Home / ಲೇಖನ / ವಿಜ್ಞಾನ / “ಎಲೆಕ್ಟ್ರಾನಿಕ್” ಯುಗದ ಆಶ್ಚರ್ಯ “ಗಣಕಯಂತ್ರ”

“ಎಲೆಕ್ಟ್ರಾನಿಕ್” ಯುಗದ ಆಶ್ಚರ್ಯ “ಗಣಕಯಂತ್ರ”

ಗಣಕಯಂತ್ರಕ್ಕೆ “ಕಂಪ್ಯೂಟರ್” ಎಂಡು ಎಲ್ಲರೂ ಸಂಬೋಧಿಸುತ್ತ ಸರ್ವವ್ಯಾಪಿಗೊಳಿಸಿದ್ದಾರೆ. ಏಕೆಂದರೆ ಇದು ಎಣಿಸಬಲ್ಲ, ಬರೆಯಬಲ್ಲ ಸಂಕೀರ್ಣ ಸಮಸ್ಯೆಗಳನ್ನು ಅತಿಬೇಗ ಕರಾರುವಾಕ್ಕಾಗಿ ಬಗೆಹರಿಸುವ ಒಂದು ವಿಸ್ಮಯ ಯಂತ್ರ. ಇತ್ತೀಚೆಗೆ ಗಣಕಯಂತ್ರಗಳಿಲ್ಲದೇ ನವೀನ ಪ್ರಪಂಚವು ಚಲನಶೀಲವಾಗುತ್ತದೆ ಎಂದು ಹೇಳುವುದು ಕಷ್ಟಕರ. ಕಾರ್ಖಾನೆಗಳು, ಕಛೇರಿಗಳು, ವೈಜ್ಞಾನಿಕ ಸಂಸ್ಥೆಗಳು ಶಾಲೆ, ಹೋಟೆಲ್‌ಗಳು, ಉಪಹಾರಗೃಹಗಳು, ಅಂಗಡಿ ಹೀಗೆ ಎಲ್ಲೆಂದರಲ್ಲಿ ವಿಹರಿಸುತ್ತ ವಾಸ್ತವ್ಯ ಹೂಡಿವೆ ಎಂದರೆ ತಪ್ಪಾಗಲಾರದು.

ಇತಿಹಾಸ ಮತ್ತು ಬೆಳವಣಿಗೆ : ೩೦೦೦ ವರ್ಷಗಳ ಸುಮಾರಿಗೆ ಚೀನೀಯರಿಂದ ‘ಅಬಾಕಸ್’ ಎಂದು ಕರೆಯುವ ಸಾಧನದ ಬೆಳವಣಿಗೆಯೊಂದಿಗೆ ಗಣಕ
ಯಂತ್ರದ ಇತಿಹಾಸವು ಪ್ರಾರಂಭವಾಗುತ್ತದೆ. ನಂತರ ಇದರ ಉಪಯೋಗಪು ಈಜಿಪ್ಟ್ ಗ್ರೀಕ್‌ಗೆ ಹರಡಿತು. ೧೬ನೇ ಶತವಮಾನದಲ್ಲಿ ಜಾನ್‌ಸಿಪಿಯರ್ ಎಂಬ ಒಬ್ಬ ಸ್ಕಾಟನು ನೇಪಿಯರ್ಸನ ಮೂಳೆಗಳು ಎಂಬ ಲೆಕ್ಕಮಾಡುವ ಸಾಧನವನ್ನು ಅಭಿವೃದ್ಧಿಪಡಿಸಿದ. ದೊಡ ಸಂಖ್ಯೆಗಳ ಗುಣಾಕಾರ, ಭಾಗಾಕಾರ ಮಾಡಲು ಈ ಯಂತ್ರವು ಉಪಕಾರಿಯಾಗಿತ್ತು ಕ್ರಿ.ಶ. ೧೬೨೦ರಲ್ಲಿ ಸರಿಯುವ ಅಳತೆಪಟ್ಟಿ (ಸ್ಲೈಡ್ ರೂಲ್) ಪಟ್ಟಿಯನ್ನು ಯೂರೋಪಿನಲ್ಲಿ ವಿಲಿಯಂ ಹೌಹ್‌ಟ್ರೆಡ್ ಕಂಡು ಹಿಡಿದನು. ಸ್ವಯಂ ಚಾಲಿತ ಗಣಕೀಕರಣದ ಕ್ಷೇತ್ರದಲ್ಲಿ ಮುಂದಿನ ಪ್ರಯತ್ನ ಕ್ರಿ.ಶ. ೧೬೪೨ರಲ್ಲಿ ಒಬ್ಬ ಪ್ರೆಂಚ್ ಭೌತವಿಜ್ಞಾನಿ ಮತ್ತು ಗಣಿತತಜ್ಞ ಚಾರ್ಲ್ಸ್ ಬ್ಲೇಯಿಸ್ನಿಂದ ಮಾಡಲ್ಪಟ್ಟಿತು.

