Home / ಲೇಖನ / ಇತರೆ / ಕಾಳಿ ಕತೆ

ಕಾಳಿ ಕತೆ

ಈಗೀಗ ವಿದೇಶಗಳಲ್ಲಿ ವಿದೇಶಿಯರಲ್ಲಿ ಭವ್ಯ ಭಾರತದ ಬಗ್ಗೆ ಭವ್ಯ ಭಾರತೀಯ ದೇವಾನುದೇವತೆಗಳ ಬಗ್ಗೆ ತುಂಬಾ ತುಂಬಾ ಗೌರವ ಮೂಡುತ್ತಿದೆ. ಇದೆಲ್ಲ ಸ್ವಾಗತಾರ್ಹ.

ಭವ್ಯ ಭಾರತದ ಪ್ರಭಾವ, ಸಂಸ್ಕೃತಿ, ನಾಗರೀಕತೆ ಅಂಥಾದ್ದು! ಇಡೀ ವಿಶ್ವಕ್ಕೆ ಮಾದರಿ ಎಂಬುದರಲ್ಲಿ ಎರಡು ಮಾತಿಲ್ಲ!

ಇದೆಲ್ಲದ್ದಕ್ಕೂ ಪುಷ್ಠಿದಾಯಕವಾಗಿ ಇತ್ತೀಚೆಗೆ ಆಗಸ್ಟ್ ೨೦೧೫ ರ ಮೊದಲ ವಾರದಲ್ಲಿ ನೂಯಾರ್ಕ್‌ನ ಎಂಪೈರ್ ಬಿಲ್ಡಿಂಗ್ ಮೇಲೆ ಕಾಳಿದೇವಿಯ ಪ್ರದರ್ಶನವಿತ್ತು!

ಇಡೀ ನ್ಯೂಯಾರ್ಕಿನ ಜನತೆ ಅದರಲ್ಲೂ ಅಲ್ಲಿ ನೆಲೆಸಿರುವ ಭವ್ಯ ಭಾರತೀಯರೆಲ್ಲ ಈ ಅಭೂತಪೂರ್ವ ದೃಶ್ಯವೊಂದನ್ನು ಕಂಡು ಪುನೀತರಾಗಿದ್ದಾರೆ.

ನ್ಯೂಯಾರ್ಕಿನ ಕಲಾವಿದ ಆಂಡ್ರ್ಯೂ ಜೋನ್ಸ್- ಕಾಳಿದೇವಿಯ ಬೃಹತ್ ಚಿತ್ರ ರಚಿಸಿದ್ದರು. ಅದನ್ನು ಕಟ್ಟಡದ ಉದ್ದಕ್ಕೂ ಡಿಜಿಟಲ್ ಪರದೆಯಲ್ಲಿ ಪ್ರದರ್ಶಿಸಿದ್ದರು.

ಈ ಬೃಹತ್ ಚಿತ್ರ ನೋಡುಗರನ್ನು ಮಂತ್ರ ಮುಗ್ಧರನ್ನಾಗಿಸಿತ್ತು! ಸಾಕ್ಷಾತ್ ಕಾಳಿಕಾದೇವಿಯೇ ಆಕಾಶದಿಂದ ಧರೆಗಿಳಿದು ಬಂದಿದ್ದಳೆಂಬಂತೆ ಎದ್ದು ಕಾಣುತ್ತಿತ್ತು!

ಈಗೀನ ಪ್ರಕೃತಿ ಮಾತೆ ಹಿಂದೆಂದಿಗಿಂತಲೂ ಹೆಚ್ಚೆಚ್ಚು ಮಾನವನ ದುರಾಸೆಗಳಿಗಾಗಿ ನಾನಾ ರೀತಿಯ ಅತ್ಯಾಚಾರ ಅನಾಚಾರ… ಹಿಂಸೆ… ಅವಮಾನ, ಕ್ರೌರ್ಯ, ಬಲಿಗೆ ತುತ್ತಾಗಿ ನಿರಂತರವಾಗಿ ಮಾನವನ ಘೋರ ದಾಳಿಗಳಿಗೆ ಒಳಗಾಗುತ್ತಿರುವಳು. ಇದನ್ನೆ ಕಂಡು ರೋಸಿ ಹೋಗಿ ಇಂದು ಭೂಮಿಯನ್ನು ರಕ್ಷಿಸಲು ತಾಯಿ ಕಾಳಿಕಾ ಮಾತೆಯೇ ಪ್ರಚಂಡಾವತಾರ ಎತ್ತಲು ಕಾಲ ಸನಿಹವಾಗಿದೆಯೆಂಬ ಸಂದೇಹ ಸಾರಲು ಈ ಚಿತ್ರವೆಂದು ಕಲಾವಿದ ಆಂಡ್ರ್ಯೂ ಜೋನ್ಸ್ ತನ್ನ ಅಳಲನ್ನು ಅಂದು ತೋಡಿಕೊಂಡಿರುವನು.

ಇಲ್ಲಿ ನ್ಯೂಯಾರ್ಕಿನ ಜನಪ್ರಿಯ ಎಂಪೈರ್ ಬಿಲ್ಡಿಂಗ್‌ನ ಮೇಲೆ ಆಗಾಗ ಇಂಥ ಹಲವು ಚಿತ್ರಗಳನ್ನು ಪ್ರದರ್ಶಿಸುವುದು ಸರ್ವೇ ಸಾಮಾನ್ಯವಾಗಿದೆ. ಈಗ ಕಾಳಿ ಕತೆ ಜನರ ಮನದಲ್ಲಿ ನೆಲೆಯೂರಲಿ ಎಂದಿಗೂ ಈ ಪ್ರದರ್ಶನದ ಘನ ಉದ್ದೇಶವೆಂದು ಕಲಾವಿದ ಸಾರಿಕೊಂಡಿದ್ದಾನೆ.

ನಮ್ಮಲ್ಲಿಯೂ ಸಾಹಿತಿಗಳಿಗೆ, ಕಲಾವಿದರಿಗೆ ಇಂಥಾದೊಂದು ವೇದಿಕೆ ನಿರ್ಮಾಣವಾಗಬೇಕು. ಅದಕ್ಕಾಗಿ ನಾವು ನೀವು ಕಾಯೋಣವಲ್ಲವೇ?
*****

Tagged:

Leave a Reply

Your email address will not be published. Required fields are marked *

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...