Home / ಲೇಖನ / ಪ್ರವಾಸ / ಕೊನೆಯದಾಗಿ……..

ಕೊನೆಯದಾಗಿ……..

ಪ್ರವಾಸ ಸಾಹಿತ್ಯದ ಓದಿನ ಮೂಲಕ ಈ ವರೆಗೆ ಜಗತ್ತಿನ ಅನೇಕ ದೇಶಗಳನ್ನು ಸುತ್ತಾಡಿ ಬಂದಂತಾಯ್ತು. ಪ್ರತಿಯೊಬ್ದ ಲೇಖಕರದ್ದು ವಿಭಿನ್ನ ದೃಷ್ಟಿಕೋನಗಳು. ಈ ಹಿನ್ನೆಲೆಯಲ್ಲಿ ಆಯಾ ದೇಶಗಳ ರಾಜಕೀಯ, ಸಾಮಾಜಿಕ, ಐತಿಹಾಸಿಕ, ಕಲೆ ಸಂಸ್ಕೃತಿಗಳ ಪರಿಚಯ ಮಾಡಿಕೊಂಡಂತಾಯ್ತು. ಭಾರತ ದೇಶದ ಉದ್ದಗಲ ಪ್ರವಾಸಿಸಿದ ಪ್ರವಾಸಿಗರ ಕಥನಗಳಲ್ಲಿ ನಮ್ಮ ಸಂಸ್ಕೃತಿಯ ಬಗೆಗಿನ ಹೆಚ್ಚಿನ ಪರಿಚಯ. ವಿವರಣೆಗಳಿದ್ದು ಅವುಗಳೆಲ್ಲದರ ಒಟ್ಟಾರೆಯಾದ ಚಿತ್ರಣ ನಮ್ಮ ಕಣ್ಣೆದುರಿಗೆ ಕಟ್ಟುವಂತಿವೆ. ಹಾಗೆಯೇ ವಿದೇಶ ಪ್ರವಾಸ ರಚಿಸಿದ ಹೆಚ್ಚಿನ ಲೇಖಕರು ಅಲ್ಲಿಯ ಸಮೃದ್ಧತೆಯ ಬಗೆಗೆ ಹೊಗಳಿದ್ದಾರೆ. ಸ್ವರ್ಗದ ಅನುಭವ ಪಡೆದೆವು ಎಂದೂ ಹೇಳಿಕೊಂಡಿದ್ದಾರೆ. ಆ ಸ್ವರ್ಗ ಅಲ್ಲಿಯ ವಿಜ್ಞಾನ  ತಂತ್ರಜ್ಞಾನದ ಪ್ರಗತಿಯಿಂದ ಪ್ರತಿಯೋರ್ವರನ್ನೂ ಮೂಕವಿಸ್ಮಿತರನ್ನಾಗಿ  ಮಾಡಿದೆ. ಅಷ್ಟೇ ಅಲ್ಲದೆ ಆ ಜನರ ಶಿಸ್ತು. ಸಮಯ  ವೃತ್ತಿಪರತೆ, ವಾರಾಂತ್ಯ ರಜಾದಿನಗಳನ್ನು ಸಂತೋಷವಾಗಿ ಕಳೆಯುವ ಪ್ರವೃತ್ತಿಯ ಬಗೆಗೆ ಮೆಚ್ಚಿ- ಕೊಂಡಿದ್ದಾರೆ. ಕೆಲವರು ನಮ್ಮ ದೇಶದ ರಾಜಕೀಯ, ಸಾಮಾಜಿಕ ಪರಿಸ್ಥಿತಿಗಳ ಬಗೆಗೆ ಅಲ್ಲಲ್ಲಿ ಚರ್ಚಿಸಿಕೊಳ್ಳುತ್ತ ಬಯ್ಪುಕೊಳ್ಳುತ್ತ ಬರೆದುಕೊಂಡು ಹೋದವರೂ ಇದ್ದಾರೆ. ಇರಲಿ. ಪ್ರವಾಸ ಸಾಹಿತ್ಯದ ಓದಿನಿಂದ ಒಟ್ಟಾರೆಯಾಗಿ ವಿಶ್ವದ ಅಧ್ಯಯನ ಮಾಡಲು ಸಹಾಯವಾಗುತ್ತದೆ.

