Home / ಕವನ / ಕವಿತೆ / ನಗ್ತಾರಲ್ಲೋ ತಮ್ಮಾ

ನಗ್ತಾರಲ್ಲೋ ತಮ್ಮಾ

ನಗ್ತರಲ್ಲೋ ತಮ್ಮ ನಮ್ಮನ್ನು
ನಗ್ತಾರಲ್ಲೋ ಅಣ್ಣಾ ||ಪ||

ಎದುರಿಗೆ ಕೊಂಡಾಡಿ ಭಾಷಣ ಬಿಗಿದಾಡಿ
ಹಿಂದಿಂದೆ ನಗ್ತಾರೋ ತಮ್ಮಾ ನಮ್ಮನ್ನು
ನಗ್ತಾರಲ್ಲೋ ಅಣ್ಣಾ ||ಅ.ಪ.||

ನೀನೇ ದೇಶಕ್ಕೆ ಬೆನ್ನೆಲುಬು ಅಂತಾರೆ
ತಾಂಡವ ತುಳದಾರೆ ಮ್ಯಾಲೆ
ದೇಶಕ್ಕೆ ಅನ್ನವ ನೀಡುವನಂತಾರೆ
ನಿನ್ನ ಕೈಗೆ ಕೊಟ್ಟಾರೆ ಪ್ಯಾಲೆ ||೧||

ನಿನಗಾಗಿ ಅಂತ ಚುನಾವಣೆ ನಡಿತಾವೆ
ಉದ್ದುದ್ದ ವಾಗ್ದಾನಗಳು
ಕೇಂದ್ರದ ರಾಜ್ಯದ ಶಾಸಕ ಸೂರರು
ನೀನೇ ಹಡೆದ ಕುನ್ನಿಗಳು ||೨||

ನಿನಗಾಗಿ ಹಾಡ್ತಾವೆ ಓಡ್ತಾವೆ ರೇಡಿಯೋ
ನಿನಗಾಗಿ ಕುಣಿತಾವೆ ಟೀವೀ
ನಿನಗಾಗಿ ಬರಿತಾವೆ ನಿನಗಾಗಿ ಕೊರಿತಾವೆ
ಸುದ್ದಿಯ ಪತ್ರಿಕೆ ಬಾವೀ ||೩||

ಯೋಜನೆಗಳಾಗ್ತಾವೆ ಬಡ್ಜೆಟ್ಟು ಬರ್ತಾವೆ
ಕೋಟಿ ಕೋಟಿ ಹಣದ ರಾಶೀ
ಕಾರುಗಳೋಡ್ತಾವೆ ಫೈಲು ಹಾರಾಡ್ತಾವೆ
ನಿನ್ನದೆ ನಾಮವ ನೆನೆಸೀ ||೪||

ನಿನ್ನ ಸೇವೆಗೆ ಅಂತ ಅಧಿಕಾರ ವರ್ಗವು
ಪೋಲೀಸು ಕೋರ್ಟು ಕಛೇರಿ
ನಿನ್ನನ್ನ ಗಾಣಕ್ಕೆ ಹಾಕುತ್ತ ಹಿಂಡುತ್ತ
ರಸ ಹೀರಿ ಕೊಬ್ಯಾವೆ ಸೇರಿ ||೫||

ನಿನ್ನನ್ನ ಚೆನ್ನಾಗಿ ಚಿತ್ರಿಸಿ ತೋರಸ್ಯಾರೆ
ಅಂತಂದು ಸೀನಿಮಾಕ ಪ್ರೈಜು
ಕತೆ ಕಾದಂಬರಿಯಾಗೆ ಕಾವ್ಯ ನಾಟಕದಾಗೆ
ನಿನ್ನನ್ನೇ ಕೊಡತಾರೆ ಪೋಜು ||೬||

ಎಲ್ಲಾ ನಿನ್ನೆಸರ ಮ್ಯಾಲೇ ಬದಿಕ್ಯಾರೆ
ನೀನಾದಿ ಸತ್ತಂಥ ಹೆಣವು
ಬೆನ್ನಿಗಂಟಿದ ಹೊಟ್ಟೆ ಮೈಯಿ ತೋರುವ ಬಟ್ಟೆ
ನೀನಾದೆ ಪ್ರಶ್ನೆಗಳ ಮಣವು ||೭||

ಝಾಡಿಸಿ ಎದ್ದೇಳೋ ಮೈಕೊಡವಿ ನಿಂತ್ಕೊಳೊ
ನಿನ್ನ ಉದ್ಧಾರ ನಿನ್ಕೈಲಿ
ಅಕ್ಷರ ಕಲಿಯುತ ಕಲಿಯು ನೀನಾಗುತ
ತಕ್ಕೊಳ್ಳೋ ಲಗಾಮ್ ನಿನ್ಕೈಲಿ ||೮||

*****

Tagged:

Leave a Reply

Your email address will not be published. Required fields are marked *

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...