Home / ಲೇಖನ / ಪ್ರವಾಸ / ಮರಳಿ ಗೂಡಿಗೆ

ಮರಳಿ ಗೂಡಿಗೆ

10 ವರ್ಷಗಳಿಂದ ಸೌದಿ ಅರೇಬಿಯದಲ್ಲಿ ಸಾಕಷ್ಟು ಖುಷಿಯಿಂದ ಕಳೆದೆವು. ಇಲ್ಲಿಯ ಐಶಾರಾಮಿ ಜೀವನಕ್ಕೆ ಒಗ್ಗಿಕೊಂಡೂ ಬಿಟ್ಟೆವು. ಯಾವುದರ ಬಗೆಗೂ ತಲೆ ಕೆಡೆಸಿಕೊಳ್ಳುವ ಪ್ರಮೇಯವೇ ಇರಲಿಲ್ಲ. ಯಾವ ಬಗೆಯ ಬಿಲ್ಲು ತೆರಿಗೆಗಳ ಯೋಚನೆ ಇರದಿದ್ದ ಸ್ಥಿತಿ ನಮ್ಮದು. ಮಕ್ಕಳ ಶಾಲಾ ವೆಚ್ಚ ಹಾಗೂ ಊರಿಗೆ ಪಯಣಿಸುವ ವೆಚ್ಚ ಕಂಪನಿ ಕೊಡುತ್ತಿದ್ದುದರಿಂದ ಯಾವುದರ ತೊಂದರೆ ಇಲ್ಲದೆ ನಿಶ್ಚಿಂತರಾಗಿದ್ದೆವು.

ಪಾರ್ಟಿಗಳು, ಕೆಂಪುಸಮುದ್ರ್ಭ ಸನಿಹತೆ, ಪೇಟೆಯಲ್ಲಿ ಸುತ್ತಾಡುವಿಕೆ, ವರ್ಷಕ್ಕೊಮ್ಮೆ ಭಾರತಕ್ಕೆ ಭೆಟ್ಟಿ, ನಡುವೆ ಯುರೋಪ ಪ್ರವಾಸ, ಸೌದಿ ನಾಡಿನ ದೀರ್ಘ ಪರಿಚಯ, ಹುಡುಗರ ಶಾಲೆ ಎಂದು ಇನ್ನೂ ಎಲ್ಲ ಕಡೆಗೆ ಓಡಾಡಿ ಕೊಂಡಿರುವಂತೆಯೇ ಹತ್ತು ವರ್ಷಳಗಳು ಕಳೆದುಹೋದವು.

ಅಲ್ಲಿಯ ಬ್ರಿಟಿಷ್ ಕಾಂಟಿನೆಂಟಲ್ ಶಾಲೆಯಲ್ಲಿ ಓದುತ್ತಿರುವ ನಮ್ಮ ಮಕ್ಕಳು ಬೆಳೆಯತೊಡಗಿದರು. ಬ್ರಿಟಿಷ್ ಪದ್ಧತಿಯ ಶಾಲೆಗಳೇ ಬೇರೆ. ಈ ಶಾಲೆಗಳಲ್ಲಿ ಇಂಗ್ಲೀಷ್, ಸಾಯನ್ಸ್, ಗಣೀತ ವಿಷಯಗಳಿಗೆ  ಇಂಡಿಯಾದಂತೆ ವರ್ಷಕ್ಕೊಂದು ಸಲ ಪರೀಕ್ಷೆಯೊಂದಿರುವುದಿಲ್ಲ. ಪ್ರತಿ ದಿನ ಹುಡುಗರ ಓದು, ಬರಹ, ಸಾಮಾನ್ಯಜ್ಞಾನ ಉಳಿದ ಪಠ್ಯೇತರ ಚಟುವಟಿಕೆಗಳಿಂದ ಅವರ ಬುದ್ಧಿ ಮೌಲ್ಯಮಾಪನ ಮಾಡುವರು. ಬುದ್ಧಿ, ಬರಹಗಳ ಆಧಾರದ ಮೇಲೆ ವಿದ್ಯಾರ್ಥಿಮಾನಸಿಕತೆ ಅರಿತು ಮುಂದಿನ ಕ್ಲಾಸಿಗೆ ಕಳಿಸುವರು ಅಥವಾ ಕೊರತೆ ಅತೀ ಇದೆಯೆಂದೆನಿಸೆತೊಡಗಿದರೆ
ವಿದ್ಯಾರ್ಥಿ ಪಾಲಕರೊಂದಿಗೆ ಚರ್ಚಿಸಿ ಮುಂದಿನ ನಿರ್ಣಯ ತೆಗೆದುಕೊಳ್ಳುವರು.

