Home / ಲೇಖನ / ಇತರೆ / ಗಣ್ಯರು ಯಾರು ?

ಗಣ್ಯರು ಯಾರು ?

ಪ್ರಿಯ ಸಖಿ,
ಅವರ ಕಾರು ಭರ್ರನೆ ಓಡುತ್ತಿದೆ. ರಸ್ತೆ ಮಧ್ಯದಲ್ಲಿ ಸೌದೆ ಹೊರೆ ಕಟ್ಟು ಬಿಚ್ಚಿಕೊಂಡು ಚೆಲ್ಲಾಪಿಲ್ಲಿಯಾಗಿಬಿಟ್ಟಿದೆ. ಇದನ್ನು ಕಂಡ ಅವರು ಗಕ್ಕನೆ ನಿಲ್ಲಿಸುತ್ತಾರೆ. ಕಾರಿನಿಂದಿಳಿದ ಅವರು ಆ ಮುದುಕನಿಗೆ ಸೌದೆಯನ್ನು ಆಯ್ದು ಹೊರೆ ಕಟ್ಟಲು ಸಹಾಯ ಮಾಡುತ್ತಾರೆ. ಆ ಹೊರೆಯನ್ನು ತಮ್ಮ ಡಿಕ್ಕಿಯಲ್ಲಿರಿಸಿ ಆ ಮುದುಕನನ್ನು ಅವನು ಬೇಡವೆನ್ನುತ್ತಿದ್ದರೂ ಕೇಳದೆ ಕಾರಿನಲ್ಲಿ ಕೂರಿಸಿಕೊಂಡು ಅವನ ಗಮ್ಯವನ್ನು ತಲುಪಿಸಿ ಅವರು ತಮ್ಮ ಕೆಲಸಕ್ಕೆ ಹೋಗುತ್ತಾರೆ.

ಅವರು ಆ ಊರಿನ ಅತ್ಯಂತ ಗಣ್ಯವ್ಯಕ್ತಿ ಸರ್ಕಾರದಲ್ಲಿ ಮಂತ್ರಿ ಪದವಿಯನ್ನು ನಿರ್ವಹಿಸುತ್ತಿರುವವರು. ಆದರೆ ಅವರಿಗೆ ಅದರ ಬಗ್ಗೆ ಯಾವುದೇ ಅಹಂಕಾರ, ಗರ್ವಗಳಿಲ್ಲ. ಸಭೆಯಿರಲಿ, ಸಮಾರಂಭವಿರಲಿ, ಮನೆಯಲ್ಲಾಗಲಿ ಅತ್ಯಂತ ಸಾಮಾನ್ಯ ಮನುಷ್ಯನಂತೆ ಅವರ ವೇಷಭೂಷಣ ಹಾಗೇ ಅವರ ಅವಶ್ಯಕತೆಗಳೂ ತೀರ ಅಲ್ಪವಾದವು. ಸರ್ಕಾರದಿಂದ ಮಂತ್ರಿಯೊಬ್ಬನಿಗೆ ದೊರೆಯುವ ಎಲ್ಲ ಸವಲತ್ತುಗಳನ್ನು ನಿರಾಕರಿಸಿದ್ದಾರೆ. ಜೊತೆಗೆ ದೀನದಲಿತರಿಗೆ ತಮ್ಮಿಂದಾಗುವ ಎಲ್ಲಾ ಸಹಾಯ, ಸಹಕಾರಗಳನ್ನು ಮಾಡುತ್ತಾ ಬಂದಿದ್ದಾರೆ. ತನ್ನದೆನ್ನುವ ಪ್ರತಿ ಪೈಸೆಯಲ್ಲಿಯೂ ಸಮಾಜದ ಋಣವಿದೆ ಎಂದು ನಂಬಿದವರಿವರು. ಊರಿನಿಂದ ಪೇಟೆಗೆ ಒಬ್ಬರೇ ಕಾರಿನಲ್ಲಿ ಹೊರಟರೂ ದಾರಿಯಲ್ಲಿ ಪೇಟೆಗೆ ಹೋಗಲು ಸಿಕ್ಕವರನ್ನೆಲ್ಲಾ ಕಾರಿನಲ್ಲಿ ತುಂಬಿಸಿಕೊಂಡು  ಪೇಟೆ ತಲುಪಿಸಿದರೇ ಇವರಿಗೆ ಸಮಾಧಾನ.

