳ್ಳುತ ಬಿದ್ದ್ಹೊರಳಿದ ಭೂಮಿಗೆ ಶೋಕದಿ ಸತಿ ಸುತ-
ರಿದ್ದರಾತ್ಮ ಬಾಂಧವರು ಬಂದರಲ್ಲೇ ರೌದ್ರದಿ-
ಸಧ್ಯಕ್ಕ್ಹೋಗಿ ಹೆಣ ಹುಗಿಯಲು ನಡೆದರು ದಗ್ಧದೀ
ಮಧ್ಯರಾತ್ರಿಯಲೆದ್ದು ಶ್ರವಕ ಮಣ್ಣ
ಮುದ್ದಿಯೊಳಗೆ ಮುಚ್ಚಿಟ್ಟ ವಾರ್ತಿಯದು
ಚೋದ್ಯವಾಯಿತು ಶಿಶುನಾಳಧೀಶನಿಗೆ
ತಿದ್ದಿ ನಿನಗೆ ನಾ ತಿಳಿಸಿದೆ ಗೆಳತಿ ||೪||

****

 

Tagged:

Leave a Reply

Your email address will not be published. Required fields are marked *

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...