Home / ಬಾಲ ಚಿಲುಮೆ / ಕಥೆ / ಅರಸು ಮಂತ್ರಿಗಳ ಕಥೆ

ಅರಸು ಮಂತ್ರಿಗಳ ಕಥೆ

ನಂದನೆಂಬ ಒಬ್ಬಾನೊಬ್ಬ ರಾಜನು ಇದ್ದನು. ಸಮುದ್ರಗಳವರೆಗಿನ ಭೂಮಿಯೆಲ್ಲವೂ ಆತನದು. ಆತನಿಗೆ ವರರುಚಿಯೆಂಬ ಒಬ್ಬ ಮಂತ್ರಿಯಿದ್ದನು. ಆತನು ಸರ್ವಶಾಸ್ತ್ರಗಳನ್ನೂ ಬಲ್ಲವನು.
ಆ ಮಂತ್ರಿಯು ಒಂದು ದಿನ ಹೆಂಡತಿಯೊಡನೆ ಸರಸವಾಡುತ್ತಾ ಇರುವಾಗ ಅವಳಿಗೆ ಕೋಪ ಬಂತು. ಆತನು ಏನು ಮಾಡಿದರೂ ಅವಳು ಕೋಪವನ್ನು ಬಿಡಲಿಲ್ಲ. ಆಗ ಆತನು “ಏನು ಮಾಡಿದರೆ ನಿನ್ನ ಕೋಪವು ತೀರುವುದು? ಅದನ್ನಾದರೂ ಹೇಳು?” ಎಂದು ಕೇಳಿದನು. ಅವಳು “ನೀನು ತಲೆಯನ್ನು ಇವೊತ್ತೇ ಬೋಳಿಸಿಕೊಂಡು ನನ್ನ ಕಾಲಿಗೆ ಬೀಳಬೇಕು” ಎಂದಳು. ಆ ದಿನ ಅಮಾವಾಸ್ಯೆ. ಅಮಾವಾಸ್ಯೆ, ಹುಣಿಮೆ, ಸಂಕ್ರಮಣ, ಇವು ಪರ್ವಗಳು. ತಿಳಿದವರು ಯಾರೂ ಆ ದಿನಗಳಲ್ಲಿ ತಲೆಯನ್ನು ಬೋಳಿಸಿಕೊಳ್ಳುವುದಿಲ್ಲ. ಆದರೂ ವರರುಚಿಯು ಹೆಂಡತಿಗೆ ಸಂತೋಷವಾಗಲೆಂದು ತಲೆಯನ್ನು ಬೋಳಿಸಿಕೊಂಡು ಬಂದು ಅವಳ ಕಾಲಿಗೆ ಬಿದ್ದನು. ಅವಳಿಗೆ ಸಂತೋಷವಾಯಿತು: ಪ್ರಸನ್ನಳಾದಳು.
ಅತ್ತ ಅರಸನ ಹೆಂಡಿತಿಯೂ ಹೀಗೆಯೇ ಯಾವುದೋ ಕಾರಣಕ್ಕಾಗಿ ಕೋಪ ಮಾಡಿಕೊಂಡಳು. ಅರಸನೂ ಹೆಂಡಿತಿಯನ್ನು “ಏನು ಮಾಡಿದರೆ ಪ್ರಸನ್ನಳಾಗುವೆಯೋ ಹೇಳು” ಎಂದು ಕೇಳಿದನು. ಅವಳು “ನೀನು ಕುದುರೆಯಂತೆ ಬಾಯಿಗೆ ಕಡಿವಾಣ ಹಾಕಿಸಿಕೊಂಡು, ನನ್ನನ್ನು ಬೆನ್ನಿನ ಮೇಲೆ ಕುಳ್ಳರಿಸಿಕೊಂಡು ಕುದುರೆಯಂತೆ ಕೆನೆಯುತ್ತ ಓಡಬೇಕು.” ಎಂದಳು. ಅರಸನೂ ಹಾಗೆಯೇ ಮಾಡಿದನು.
ಮರುದಿನ ದೊರೆಯನ್ನು ಕಾಣುವುದಕ್ಕೆ ಮಂತ್ರಿಯು ಬಂದನು. ಅರಸನು ಮಂತ್ರಿಯು ತಲೆ ಬೋಳಿಸಿಕೊಂಡಿರುವುದನ್ನು ನೋಡಿ ಆಶ್ಚರ್ಯಪಟ್ಟು, “ಏನು ಮಂತ್ರಿಗಳೇ, ಪರ್ವಕಾಲದಲ್ಲಿಯೂ ಮುಂಡನವೇ?” ಎಂದನು. ಆತನು ನಗು ನಗುತ್ತಾ “ಮಹಾಸ್ವಾಮಿ, ಅರಸನು ಕುದರೆಯಂತೆ ಕಡಿವಾಣ ಕಚ್ಚಿಕೊಂಡು ಕೆನೆಯುತ್ತಾ ತಿರುಗಿದ ದಿವಸ ಪರ್ವವಾದರೂ ಮುಂಡನವಾಗಬಹುದು” ಎಂದನು. ಅರಸನು ಸುಮ್ಮನಾದನು.
ಅದರಿಂದ ಎಲೆ ದುಷ್ಟ ಮೊಸಳೆಯೇ, ನೀನೂ ನಂದವರ ರುಚಿಗಳಂತೆ ಸ್ತ್ರೀ ವಶನಾದವನು. ಒಂದು ಉಪಾಯ ಮಾಡಿ ನನ್ನನ್ನು ವಧ ಮಾಡಲು ಕರೆದುಕೊಂಡೂ ಹೋದೆ: ಆದರೆ ನಿನ್ನ ವಾಗ್ದೇಷದಿಂದಲೇ ನಿನ್ನ ಕೆಲಸ ಕೆಟ್ಟಿತು. ಕೇಳಿಲ್ಲವೇ?
ಶುಕ ಸಾರಿಕೆಗಳ ಬಂದಿಪುದೇಕೆ? ನುಡಿವುದರಿಂ ಬಂಧನವವಕೆ ॥ 
ಬಕವನು ಬಂಧಿಸದಿರುವುದದೇಕೆ? ನುಡಿಯದು ಬಂಧನವಿಲ್ಲದಕೆ ॥೨೨॥ 
ಮತ್ತು, 
ಹುಲಿಯಚರ್ಮವ ಹೊದ್ದುಕೊಂಡು | 
ಭೀತಿತೋರುವ ರೂಪುಗೊಂಡು 
ಮೇಯುತಿದ್ದಾ ಕತ್ತೆಗಂದು | 
ಕೂಗಿಕೊಂಡುದೆ ಮೃತ್ಯುವಾಯ್ತು ॥ ೨೩ ॥ 
ಮೊಸಳೆಯು… “ಅದು ಹೇಗೆ?” ಎನ್ನಲು ಕಪಿಯು ಹೇಳಿತು.
*****
ಹುಲಿಯಾಗಿದ್ದ ಕತ್ತೆಯ ಕಥೆ ಓದಿ
Tagged:

