Home / ಕವನ / ಕವಿತೆ / ಭಯ ಪುರಾಣ

ಭಯ ಪುರಾಣ

ಭಯಕೆ ನಾನಾ ರೂಪಗಳ ಕೊಟ್ಟು
ಬಂಗಾರ ಬೆರಳುಗಳಿಂದ ಅಲಂಕರಿಸಿ
ಕಳ್ಳರ ಭಯಕ್ಕೆ ಭದ್ರವಾಗಿ ಬೀಗ ಜಡಿದು ಕುಳ್ಳರಿಸಿ
ಮಾರಿ ಕಾಲರಾ ಭಯ, ರೋಗ ರುಜಿನ ಭಯ
ಸಾವು ವೈರಿಗಳ ಭಯ ಮೊದಲಾದ ಅನೇಕ ಭಯಗಳು
ದೂರಾಗಲೆಂದು ಭಯದಿಂದ ಅಡ್ಡ ದಿಡ್ಡ ಬೋರಲು
ಬಿದ್ದು ಬೇಡುತ್ತೇವೆ
ಕತ್ತಲೆಯು ಕತ್ತಲೆಯನ್ನು ಹಡೆದಂತೆ
ಭಯವು ಭಯವನ್ನೇ ಹಡೆಯುತ್ತ ಹಡೆಯುತ್ತ
ದೇಶದಲ್ಲೆಲ್ಲಾ ಭಯದ ಹುಳುಗಳೇ ತುಂಬಿವೆ
ಭಯದ ಕೊಳ ಪಾಚಿಗಟ್ಟಿದೆ
ಅದರಲ್ಲೇ ಶಾಶ್ವತ ಕೊಳೆಯಲು
ಭಯಾನಕ ಅದ್ಭುತ ಗೊಳ್ಳು ಪುರಾಣಗಳು ಸಂಕೀರ್ತನೆಗಳು
ಕೊಳೆ ಹೊಳೆ ನಿರಂತರ ಹರಿದಿವೆ
ಭಯದಿಂದ ಅದನ್ನು ಕೇಳುತ್ತ ಕೇಳುತ್ತ
ಪ್ರಶ್ನೆ ಮಾಡುವ ಶಕ್ತಿ ಸತ್ತು ಹೋಗಿದೆ
ಭಯದ ಪಾಳುಬಾವಿ ಎಂದೆಂದೂ ಬತ್ತದಂತೆ
ವಟಗುಟ್ಟುವ ಕಪ್ಪೆಗಳು ಹೊಟ್ಟೆ ಬೆಳೆಸಿಕೊಳ್ಳುತ್ತವೆ
ಶರಣಾಗಿ ತಲೆಬಾಗದವರನ್ನು
ರಕ್ತ ಕಾರಿಸಿ ಕೊಲ್ಲುತ್ತವೆ
ಅವರ ಮಕ್ಕಳ ಮರಿ ಕಬಳಿಸುತ್ತವೆ
ಎಂದೇನೇನೋ ನಿಗೂಢ ಭಯಗಳು
ರಾಜ ಮರ್ಯಾದೆಯ ಷೋಡಶೋಪಚಾರ ಶೃಂಗಾರಗಳೆಲ್ಲ
ದೇವರೆಂಬ ಗೊಂಬೆಗಳಿಗೆ ಬೇಕು
ಹೆಣ ಸಿಂಗಾರವಲ್ಲದೆ ಬೇರೆ ಫಲವಿಲ್ಲ
ಹೊಗಳಿಕೆಗೆ ಬಾಯಿ ಬಿಡುವ ಅವು
ತೆಗಳುವವರ ಶಿಕ್ಷಸದೆ ಬಿಡುವುದಿಲ್ಲ
ಅವನ್ನು ಒಲಿಸಿಕೊಳ್ಳಲು ಪ್ರಾರ್ಥನೆ ಕೀರ್ತನೆ
ವಾದ್ಯಗಳ ಮೊರೆತ ಬೆಂಕಿಹಾರಾಟ
ಮುಂತಾದ ಭಯಾನಕಗಳು
ಕುರಿ ಕೋಣಗಳ ಬಲಿಯನ್ನು
ಕೆಲವು ಕೇಳುತ್ತವೆ ಶಾಖಾಹಾರಿಗಳು
ಇನ್ನೂ ಕೆಲವು ಸಸ್ಥಾಹಾರಿಗಳು
ಅವಕ್ಕೆ ನವರಸ ಭಕ್ಷ್ಯ ಭೋಜ್ಯಗಳು ಬೇಕು
ದೈವ ಸಾಕ್ಷಾತ್ಕಾರಕ್ಕೆ ತಾವೇ ಪರವಾನಿಗೆದಾರರೆಂದು
ಮೆರೆಯುವ ಬಗೆಬಗೆಯ ಗುರು ಜಗದ್ಗುರುಗಳಿಗೆ
ಬುದ್ದೀ ಸ್ಥಾಮೀ ಎಂದು ಭಯದಿಂದ ಅಡ್ಡ ಬೀಳಬೇಕು
ರಾಜರ ಮೆರೆದಾಟ ವೈಭವಗಳೆಲ್ಲ ಈ ಸನ್ಯಾಸಿಗಳಿಗೂ ಬೇಕು