ನೂರಾರು ವರ್ಷಗಳವರೆಗೆ ವಿವಿಧ ಲೆಕ್ಕಮಾಡುವ ಯಂತ್ರಗಳನ್ನು ಕಂಡುಹಿಡಿದು ಪ್ರಪಂಚದ ಎಲ್ಲ ಭಾಗಗಳಲ್ಲಿ ಉಪಯೋಗಿಸಲಾಯಿತು. ಇದಕ್ಕೆ ಸಂಬಂಧಿಸಿದಂತೆ ಮುಂದೆ ಕ್ರಿ.ಶ. ೧೮೩೦ರಲ್ಲಿ ಒಬ್ಬ ಇಂಗ್ಲೀಷ್ ಗಣಿತ ತಜ್ಞ ಚಾರ್ಲ್ಸ್‌ ಬಾಬ್ಚೇಜ್ ಒಂದು “ಯಾಂತ್ರಿಕ ಕ್ಯಾಲ್ಕುಲೇಟರ” ನ್ನು ಕಂಡು ಹಿಡಿದ. ಇದನ್ನು ಕೂಡ ಗಣಕ ಯಂತ್ರಕ್ಕೆ ಅಳವಡಿಸಿದ. ಅಂದಿನ ದಿನಗಳಲ್ಲಿ ಪರಿಪೂರ್ಣ ಗಣಕ ಯಂತ್ರಜ್ಞನೆಂದು ಇವನಿಗೆ “ನವೀನ ಗಣಕಯಂತ್ರ
ಪಿತಾಮಹ’ನೆಂದು ಕರೆಯಲಾಯಿತು. ಬಂದೂಕುಗಳಿಗೆ ಮಾರ್ಗದರ್ಶನ ಮಾಡುವ ಮತ್ತೊಂದು ಗಣಕಯಂತ್ರವನ್ನು ಕ್ರಿ.ಶ. ೧೯೩೦ ರಲ್ಲಿ ಪುನಃ ಹೊಸ ಆವಿಷ್ಕಾರಗಳೊಂದಿಗೆ ಇಂಜಿನಿಯರ್ ‘ವಾನ್ನೆವಾರ್ ಬುಶ್’ ಎಂಬುವವನು ‘ಅನಲೋಗ್’, ಗಣಕಯಂತ್ರವನ್ನು ರಚಿಸಿದನು. ಕೊನೆಗೆ ೧೯೪೬ರಲ್ಲಿ ಜೆ.ಪ್ರೆಸ್ಟರ್, ಮತ್ತು ಜಾನ್‌ಮೌಚ್ಲಿ ಎಂಬುವವರಿಂದ ನಿಜವಾದ ಎಲೆಕ್ಟ್ರಾನಿಕ್ ಗಣಕ ಯಂತ್ರ (E.N.I.A.C) (ಎಲೆಕ್ಟ್ರಾನಿಕ್ ನ್ಯೂಮೆರಿಕ್ ಇಂಟಿಗ್ರೇಟರ್ ಮತ್ತು ಕ್ಯಾಲ್ಕ್ಯುಲೇಟರ್) ವನ್ನು ಇದು ಹೊಂದಿದೆ. ಇವರು ಪೆನ್ಸಿಲ್ವೇನಿಯಾ ವಿಶ್ವವಿದ್ಯಾನಿಲಯದ ವಿಜ್ಞಾನಿಗಳಾಗಿದ್ದವರು. ಇದು ದೊಡ್ಡ ಗಣಕಯಂತ್ರವಾಗಿದ್ದು ೧೮೦೦೦ ನಿರ್ವಾತ ಕೊಳವೆಗಳನ್ನು ಉಪಯೋಗಿಸಿತು.