Leave a Reply

Your email address will not be published. Required fields are marked *

ಸರ್‍ಕಸ್ಸು ಮುಗಿದರೂ ಅವನು ಅಲ್ಲಿಯೇ ಕುಳಿತಿದ್ದ. ಎಲ್ಲಾ ಎದ್ದು ಹೋಗಿದ್ದರು. ಎರಡನೇ ಷೋ ಆರಂಭವಾಗಲು ಕೆಲವೇ ಸಮಯ ಉಳಿದಿತ್ತು. ಅವನ ಕಣ್ಣುಗಳು ಏನನ್ನೋ ಹುಡುಕುತ್ತಿದ್ದವು. ಆ ಸರ್‍ಕಸ್ಸಿನ ಹುಡುಗಿ ಪ್ರವೇಶಿಸಿ ಓಡಿ ಬಂದು ಎರಡು ಬಾರಿ ಲಾಗಾ ಹಾಕಿ ಇವನ ಮುಂದೆಯೇ ನಿಂತಂತಾಯಿತು. ಆಕೆಯ...

“ಸುಭದ್ರೆ, ನೀನು ಎಂದು….” ದೈನ್ಯವಾಣಿಯಿಂದ ಕೇಳಿಕೊಂಡ ಶ್ರೀಧರ. “ತಡೆ ಶ್ರೀಧರ. ಹ್ಞ. ಹತ್ತಿರ ಬರಬೇಡ. ಪ್ರತಿಯೊಂದು ಕಾರ್ಯಕ್ಕೂ ಮುಹೂರ್ತ ಬರಬೇಕು; ಸ್ವಲ್ಪ ಕಾಲ ತಡೆ. ಒಮ್ಮೆ ಹೇಳಿದೆ: ನಾನು ನಿನ್ನವಳೆಂದು, ನಂಬಿಕೊ.” “ಎಷ್ಟು ದಿನ ಈ ನ...

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...