Home / ಲೇಖನ / ವಿಜ್ಞಾನ / ಗಾಜಿಗಿಂತಲೂ ಹಗುರವಾದ ಪೆಕ್ಸಿಗ್ಲಾಸ್

ಗಾಜಿಗಿಂತಲೂ ಹಗುರವಾದ ಪೆಕ್ಸಿಗ್ಲಾಸ್

ಇದೊಂದು ಹೊಸ ಬಗೆಯ ಪಾರದರ್ಶಕ ಗ್ಲಾಸ್. ಸಾಮಾನ್ಯ ಗಾಜಿಗಿಂತಲೂ ಹೆಚ್ಚು ಪಾರದರ್ಶಕವಾಗಿದ್ದು ಇದರ ಮೂಲಕ ಕ್ಷ-ಕಿರಣಗಳು ಸುಲಭವಾಗಿ ಹಾದುಹೋಗಬಲ್ಲವು. ಶಾಖಮಾತ್ರ ಇದರ ಮೂಲಕ ಹಾದುಹೋಗಲಾರದು. ಇದರಲ್ಲಿರಲ್ಲಿ ಕೊರೆಯಬಹುದು. ಹಾಳೆ ಮಾಡಬಹುದು, ಬೇಕಾದ ಕೋನಕ್ಕೆ ತಿರುಗಿಸಬಹುದು, ವೆಲ್ಡ್ ಮಾಡಬಹುದು, ಕ್ಯಾಸ್ಟ್ ಮಾಡಬಹುದು, ಗರಗಸದಿಂದ ಕತ್ತರಿಸಬಹುದು. ಪಂಚ್ ಮಾಡಬಹುದು, ಪಾಲೀಶ್ ಮಾಡಬಹುದು, ಎಲ್ಲ ಬಗೆಯ ಕ್ರಿಯೆಗೂ ಒಗ್ಗಿಕೊಳ್ಳುವ ಈ ಪೆಕ್ಸಿ ಗ್ಲಾಸನ್ನು ತಯಾರಿಸಲು ಅಸಿಟೋನ್, ‘ಹೈಡ್ರೋಸಯನಿಕ್ ಆಮ್ಲ’ ಗಂಧಕಾಮ್ಲ ಮುತ್ತು ಮಧ್ಯಸಾರ (ಅಲ್ಕೋಹಾಲ್)ಗಳನ್ನು ಬಳಸಿ ತಯಾರಿಸಲಾಗುತ್ತದೆ.

ಸಾಮಾನ್ಯ ಗಾಜು ನಿರಯವವಾಗಿದ್ದು ಇದರ ತಯಾರಿಕೆಯಲ್ಲಿ ಸಿಲಿಕಾ ಬಂದರೆ ಮರಳನ್ನು ಉಪಯೋಗಿಸುತ್ತಿದ್ದು ಇದು ಇನ್ ಆರ್ಗ್ಯಾನಿಕ್ ವಸ್ತುವಾಗಿದೆ. ಆದರೆ ಪೆಕ್ಸಿಗ್ಲಾಸು ಸಾವಯವವಾಗಿದೆ.

ಈ ಪೆಕ್ಸಿ ಗ್ಲಾಸ್‌ನಲ್ಲಿ ಹೈಡ್ರೋಸಯನಿಕ್ ಇದ್ಧರೂ ಇದು ವಿಷವಲ್ಲ ಕೃತಕವಾದ ಕಣ್ಣು ಮೂಗು, ಕೈಬೆರಳುಗಳನ್ನು ತಯಾರಿಸಲೂ ಸಹ ಉಪಯೋಗಿಸಲಾಗುತ್ತದ. ಮಾನವ ದೇಹದ ಅಂಗಾಂಗಗಳೊಡನೆ ಸುಲಭವಾಗಿ ಹೊಂದಿಕೊಳ್ಳಬಲ್ಲವಾದ್ದರಿಂದ ವೈದ್ಯಕೀಯ ಕ್ಷೇತ್ರದಲ್ಲಿ ಬಳಸಲಾಗುತ್ತದೆ. ಹೃದಯದ ಕೃತಕ ಕವಾಟಗಳನ್ನು ತಯಾರಿಸಲಾಗುತ್ತದೆ, ಎಂದಾಗ ಇದರ ಅಪರಿಮಿತ ಉಪಯೋಗದ ಅರ್ಥವಾಗುತ್ತದೆ. ಅನೇಕ ವಿಜ್ಞಾನದ ಪ್ರಯೋಗಶಾಲೆಗಳಲ್ಲಿ ‘ಮಾದರಿ’ಗಳನ್ನಾಗಿ ಮಾಡಿ ವಿದ್ಯಾರ್ಥಿಗಳಿಗೆ ಪರಿಚಯಿಸಲಾಗುತ್ತದೆ. ಏಕೆಂದರೆ ಪಾರದರ್ಶಕವಾದ್ದರಿಂದ ಒಳಭಾಗದ ನೋಟವನ್ನು ನೋಡಬಹುದು. ಇದು 100 ಡಿಗ್ರಿ ಸೆಂಟಿಗ್ರೇಡ್ ಉಷ್ಣತೆಯನ್ನು ತಡೆಯಬಲ್ಲದಾದ್ದರಿಂದ ಸಣ್ಣಪುಟ್ಟ ಅಗ್ನಿ ಶಾಖಕ್ಕೆ ಹೆದರಬೇಕಿಲ್ಲ ಸಂಗೀತದ ಉಪಕರಣಗಳನ್ನು ತಯಾರಿಸಲು ಇಂಜಿನಿಯರಿಂಗ್ ಕಾಂಪೊನೆಂಟ್‌ಗಳನ್ನು ತಯಾರಿಸಲು, ಉಪಯೋಗಿಸಬಹುದಲ್ಲದೇ ಈ ಪೆಕ್ಸಿಗ್ಲಾಸು ಕಟ್ಟಡ ನಿರ್ಮಾಣದ ಕಾರ್ಯದಲ್ಲಿಯೂ ಇದರ ಉಪಯೋಗವನ್ನು ಪಡೆಯಲಾಗುತ್ತದೆ. ಇದರ ಮೇಲೆ ನೀರು, ಅಮ್ಲ ಪ್ರತ್ಯಾಮ್ಲಗಳ ಪೆಟ್ರೋಲ್ ಮುಂತಾದ ದ್ರವಗಳು ಏನು ಮಾಡಲಾಗದು. ಗಟ್ಟಿತನದಿಂದಲೂ, ಶುಭ್ರತೆಯಿಂದಲೂ ಬಹು ಉಪಯೋಗಿ ಗುಣಗಳಿಂದಲೂ ಗಾಜಿಗಿಂತಲೂ ಈ ಪೆಕ್ಸಿಗ್ಲಾಸ್ ಹೊಸ ದಾಖಲೆ ಸ್ಥಾಪಿಸಿದೆ.
****************

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...