ಇತ್ತೀಚಿಗೆ ಪ್ರವಾಸಕ್ಕೆ ಹೋರಡುವುದು ತೀರಾ ಸಲೀಸಾಗಿಬಿಟ್ಟಿದೆ. ಪ್ರವಾಸೋದ್ಯಮ ಇಲಾಖೆಯವರು ಜಗತ್ತಿನಾದ್ಯಂತ ಶಾಖೆಗಳನ್ನು ತೆಗೆದು ಪ್ರವಾಸಿಗರಿಗೆ ಸಾಕಷ್ಟು ಅನುಕೂಲತೆಗಳನ್ನು ಒದಗಿಸಿಕೊಡುತ್ತಿದ್ದಾರೆ. ಇಂದು ಅಮೆರಿಕೆಗೆ ಹೋಗಬೇಕೆನ್ನುವುದು ಬಹಳ ಸಹಜವಾಗಿಯೇ ನಮ್ಮ ನೆರೆಹೊರೆಯ ಊರಿಗೆ ಹೋದಂತೆಯೇ ಅಗುತ್ತಿದೆ. ಕೈ ತುಂಬಾ ಹಣ ಇರಬೇಕದ್ದೇ. ಪ್ರವಾಸಿ ಏಜೆಂಟರು ನಿಮ್ಮ ಮನೆಗೇ ಟಿಕೆಟ್ ತಂದು ಕೊಡುತ್ತಾರೆ.

ಪ್ರವಾಸ ಕೇವಲ ಮೋಜುಮಜವಾಗಿ ಮಾಡಿಕೊಂಡು ಬರಬಾರದಷ್ಟೆ. ಅವಕಾಶಗಳನ್ನು ಬಳಸಿಕೊಂಡು ಆಯಾ ದೇಶಗಳ ರೀತಿ ನೀತಿಗಳನ್ನು ಪರಿಚಯಿಸಿಕೊಳ್ಳುತ್ತ ಜ್ಞಾನಾಭಿವೃದ್ಧಿ ಮಾಡಿಕೊಂಡು ಬರಬೇಕಾದುದು ಅತೀ ಮಹತ್ವ.

ಆದರೆ ಕಂಡದ್ದನ್ನೆಲ್ದಾ ದಾಖಲಿಸಬೇಕೆನ್ನುವ ಹುಚ್ಚು ಹಿಡಿದು ಬಿಟ್ಟರೆ ಅದು ಆ ಪ್ರದೇಶದ, ದೇಶದ ಕೈಪಿಡಿಯಾಗು- ತ್ತದೆಯೇ ಹೊರತು ಮೌಲ್ಯಯುತವಾದ ಸಾಹಿತ್ಯವಾಗುವುದಿಲ್ಲ.

ಪ್ರವಾಸ ಸಾಹಿತ್ಯ ತನ್ನ ಪ್ರಯಾಸದ 120 ಮೆಟ್ಟಿಲುಗಳನ್ನೇರಿ (ವರ್ಷಗಳು) ಶಿಖರ ತಲುಪಿದ ಸಂಭ್ರಮದಲ್ಲಿದೆ. ನಮ್ಮಲ್ಲಿ ಪ್ರವಾಸಿಗರು ಲವಲವಿಕೆಯಿಂದ ವಿಶ್ವದ ನಾನಾ ಕಡೆಗೆ ಹೆಜ್ಜೆ ಮೂಡಿಸಿ ಬಂದಿದ್ದಾರೆ. ಅನುಭವಗಳನ್ನು ನಮ್ಮೊಂದಿಗೆ ಹಂಚಿಕೊಂಡಿದ್ಧಾರೆ. ಅವರೆಲ್ಲರಿಗೂ ಮತ್ತೊಮ್ಮೆ ವಂದನೆಗಳು.

****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...