ನಮ್ಮ ಹತ್ತು ವರ್ಷಕ್ಕೆ ಎಸ್.ಎಸ್.ಎಲ್‌.ಸಿ . ಅದ ಹಾಗೆ ಇಲ್ಲಿ ‘0’ Level Exam ಎಂದು, ಹನ್ನೆರಡು ವರ್ಷಕ್ಕೆ  ಪಿ.ಯು.ಸಿ. ಅದ ಹಾಗೆ ಇಲ್ಲಿ ‘A’ Level Exam ಎಂದು ಪರಿಗಣಿಸುವರು. ಪ್ರತಿವರ್ಷದ ಪರೀಕ್ಷೆಗಳಿಗಿಂತ ಇಲ್ಲಿ ಈ Level Exam ಗಳು ಅತಿ ಮುಖ್ಯ ಕಠಿಣವಾಗಿಯೂ ಇರುತ್ತವೆ. ಹೀಗಾಗಿ ಇಲ್ಲಿ ಯ ಹುಡುಗರು 10 ವರ್ಪಗಳ ಶಾಲೆಯಲ್ಲಿ ಅಭ್ಯಾಸ ಒತ್ತಡವಿಲ್ಲದೇ ಯಾವತ್ತೂ ಖುಷಿಯಿಂದ  ಕುಣಿದಾಡಿಡ್ಡೇ ಕುಣಿದಾಡಿದ್ದು. ನಮ್ಮಲ್ಲಿಯಂತೆ ಇಲ್ಲಿ ಪ್ರತಿ ತಿಂಗಳು ಯುನಿಟ್ ಟೆಸ್ಟ್‌ಗಳಿದ್ದರೆ ಏನಾಗುತ್ತಿತ್ತೋ ಏನೋ, ಹೀಗಾಗಿ ನಮಗೆ ಇಲ್ಲಿಯ ಈ ಸ್ಯಾಂಡರ್ಡ್ ಒಳ್ಳೆಯದೋ ಭಾರತದ್ದು ಒಳ್ಳೆಯದೋ,  ಗೊತ್ತಾಗುವದೇ ಇಲ್ಲ.

ಅದೇನೇ ಆಗಲಿ, ನಮ್ಮ ಸಂಸ್ಕೃತಿ-ಭಾರತೀಯ ಮೌಲ್ಯಗಳು ಉಚ್ಛಮಟ್ಟದ ವುಗಳೆಂದೆನಿಸಿ ನಮ್ಮ ಮಕ್ಕಳ ವ್ಯಾಸಂಗ ಭಾರತದಲ್ಲಿಯೇ ಮುಂದುವರೆಸಿದ ರಾಯ್ತೆಂದು ಸಾಕಷ್ಟು ವಿಚಾರಿಸಿ, ಚರ್ಚಿಸಿ ನಿರ್ಣಯ ತೆಗೆದುಕೊಂಡೆವು. ಮೊದಲು
ನಾನು ಮಕ್ಕಳು ಹೊರಡುವದೆಂದಾಯ್ತು.

ಹೊರಡುವದು ಇನ್ನೊಂದು ಎರಡು ತಿಂಗಳು ಮಾತ್ರ ಉಳಿದಿತ್ತು. ಎಲ್ಲರೂ ಊಟಕ್ಕೆಂದು,ಕಾಫಿಗೆಂದು ಕರೆಯುವವರೇ; ನೆನಪಿನ ಕಾಣಿಕೆ ಕೊಡುವವರೆ.

‘ಈಸ್ಟ್‌ವೆಸ್ಟ್ ಎಕ್ಸ್‌ಪ್ರೆಸ್ ಪ್ಯಾಕೇಜ್’ ದವರು ಮನೆಗೆ ಬಂದು ನಮ್ಮ ಸಾಮಾನುಗಳೆಲ್ಲ 3 ದಿವಸ ಪ್ಯಾಕ್ ಮಾಡಿ (ನಾವು ಹೊರಡುವದೆಂದು ನಮ್ಮ ಹೊಸ ಮನೆಗೆ, ಬೇಕಾದ ಸಾಮಾನುಗಳೆಲ್ಲ ಕೂಡಿಸಿದ್ದು) Air Cargo ಗೇ ಕಳಿಸಿದಾಗ ಮನಸ್ಸಿಗೆ ಏನೋ ಒಂಧರಾ ಹಳಹಳಿ. “ನಿಜವಾಗಿಯೂ ಇನ್ನು ಹೊರಟೇ ಬಿಟ್ಟೆವೆ” ಎಂದೆನಿಸಿ ಬಹಳ ಬೇಸರವಾಯಿತು.