ಯಾವುದೋ ಪುಣ್ಯಾತ್ಮನ ಹೆಸರಿನಲ್ಲಿ ಮಠಗಳು
ಅವುಗಳಲ್ಲಿ ಗದ್ದುಗೆಯೇರಿದ ಹದ್ದುಗಳು ಮರ್ಕಟಗಳು
ಹೀಗೆ ಗುಡಿ ಮಠ ಜಾತ್ರೆ ಪೂಜೆ ಪುರಾಣಾದಿ
ಕೊಳಚೆಯ ಪ್ರವಾಹದಲ್ಲಿ ಮುಳಿಗೇಳುತ್ತ
ಮತ್ತೆ ಮತ್ತೆ ಮತ್ತೇರಿ ಮುಳುಗಿ
ಹೆಣಗಳಾಗಿ ಹೋಗಿರುವ ನನ್ನ ಜನರೇ
ಸಾಕಿನ್ನು ಭಯಾವಳಿ ಭವಾವಳಿಗಳ
ಬೆಂಡು ಬೆಂಡಾದ ತುಂಡು ತುಂಡಾದ ಬೀಳು ಬಾಳುಗಳು
ಭಯವನ್ನೇ ತುಂಬಿ ಬೆಳಸುತ್ತಾ ಬಂದ
ಪುರಾಣ ಕಂತೆಗಳ ಕಟ್ಟಿಟ್ಟು ಬಿಡಿ
ಇಲ್ಲಾ ತಿಪ್ಪೆಗೆಸೆದು ಬಿಡಿ
ಭಯದ ಕೋಟೆಗಳಂತಿರುವ ಗುಡಿ ಗುಂಡಾರಗಳ
ಮ್ಯೂಜಿಯಮ್ಮುಗಳಾಗಿ ಮಾಡಿ
ಗೊಂಬೆಗಳ ಮಕ್ಕಳಿಗೆ ಕಲೆಗಾಗಿ ತೋರಿಸಿ
ಜನರ ಭಯದ ಆಧಾರದ ಮೇಲೆ ಬೊಚ್ಚು ಬೆಳೆಸಿರುವ
ಮಠಾಧೀಶ್ವರ ಪೂಜಾರಿ ಬಾಬಾಗಳನ್ನಲ್ಲ
ಹೊಲ ಗದ್ದೆ ತೋಟ ಕಟ್ಟಡ ಕಾರ್ಖಾನೆಗಳಿಗೆ
ಎಳೆ ತಂದು ದುಡಿಯ ಹಚ್ಚಿರಿ ನಮ್ಮ ನಿಮ್ಮಂತೆ
ಜಾತ್ರೆ ಪರಿಷೆಗಳನ್ನೆಲ್ಲ ಜನ ಬಾಳಲು ನೆರವಾಗುವ
ಜಾನಪದ ಕುಶಲ ಕಲಾಮೇಳಗಳನ್ನಾಗಿ ಮಾಡಿ
ದೇವರು ಮೈಯಲ್ಲಿ ಬರುವ ಭಕ್ತಿಯಾವೇಶದ ಭ್ರಮಿಷ್ಟರನ್ನು
ಹುಚ್ಚಾಸ್ಪತ್ರೆಗಳಿಗೆ ಸೇರಿಸಿ ತಲೆ ಸರಿಮಾಡಿ
ಮಠಗಳನ್ನೆಲ್ಲಾ ಕಾಯಕ ಕೇಂದ್ರಗಳನ್ನಾಗಿ ಪರಿವರ್ತಿಸಿ
ಮಾನವ, ಮಾನವ ಚೈತನ್ಯ, ಮಾನವತೆಯನ್ನು ಬಿಟ್ಟು
ಬೇರೆ ದೇವರಿಲ್ಲ ಕಾಣಿರೋ .

ಭಯದ ಕೂಸುಗಳಾದ ಚಿಲ್ಲರೆ ದೇವರುಗಳನ್ನು
ಆ ಚಿಲ್ಲರೆಗಳ ಮೇಲೆ ಹೊಟ್ಟೆ ಹೊರೆಯುವ
ಪರೋಪಜೀವಿ ಬುರುಸುಗಳನ್ನು ಕೊಳೆಯನ್ನೆಲ್ಲ
ಸಾರಾಸಗಟಾಗಿ ತೊಳೆಯಿರಿ
ಭಯವಿಲ್ಲದ ಮಾನವರಾಗಿ ಬೆಳೆಯಿರಿ
*****

Tagged:

Leave a Reply

Your email address will not be published. Required fields are marked *

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...