Home / ಲೇಖನ / ಇತರೆ / ಕಾಳಿ ಕತೆ

ಕಾಳಿ ಕತೆ

ಈಗೀಗ ವಿದೇಶಗಳಲ್ಲಿ ವಿದೇಶಿಯರಲ್ಲಿ ಭವ್ಯ ಭಾರತದ ಬಗ್ಗೆ ಭವ್ಯ ಭಾರತೀಯ ದೇವಾನುದೇವತೆಗಳ ಬಗ್ಗೆ ತುಂಬಾ ತುಂಬಾ ಗೌರವ ಮೂಡುತ್ತಿದೆ. ಇದೆಲ್ಲ ಸ್ವಾಗತಾರ್ಹ.

ಭವ್ಯ ಭಾರತದ ಪ್ರಭಾವ, ಸಂಸ್ಕೃತಿ, ನಾಗರೀಕತೆ ಅಂಥಾದ್ದು! ಇಡೀ ವಿಶ್ವಕ್ಕೆ ಮಾದರಿ ಎಂಬುದರಲ್ಲಿ ಎರಡು ಮಾತಿಲ್ಲ!

ಇದೆಲ್ಲದ್ದಕ್ಕೂ ಪುಷ್ಠಿದಾಯಕವಾಗಿ ಇತ್ತೀಚೆಗೆ ಆಗಸ್ಟ್ ೨೦೧೫ ರ ಮೊದಲ ವಾರದಲ್ಲಿ ನೂಯಾರ್ಕ್‌ನ ಎಂಪೈರ್ ಬಿಲ್ಡಿಂಗ್ ಮೇಲೆ ಕಾಳಿದೇವಿಯ ಪ್ರದರ್ಶನವಿತ್ತು!

ಇಡೀ ನ್ಯೂಯಾರ್ಕಿನ ಜನತೆ ಅದರಲ್ಲೂ ಅಲ್ಲಿ ನೆಲೆಸಿರುವ ಭವ್ಯ ಭಾರತೀಯರೆಲ್ಲ ಈ ಅಭೂತಪೂರ್ವ ದೃಶ್ಯವೊಂದನ್ನು ಕಂಡು ಪುನೀತರಾಗಿದ್ದಾರೆ.

ನ್ಯೂಯಾರ್ಕಿನ ಕಲಾವಿದ ಆಂಡ್ರ್ಯೂ ಜೋನ್ಸ್- ಕಾಳಿದೇವಿಯ ಬೃಹತ್ ಚಿತ್ರ ರಚಿಸಿದ್ದರು. ಅದನ್ನು ಕಟ್ಟಡದ ಉದ್ದಕ್ಕೂ ಡಿಜಿಟಲ್ ಪರದೆಯಲ್ಲಿ ಪ್ರದರ್ಶಿಸಿದ್ದರು.

ಈ ಬೃಹತ್ ಚಿತ್ರ ನೋಡುಗರನ್ನು ಮಂತ್ರ ಮುಗ್ಧರನ್ನಾಗಿಸಿತ್ತು! ಸಾಕ್ಷಾತ್ ಕಾಳಿಕಾದೇವಿಯೇ ಆಕಾಶದಿಂದ ಧರೆಗಿಳಿದು ಬಂದಿದ್ದಳೆಂಬಂತೆ ಎದ್ದು ಕಾಣುತ್ತಿತ್ತು!

ಈಗೀನ ಪ್ರಕೃತಿ ಮಾತೆ ಹಿಂದೆಂದಿಗಿಂತಲೂ ಹೆಚ್ಚೆಚ್ಚು ಮಾನವನ ದುರಾಸೆಗಳಿಗಾಗಿ ನಾನಾ ರೀತಿಯ ಅತ್ಯಾಚಾರ ಅನಾಚಾರ… ಹಿಂಸೆ… ಅವಮಾನ, ಕ್ರೌರ್ಯ, ಬಲಿಗೆ ತುತ್ತಾಗಿ ನಿರಂತರವಾಗಿ ಮಾನವನ ಘೋರ ದಾಳಿಗಳಿಗೆ ಒಳಗಾಗುತ್ತಿರುವಳು. ಇದನ್ನೆ ಕಂಡು ರೋಸಿ ಹೋಗಿ ಇಂದು ಭೂಮಿಯನ್ನು ರಕ್ಷಿಸಲು ತಾಯಿ ಕಾಳಿಕಾ ಮಾತೆಯೇ ಪ್ರಚಂಡಾವತಾರ ಎತ್ತಲು ಕಾಲ ಸನಿಹವಾಗಿದೆಯೆಂಬ ಸಂದೇಹ ಸಾರಲು ಈ ಚಿತ್ರವೆಂದು ಕಲಾವಿದ ಆಂಡ್ರ್ಯೂ ಜೋನ್ಸ್ ತನ್ನ ಅಳಲನ್ನು ಅಂದು ತೋಡಿಕೊಂಡಿರುವನು.

