Home / ಕವನ / ಕವಿತೆ / ಶ್ರಮದ ಹಿರಿಮೆ

ಶ್ರಮದ ಹಿರಿಮೆ

ಶ್ರಮ ಜೀವನಕೆ ಜಯವೆನ್ನಿ ಶ್ರಮಿಕರಿಗೆಲ್ಲಾ ಜಯವೆನ್ನಿ

ಶ್ರಮವೇ ಜೀವನಕಾಧಾರ ಶ್ರಮದಿಂದಲೇ ಜೀವನಸಾರ
ಶ್ರಮವೇ ಬದುಕಿನ ಬೇರು ಶ್ರಮವಿಲ್ಲದೆ ಬದುಕೇ ನಿಸ್ಸಾರ

ಮಣ್ಣಿನ ಕಣಕಣದೆಲ್ಲಿಡೆ ಮಿಡಿಯುತ ಹೂವೂ ಹಣ್ಣು ನಿತ್ಯಾ
ನಿಸರ್ಗವೆಲ್ಲಾ ಚೆಲುವಿನ ತವರು ಶ್ರಮವೇ ವಿಶ್ವದ ಸತ್ಯಾ

ರಾಜಾಧಿರಾಜರ ಕೋಟೆಕೊತ್ತಲ ಅರಮನೆ ಗುರುಮನೆಗೆಲ್ಲ
ಶ್ರಮಜೀವಿಗಳೇ ಕಾರಣಕರ್ತರು ಚರಿತ್ರೆ ಬುನಾದಿಗೆಲ್ಲ

ಹೊನ್ನರಾಶಿಗಳು ಮುತ್ತು ರತ್ನಗಳು ಬೀದಿಗಳಲ್ಲಿ ಮೆರೆದಿರಲು
ಬೆನ್ನನುಬಗ್ಗಿಸಿ ದುಡಿಯುವ ಅವನ್ನು ತಂದವರೇ ಶ್ರಮ ಜೀವಿಗಳು

ಚರಿತ್ರೆಯನ್ನೇ ಕಟ್ಟಿ ಬೆಳೆಸಿದ ಶ್ರಮಜೀವಿಗಳ ಹೆಸರೆಲ್ಲಿ
ಸಾವಿರ ವರ್ಷದ ಸಂಸ್ಕೃತಿಗಳನ್ನು ಸೃಷ್ಟಿಸಿದವರ ಗುರುತೆಲ್ಲಿ

ದೇಶಕ್ಕೆಲ್ಲ ಅನ್ನವ ಕೊಡುವುದು ದುಡಿಯುವ ರೈತನ ಶ್ರಮವು
ಉಣ್ಣುವ ಉಡುವ ಎಲ್ಲ ವಸ್ತುಗಳ ಮೂಲದಲ್ಲಿದೆ ಶ್ರಮವು

ರಸ್ತೆ ಬೀದಿಗಳ ಮಹಲು ಮನೆಗಳ ಕಟ್ಟುವುದೆಲ್ಲ ಶ್ರಮವೆ
ನಾಗರಿಕತೆಗಳ ವೈಭವಗಳನ್ನು ಬೆಳೆಸಿದೆಲ್ಲ ಶ್ರಮವೆ

ಅಣೆಕಟ್ಟುಗಳ ಕಾರಖಾನೆಗಳ ನಿರ್ಮಿಸಿರುವರು ದುಡಿವವರು
ಬೆವರು ರಕ್ತಗಳ ಹರಿಸಿ ದುಡಿವವರು ಹೆಸರಿಲ್ಲದೆಯೆ ಮಡಿವವರು

ಗುಡ್ಡ ಗಣಿಗಳಲಿ ಕಬ್ಬಿಣ ಅಗೆವರು ಕಬ್ಬಿಣದಂಥಾ ದುಡಿವವರು
ದುಡಿವರ ಬೆನ್ನಿನ ಮೇಲ್ಗಡೆ ಕುಳಿತು ಮೆರೆವವರು ಹಣವುಳ್ಳವರು
ಮಂತ್ರಿ ಶಾಸಕರ ಆರಿಸಿ ಗದ್ದುಗೆಗೇರಿಸಿ ಹೊರುವರು ದುಡಿವವರು
ಸ್ವಾಮಿ ಜಗದ್ಗುರುಗಳ ಪಲ್ಲಕಿಯಲಿ ಮೆರೆಸಿ ಸಾಯುವರು ದುಡಿವವರು

ಶ್ರಮ ಜೀವಿಗಳಿಗೆ ಮೋಸವ ಮಾಡುವ ದೇಶವು ಎಂದೂ ಬೆಳೆಯೊಲ್ಲ
ಶ್ರಮ ಗೌರವವನು ಮರೆತ ಜನಾಂಗಕೆ ಪ್ರಗತಿಯ ಭವಿಷ್ಯ ಉಳಿಯೊಲ್ಲ

ಶ್ರಮ ಜೀವಿಗಿಂತ ಶ್ರೇಷ್ಠನು ಯಾರು ಅವನಿಗೆ ಎಲ್ಲರು ಸಣ್ಣವರು
ಪವಿತ್ರ ತೀರ್ಥವು ಯಾವುದು ಇಲ್ಲ ಅದುವೇ ಶ್ರಮದಾ ಬೆವರು

ಶ್ರಮವೇ ದೇಹಾರೋಗ್ಯಕ್ಕೆ ಮೂಲ ಮನದಾರೋಗ್ಯವು ಕೂಡ
ಜಪತಪ ಪೂಜಾ ಯಜ್ಞಯೋಗಗಳು ಶ್ರಮಕ್ಕೆ ಸಣ್ಣವು ನೋಡ

ಚೆಲುವಿನ ರಹಸ್ಯ ಗೆಲುವಿನ ಗುಟ್ಟು ಶ್ರಮ ಸಾಧನೆಯಲೆ ಅಡಗಿಹುದು
ದೀರ್ಘಾಧಾಯುಷ್ಯ ಶಕ್ತಿ ಸಾಮರ್ಥ್ಯ ಶ್ರಮದಿಂದ ಸಿದ್ದಿಯಾಗುವುದು

ತಲತಲಾಂತರದ ಕರ್ಮಕೌಶಲತೆ ಕಲೆ ಜಾಣ್ಮೆ ಪ್ರತಿಭೆಯೆಲ್ಲ
ಹನಿ ಹನಿ ಕೂಡಿದ ಹೊಳೆಯು ಸಂಸ್ಕೃತಿಯು
ಎಲ್ಲ ಶ್ರಮದ ಕೊಡುಗೆಯಲಾ
*****

Tagged:

Leave a Reply

Your email address will not be published. Required fields are marked *

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...