ಟ್ರಾನ್ಸಿಸ್ಟರ್‌ಗಳು ಮತ್ತು ಸಿಲಿಕಾನ್ ಬಿಲ್ಲೆಗಳು ಮುಂತಾದ ಹೊಸ ತಂತ್ರಜ್ಞಾನಗಳ ಅಭಿವೃದದ್ಧಿಯಾಗುತ್ತಿದ್ದಂತೆ ಗಣಕಯಂತ್ರವು ತೀವ್ರ ಬದಲಾವಣೆಯನ್ನು ಹೊಂದಿತು. ಮೊದಲಿನ ಮಾದರಿಗಳಿಗಿಂತ ಅವಿಷ್ಟಾರಗೊಳ್ಳುತ್ತ ಈಗೀಗ ಚಿಕ್ಕದಾಗಿರುವ ಹೆಚ್ಚು ಕರಾರುವಕ್ಕಾಗಿರುವ ಮತ್ತು ಕಡಿಮೆ ಖರ್ಚಿನ ಗಣಕಯಂತ್ರಗಳು ದೊರೆಯುತಲಿವೆ. ಸಮಗ್ರ ಮಂಡಲಗಳು ಮತ್ತು ಸೂಕ್ಷ್ಮ ಎಲೆಕ್ಟ್ರಾನಿಕ್ ಮಂಡಲ ಮುಂತಾದವುಗಳಲ್ಲಿ ಗಣಕಯಂತ್ರದ ಸಮರ್ಥನೆಯನ್ನು ಹೆಚ್ಚಿಸಿವೆ.

ಗಣಕಯಂತ್ರದ ಉಪಯೋಗಗಳು : ಗಣಕ ಯಂತ್ರಗಳು ವೇಗವಾಗಿ ಕೆಲಸಮಾಡುವುದರಿಂದ ಅವು ಬಹು ಉಪಯುಕ್ತವಾಗಿದ್ದು ಸೂಚನೆಗಳನ್ನು ಸೆಕೆಂಡಿನ ಭಾಗಾಂಶದೊಳಗೆ ನಿರ್ವಹಿಸುತ್ತವೆ.

ಫಲಿತಾಂಶಗಳನ್ನು ಕೊಡುವುದರಲ್ಲಿ ಇವು ನಿಖರವಾಗಿದ್ದು ತಮ್ಮಷ್ಟಕ್ಕೆ ತಾವೇ ತಪ್ಪು ಮಾಡಲಾರವು.

ಅಪರಿಮಿತ ಅನುಷ್ಠಾನ ಮತ್ತು ಶಕ್ತಿಯನ್ನು ಅವುಗಳ ಸಂಗ್ರಹಣಾ ಸಾಮರ್ಥ್ಯದಿಂದ ಪಡೆದಿದ್ದು ಬಹಳ ಹೆಚ್ಚಿನ ಅಂಕಿ‌ಅಂಶಗಳನ್ನು ಬಹಳವೇಗವಾಗಿ ಮತ್ತು ಅನುಕೂಲವಾದ ರೀತಿಯಲ್ಲಿ ಮರಳಿಪಡೆಯುತ್ತವೆ.

ಇವು ಎಲ್ಲ ಸಾಧುವಾದ ಕ್ಷೇತ್ರ ಮತ್ತು ವಿದ್ಯೆಯಲ್ಲಿ ಉಪಯೋಗಿಸಬಹುದು. ಒಬ್ಬ ಅಣುವಿಜ್ಞಾನಿಗೆ ಸಹಾಯ ಮಾಡಿದಂತೆ ಒಬ್ಬ ಗೃಹಿಣಿಯ ಅಡುಗೆ ಮನೆಯ ದಿನನಿತ್ಯದ ಕಾರ್ಯಗಳನ್ನು ಇನ್ನು ಚೆನ್ನಾಗಿ ನಿರ್ವಹಿಸಲು ಸಹಾಯ ಮಾಡುತ್ತದೆ.
*****

ಪುಸ್ತಕ: ವಿಜ್ಞಾನದ ವಿಸ್ಮಯ ಶೋಧಗಳು

Tagged:

Leave a Reply

Your email address will not be published. Required fields are marked *

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...