ಇಲ್ಲಿ ನ್ಯೂಯಾರ್ಕಿನ ಜನಪ್ರಿಯ ಎಂಪೈರ್ ಬಿಲ್ಡಿಂಗ್‌ನ ಮೇಲೆ ಆಗಾಗ ಇಂಥ ಹಲವು ಚಿತ್ರಗಳನ್ನು ಪ್ರದರ್ಶಿಸುವುದು ಸರ್ವೇ ಸಾಮಾನ್ಯವಾಗಿದೆ. ಈಗ ಕಾಳಿ ಕತೆ ಜನರ ಮನದಲ್ಲಿ ನೆಲೆಯೂರಲಿ ಎಂದಿಗೂ ಈ ಪ್ರದರ್ಶನದ ಘನ ಉದ್ದೇಶವೆಂದು ಕಲಾವಿದ ಸಾರಿಕೊಂಡಿದ್ದಾನೆ.

ನಮ್ಮಲ್ಲಿಯೂ ಸಾಹಿತಿಗಳಿಗೆ, ಕಲಾವಿದರಿಗೆ ಇಂಥಾದೊಂದು ವೇದಿಕೆ ನಿರ್ಮಾಣವಾಗಬೇಕು. ಅದಕ್ಕಾಗಿ ನಾವು ನೀವು ಕಾಯೋಣವಲ್ಲವೇ?
*****

Tagged:

Leave a Reply

Your email address will not be published. Required fields are marked *

ಮಧ್ಯಾಹ್ನದ ಆರು ತಾಸಿನ ಸಮಯ. ಬಿಸಿಲು ರಣಗುಟ್ಟುತ್ತಿತ್ತು. ಕಲ್ಲವನು ಉರುವಲ ಹೊರೆಯೊಂದನ್ನು ಹೊತ್ತು ತಂದು, ಗುಡಿಸಲಿನ ಮುಂದೆ ಒಗೆದು ಬೇವಿನ ಗಿಡದ ನೆರಳಿನಲ್ಲಿ ಕುಳಿತು ಉಸ್ಸೆಂದು ಉಸುರುಗರೆದಳು. ಗುಡಿಸಲಿನೊಳಗಿಂದ ನಾಲ್ಕಾರು ಚಿಕ್ಕ ಮಕ್ಕಳು ಹೊರಗೆ ಹಾತೊರೆದು ಬಂದು, “ಅವ್...

ಬೀರ ಹಾಸಿಗೆಯಲ್ಲಿ ಹೊರಳುತ್ತಿದ್ದಾನೆ, ಕಣ್ಣಿಗೆ ನಿದ್ರೆಯಿಲ್ಲ; ಮನಸ್ಸಿಗೆ ಶಾ೦ತಿಯಿಲ್ಲ. ಸಾಯಂಕಾಲ ಊರ ಚಾವಡಿಯಲ್ಲಿ “ಹೆಚ್ಚು ಆಹಾರ ಧಾನ್ಯ ಬೆಳೆಯಿರಿ!” ಎಂಬ ವಿಷಯದ ಮೇಲೆ ಅಧಿಕಾರಿಗಳ ವ್ಯಾಖ್ಯಾನ ಕೇಳಿದ್ದನಾತ. ಆಗಿನಿಂದಲೂ ಅವನಿಗೆ ತಾನೊಂದು ಬಾವಿಯನ್ನೇಕೆ ತೋಡಬಾರದು ಎನ್ನ...

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...