ಸಖಿ, ಇದ್ಯಾವುದೋ ಕನಸೋ, ಕಲ್ಪನೆಯ ಬಗ್ಗೆಯೋ ನಾನು ಹೇಳುತ್ತಿದ್ದೇನೆ ಎಂದು ನೀನು ಅಂದುಕೊಂಡಿದ್ದರೆ ಅದು ತಪ್ಪು. ಇಂತಹ ಸರಳ ಮಾನವೀಯ ವ್ಯಕ್ತಿ ನಿಜವಾಗಿಯೂ ಇದ್ದಾರೆ. ತನ್ನ ಸ್ಥಾನದ ಬಗ್ಗೆ ಗರ್ವ ಪಡದೇ ಊರಿನ ಎಲ್ಲರಿಗೂ ಬೇಕಾಗಿರುವ ಎಲ್ಲರ ಕಷ್ಟ ನೋವುಗಳಿಗೆ ಸ್ಪಂದಿಸುವ ಈ ವ್ಯಕ್ತಿ ತನ್ನ ಅಧಿಕಾರ, ಅಂತಸ್ತು, ವಿದ್ಯೆ ಸ್ಥಾನಮಾನದಿಂದಲ್ಲ. ಗಣ್ಯರಾಗಿರುವುದು, ತಮ್ಮ ಮಾನವೀಯ ಸ್ಪಂದನೆಗಳಿಂದ.

ಒಬ್ಬ ವ್ಯಕ್ತಿ ಗಣ್ಯನೆನಿಸಿಕೊಳ್ಳಲು ಅವನಿಗೆ ಹಿರಿದಾದ ಅಧಿಕಾರ, ಸ್ಥಾನ ಅಂತಸ್ತು, ಅಪರಿಮಿತ ವಿದ್ಯೆ, ಹಿರಿಯ ವಯಸ್ಸು ಇತ್ಯಾದಿಗಳನ್ನು ನಾವು ಮಾನದಂಡವಾಗಿ ಬಳಸುತ್ತೇವೆ. ಆದರೆ ಇವೆಲ್ಲಾ ಇದ್ದೂ ಅವನಿಗೆ ಇತರ ವ್ಯಕ್ತಿಗಳ ದುಃಖ, ನೋವುಗಳ ಬಗೆಗೆ ಸ್ಪಂದನೆಯಿಲ್ಲದಿದ್ದರೆ ಅವನು ಗಣ್ಯ ಅಥವಾ ಹಿರಿಯ ಹೇಗಾಗುತ್ತಾನೆ ? ತನ್ನ ಸ್ಥಾನ, ಅಂತಸ್ತು, ವಿದ್ಯೆ ವಯಸ್ಸುಗಳಿಗೆ ಇತರರು ಗೌರವಕೊಡಬೇಕೆಂದು ಬಯಸುವ ವ್ಯಕ್ತಿ ಅವುಗಳನ್ನು ಹೊಂದಿರುವುದರ ಬಗೆಗೆ ಗರ್ವಪಡದೇ ತನ್ನ ಸುತ್ತಲಿನವರ ನೋವು, ದುಃಖಗಳಿಗೆ ಸ್ಪಂದಿಸಿದಾಗ ಸಮಾಜದಲ್ಲಿ ಗೌರವವನ್ನು ಪಡೆಯುತ್ತಾನೆ. ಹಿರಿಯನೆನಿಸುತ್ತಾನೆ, ಗಣ್ಯನಾಗುತ್ತಾನೆ ಅಲ್ಲವೇ ಸಖಿ?
*****

Tagged:

Leave a Reply

Your email address will not be published. Required fields are marked *

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...