Home / ಕವನ / ಕವಿತೆ / ನಗ್ತಾರಲ್ಲೋ ತಮ್ಮಾ

ನಗ್ತಾರಲ್ಲೋ ತಮ್ಮಾ

ನಗ್ತರಲ್ಲೋ ತಮ್ಮ ನಮ್ಮನ್ನು
ನಗ್ತಾರಲ್ಲೋ ಅಣ್ಣಾ ||ಪ||

ಎದುರಿಗೆ ಕೊಂಡಾಡಿ ಭಾಷಣ ಬಿಗಿದಾಡಿ
ಹಿಂದಿಂದೆ ನಗ್ತಾರೋ ತಮ್ಮಾ ನಮ್ಮನ್ನು
ನಗ್ತಾರಲ್ಲೋ ಅಣ್ಣಾ ||ಅ.ಪ.||

ನೀನೇ ದೇಶಕ್ಕೆ ಬೆನ್ನೆಲುಬು ಅಂತಾರೆ
ತಾಂಡವ ತುಳದಾರೆ ಮ್ಯಾಲೆ
ದೇಶಕ್ಕೆ ಅನ್ನವ ನೀಡುವನಂತಾರೆ
ನಿನ್ನ ಕೈಗೆ ಕೊಟ್ಟಾರೆ ಪ್ಯಾಲೆ ||೧||

ನಿನಗಾಗಿ ಅಂತ ಚುನಾವಣೆ ನಡಿತಾವೆ
ಉದ್ದುದ್ದ ವಾಗ್ದಾನಗಳು
ಕೇಂದ್ರದ ರಾಜ್ಯದ ಶಾಸಕ ಸೂರರು
ನೀನೇ ಹಡೆದ ಕುನ್ನಿಗಳು ||೨||

ನಿನಗಾಗಿ ಹಾಡ್ತಾವೆ ಓಡ್ತಾವೆ ರೇಡಿಯೋ
ನಿನಗಾಗಿ ಕುಣಿತಾವೆ ಟೀವೀ
ನಿನಗಾಗಿ ಬರಿತಾವೆ ನಿನಗಾಗಿ ಕೊರಿತಾವೆ
ಸುದ್ದಿಯ ಪತ್ರಿಕೆ ಬಾವೀ ||೩||

ಯೋಜನೆಗಳಾಗ್ತಾವೆ ಬಡ್ಜೆಟ್ಟು ಬರ್ತಾವೆ
ಕೋಟಿ ಕೋಟಿ ಹಣದ ರಾಶೀ
ಕಾರುಗಳೋಡ್ತಾವೆ ಫೈಲು ಹಾರಾಡ್ತಾವೆ
ನಿನ್ನದೆ ನಾಮವ ನೆನೆಸೀ ||೪||

ನಿನ್ನ ಸೇವೆಗೆ ಅಂತ ಅಧಿಕಾರ ವರ್ಗವು
ಪೋಲೀಸು ಕೋರ್ಟು ಕಛೇರಿ
ನಿನ್ನನ್ನ ಗಾಣಕ್ಕೆ ಹಾಕುತ್ತ ಹಿಂಡುತ್ತ
ರಸ ಹೀರಿ ಕೊಬ್ಯಾವೆ ಸೇರಿ ||೫||

ನಿನ್ನನ್ನ ಚೆನ್ನಾಗಿ ಚಿತ್ರಿಸಿ ತೋರಸ್ಯಾರೆ
ಅಂತಂದು ಸೀನಿಮಾಕ ಪ್ರೈಜು
ಕತೆ ಕಾದಂಬರಿಯಾಗೆ ಕಾವ್ಯ ನಾಟಕದಾಗೆ
ನಿನ್ನನ್ನೇ ಕೊಡತಾರೆ ಪೋಜು ||೬||

ಎಲ್ಲಾ ನಿನ್ನೆಸರ ಮ್ಯಾಲೇ ಬದಿಕ್ಯಾರೆ
ನೀನಾದಿ ಸತ್ತಂಥ ಹೆಣವು
ಬೆನ್ನಿಗಂಟಿದ ಹೊಟ್ಟೆ ಮೈಯಿ ತೋರುವ ಬಟ್ಟೆ
ನೀನಾದೆ ಪ್ರಶ್ನೆಗಳ ಮಣವು ||೭||

ಝಾಡಿಸಿ ಎದ್ದೇಳೋ ಮೈಕೊಡವಿ ನಿಂತ್ಕೊಳೊ
ನಿನ್ನ ಉದ್ಧಾರ ನಿನ್ಕೈಲಿ
ಅಕ್ಷರ ಕಲಿಯುತ ಕಲಿಯು ನೀನಾಗುತ
ತಕ್ಕೊಳ್ಳೋ ಲಗಾಮ್ ನಿನ್ಕೈಲಿ ||೮||

*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...