Home / ಕವನ / ಕವಿತೆ / ಮೋಡಿಕಾರ

ಮೋಡಿಕಾರ

ಮೋಡಿಕಾರ ಮುತ್ತಯ್ಯನ ಚೀಲದಿ
ಅಯ್ದೆಂದರೆ ಅಯ್ದೇ ಒಡವೆಗಳು
ಹುಲ್ಲು ಕಡ್ಡಿಗಳ ಕಟ್ಟೊಂದಿಹುದು
ಇನಿತರಿಂದಲೆ ಬೆರಗಿನಾಟವನು ಹೂಡಿಹನು
ವಿಧ ವಿಧದ ರೀತಿಯಲಿ ಅಯ್ದೊಡವೆಗಳ ಬೆರಸಿ
ಚಿನ್ನವನು ಮಾಡಿಹನು ಮಣ್ಣುಗಳ ಮಾಡಿಹನು
ರತ್ನ ವಜ್ರಾದಿಗಳ ತಾಮ್ರ ತವರಿದ್ದಲಿಯ
ಲವಣಾದಿ ಉಪ್ಪುಗಳ ಕಡಲುಕಣಿ ರಚಿಸಿಹನು
ಹುಲ್ಲುಗಳ ಬಗೆಯೇಸು, ಹಣ್ಣುಗಳ ವಿಧವೇಸು?
ಮಣ್ಣುಗಳ ಬಣ್ಣಗಳನೆಣಿಸಲಹುದೇ?
ಕಲ್ಲುಗಳ ಜಾತಿಯನು ಗುಣಿಸಲಹುದೇ?
ಮೂಳೆನರನೆತ್ತರದ ಚೀಲುಗಳ ರಚಿಸಿ
ತನ್ನ ಕಟ್ಟಿನ ಕಡ್ಡಿ ಅದರ ನೆತ್ತಿಗೆ ಚುಚ್ಚಿ
ಮಂತ್ರವನ್ನು ಸುರಿದರೆ ಆ ಗೊಂಬೆಗುಸಿರು
ನುಡಿಯುವದು-ನಲಿಯುವದು-ಕುಣಿಯುವುದು-ಕುಡಿಯುವದು
ಗೊಂಬೆಗಳ ಗುಣಗಣದ ಹೊಲಬನರಿವುದಸಾಧ್ಯ!
ಕೋಟಿರೂಪದ ಕೀಲು ಬೆರಗುಗೊಳಿಸುವ ಒಗಟು !
ನೆತ್ತಿಯಿಂದಾ ಕಡ್ಡಿ ಕಿತ್ತಿ ಕಡೆದೆಗೆದೊಗೆಯೆ
ನಿಂತ ನಿಂತಲ್ಲಿಯೇ ಆ ಗೊಂಬೆ ಬೀಳುವದು
ರಕ್ತಮಾಂಸಗಳೆಲ್ಲ ಅಯ್ದೊಡವೆಯಾಗುವವು
ಮಾಡುವನು ಆಡುವನು ತಾನೋಡಿ ನಲಿಯುವನು
ಆಟ ಸಾಕೆಂದೆನಿಸೆ ಮುರಿದು ಮೊಟ್ಟೆಯಕಟ್ಟಿ
ಮತ್ತೊಂದು ಹೂಡುವನನು

ಇವನೆಂಥ ಮೋಡಿಕಾರನಯ್ಯ!
ಮಂತ್ರಗಳ ಶಕ್ತಿಯೇನು, ತಂತ್ರಗಳಯುಕ್ತಿಯೇನು?
ಆಟ ಹೂಡಿದ ದಿವಸನೆಂದೆಂದೋ ಏನೋ !
ಮುಗಿವ ಮಿತಿ ತಿಳಿವುದೇನೋ?
*****

ಪುಸ್ತಕ: ಸಾಗರ ಸಿಂಪಿ

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...