Home / ಕವನ / ಕವಿತೆ / ನಿನ್ನೊಳಗನಿಣುಕಿದವರೆಷ್ಟು ಮಂದಿ

ನಿನ್ನೊಳಗನಿಣುಕಿದವರೆಷ್ಟು ಮಂದಿ

ಅಮ್ಮಾ!
ನಿನ್ನ ಕಥೆಯ ಕೀರ್ತಿಸುತ ನಿಂತವರು ಬಹಳ,
ನಿನ್ನ ಮೈಯಂದವ ಅಂದಗೆಡುವಷ್ಟು ಹಾಡಿ ಹೊಗಳಿದವರು ಬಹಳ,
ಕಲ್ಪನೆಯ ಕುಂಚದಲಿ ಬಣ್ಣಿಸಿದವರು ಬಹಳ
ನಿನ್ನ ಗುಡಿಯ ಸಾಲು ಸಾಲಭಂಜಿಕೆಗಳ, ಮದನಿಕೆಗಳ
ಕುಸುರಿಗೆಲಸಗಳ ನೋಡಿ ಮರುಳಾಗಿ
ಬಾಯ್ತೆರೆದು ಅಲ್ಲೇ ಕುಳಿತವರು ಬಹಳ
ನಿನ್ನ ಸಮೀಪಿಸಿದವರು ನಿನ್ನೊಡವೆ ತೊಡುವೆಗಳ
ಬೆಡಗಿಗೆ ದಡಬಡಿಸಿ ದಂಗಾಗಿ, ನಿನ್ನ ಮೈಕಾಂತಿಗೆ ಕಣ್ಕುಕ್ಕಿ
ಆ ಚೆಲುಬಲೆಯಲ್ಲಿ ಸಿಲುಕಿ ಒದ್ದಾಡಿದವರು ಬಹಳ,
ನಿನ್ನ ಮಾತನಾಲಿಸಿದವರು, ಅದರಿಂಪು ಸೊಂಪಿಗೆ
ಒಗಟು ಜಿಗುಟುಗಳಿಗೆ, ಕಿವಿಯಗಲಿಸಿ ಬೆಪ್ಪಾದವರು ಬಹಳ,
ನಿನ್ನೊಂದೊಂದು ಬೆರಳ ಸನ್ನೆಗಳಿಗೆ ತಮತಮಗೆ ಕಂಡಂತೆ
ಅರ್ಥಗಳ ಹಚ್ಚಿ ಅನರ್ಥವುಂಡವರು ಬಹಳ
ನಿನ್ನ ಮನೆಯಿಂದಾಯ್ದ ಆಣಿಮುತ್ತೆಂದು
ಹಗಲೆಲ್ಲ ಬಾಯಲುರುಳಾಡಿಸಿ ಸವೆಸಿದವರು ಬಹಳ
ನಿನ್ನ ಹೊತ್ತಿಗೆಗಳ ಹೊತ್ತು ಮೆರೆಸಿ ತಾವು ಮೆರೆದವರು ಬಹಳ
ನಿನ್ನೆದೆ ಮಾತನಾಲಿಸುವ ಭ್ರಮೆಯಿಂದ ಮಾಯೆಲೀಲೆಗಳಲಿ
ಮುಳುಗಿದವರು ಬಹಳ

ನಿನ್ನ ಹೃದಯವ ಮುಟ್ಟಿದವರೆಷ್ಟು ಮಂದಿ ತಾಯಿ?
ನಿನ್ನೊಳಮರ್ಮವ ಅರಿತವರೆಷ್ಟು ಮಂದಿ?
ನಿನ್ನ ನಡೆಯ ನಡೆದವರೆಷ್ಟು?
ನಿನ್ನ ಮಾತಿನ ಜ್ಯೋತಿಯಿಂದ ತಮ್ಮ
ಅಂತರಂಗ ಬಹಿರಂಗಗಳ ಬೆಳಗಿದವರೆಷ್ಟು ಮಂದಿ?
ನಿನ್ನೊಳಗಿನೊಳಗೆ ಇಣುಕಿದವರೆಷ್ಟು ಮಂದಿ?
ನಿನ್ನಲಿ ಲೀನವಾಗಿ ನಿನಗೆ ತಮ್ಮನೊಪ್ಪಿಸಿಕೊಂಡವರೆಷ್ಟು ಮಂದಿ
ತಾಯಿ?
*****

Tagged:

Leave a Reply

Your email address will not be published. Required fields are marked *

“ಸುಭದ್ರೆ, ನೀನು ಎಂದು….” ದೈನ್ಯವಾಣಿಯಿಂದ ಕೇಳಿಕೊಂಡ ಶ್ರೀಧರ. “ತಡೆ ಶ್ರೀಧರ. ಹ್ಞ. ಹತ್ತಿರ ಬರಬೇಡ. ಪ್ರತಿಯೊಂದು ಕಾರ್ಯಕ್ಕೂ ಮುಹೂರ್ತ ಬರಬೇಕು; ಸ್ವಲ್ಪ ಕಾಲ ತಡೆ. ಒಮ್ಮೆ ಹೇಳಿದೆ: ನಾನು ನಿನ್ನವಳೆಂದು, ನಂಬಿಕೊ.” “ಎಷ್ಟು ದಿನ ಈ ನ...

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...