ಹತ್ತು ವರ್ಷಗಳಿಂದ ಕಳೆದ ಸೌದಿ ನಾಡನ್ನು ಬಿಟ್ಟು Saudi Jumbojet ದಲ್ಲಿ  ಕುಳಿತಾಗ ಹೃದಯ ಭಾರವಾಗಿತ್ತು. ನಮ್ಮವರು ನಮ್ಮನ್ನು ಸಾಮಾನುಗಳನ್ನು ನಮ್ಮೂರವರೆಗೆ ತಲುಪಿಸಲು ನಮ್ಮೊಂದಿಗೆಯೇ ಇದ್ದರು.

ವಿಮಾನ ಆಕಾಶಕ್ಕೇರಿತು. ಮುಂದೆ ಮರುಭೂಮಿ, ತೈಲ ನಿಕ್ಷೇಪಗಳ ಮೇಲಿಂದ ಹಾಯ್ದು, ಅರಬ್ಬಿ ಸಮುದ್ರದ ವಿಹಂಗಮತೆಯಲ್ಲಿ ಲೀನವಾಗಿ ರಾತ್ರಿ 11 ಗಂಟೆಗೆ ಸರಿಯಾಗಿ ಬಾಂಬೆಯ ಸಹಾರ್‌ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯಿತು. ಸಾಮಾನು ಪರಿಶೀಲನಾ ವಿಭಾಗದಲ್ಲಿ ಹೆಚ್ಚು ಸಮಯ ಕಳೆಯಲಿಲ್ಲ. ಕಾರಣ ನಮಗೆ ಬೇಕಿದ್ದ ಸಾಮಾನೆಲ್ಲ ಟಿ.ಅರ್. (Transit of Resident) ಎಂದು Air Cargo ದಲ್ಲಿ ಕಳಿಸಿದ್ದಾಗಿತ್ತು. ಈಗ ನಮ್ಮೊಂದಿಗೆ ಸುಂಕ ಕೊಡುವ ವಸ್ತುಗಳೇನಿರಲಿಲ್ಲ. ಆದರೂ ಎಕ್ಸ್‌-ರೇ ಮಶೀನ್ ಮುಖಾಂತರ ಬ್ಯಾಗ್‌ಗಳನ್ನೆಲ್ಲಾ ಪರಿಶೀಲಿಸಿದ ನಂತರ ಅರ್ಧ ತಾಸಿನಲ್ಲಿ ಹೊರಬಂದೆವು.

ನನ್ನ ಸೋದರಿ ನಂದಾ, ಅವಳ ಪತಿ ಉದಯ, ಅವರ ಎರಡು ವರ್ಷದ ಮಗಳು ಸುಪ್ರಿಯು ನಿಲ್ದಾಣದಲ್ಲಿ ನಮಗಾಗಿ ಕಾಯುತ್ತಿದ್ದರು. ಎಲ್ಲರೂ ಭೆಟ್ಟಿಯಾಗಿ ಖುಷಿ ವ್ಯಕ್ತಪಡಿಸಿಕೊಂಡೆವು. ನಂತರ ಅವರ ಮನೆಯಲ್ಲಿ 3 ದಿನಗಳು ಇದ್ದು. Cargo ದಿಂದ ಬಂದ ನಮ್ಮ ಸಾಮಾನುಗಳೆಲ್ಲ ಪರಿಶೀಲನಾ ವಿಭಾಗದಲ್ಲಿ ಪರಿಶೀಲಿಸಿ ಕೆಲವೊಂದಕ್ಕೆ ಸುಂಕ ಕೊಟ್ಟು ಮತ್ತೊಂದು ಸಲ ಪ್ಯಾಕ್ ಮಾಡಿ ಊರಿಗೆ ಕಳಿಸಿದೆವು. ಸಾಮಾನು ಸರಂಜಾಮುಗಳೊಂದಿಗೆ ಬಾಂಬೆಯಿಂದ ವಿಮಾನ ಮೂಲಕ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಬಂದಿಳಿದಾಗ, ಬೆಳಗಿನ ತುಂತುರು ಮಳೆ ನಮ್ಮನ್ನು
ಸ್ವಾಗತಿಸಿದಂತೆನಿಸಿತು.

***

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...