Home / ಲೇಖನ / ಇತರೆ / ಕಾಳಿ ಕತೆ

ಕಾಳಿ ಕತೆ

ಈಗೀಗ ವಿದೇಶಗಳಲ್ಲಿ ವಿದೇಶಿಯರಲ್ಲಿ ಭವ್ಯ ಭಾರತದ ಬಗ್ಗೆ ಭವ್ಯ ಭಾರತೀಯ ದೇವಾನುದೇವತೆಗಳ ಬಗ್ಗೆ ತುಂಬಾ ತುಂಬಾ ಗೌರವ ಮೂಡುತ್ತಿದೆ. ಇದೆಲ್ಲ ಸ್ವಾಗತಾರ್ಹ.

ಭವ್ಯ ಭಾರತದ ಪ್ರಭಾವ, ಸಂಸ್ಕೃತಿ, ನಾಗರೀಕತೆ ಅಂಥಾದ್ದು! ಇಡೀ ವಿಶ್ವಕ್ಕೆ ಮಾದರಿ ಎಂಬುದರಲ್ಲಿ ಎರಡು ಮಾತಿಲ್ಲ!

ಇದೆಲ್ಲದ್ದಕ್ಕೂ ಪುಷ್ಠಿದಾಯಕವಾಗಿ ಇತ್ತೀಚೆಗೆ ಆಗಸ್ಟ್ ೨೦೧೫ ರ ಮೊದಲ ವಾರದಲ್ಲಿ ನೂಯಾರ್ಕ್‌ನ ಎಂಪೈರ್ ಬಿಲ್ಡಿಂಗ್ ಮೇಲೆ ಕಾಳಿದೇವಿಯ ಪ್ರದರ್ಶನವಿತ್ತು!

ಇಡೀ ನ್ಯೂಯಾರ್ಕಿನ ಜನತೆ ಅದರಲ್ಲೂ ಅಲ್ಲಿ ನೆಲೆಸಿರುವ ಭವ್ಯ ಭಾರತೀಯರೆಲ್ಲ ಈ ಅಭೂತಪೂರ್ವ ದೃಶ್ಯವೊಂದನ್ನು ಕಂಡು ಪುನೀತರಾಗಿದ್ದಾರೆ.

ನ್ಯೂಯಾರ್ಕಿನ ಕಲಾವಿದ ಆಂಡ್ರ್ಯೂ ಜೋನ್ಸ್- ಕಾಳಿದೇವಿಯ ಬೃಹತ್ ಚಿತ್ರ ರಚಿಸಿದ್ದರು. ಅದನ್ನು ಕಟ್ಟಡದ ಉದ್ದಕ್ಕೂ ಡಿಜಿಟಲ್ ಪರದೆಯಲ್ಲಿ ಪ್ರದರ್ಶಿಸಿದ್ದರು.

ಈ ಬೃಹತ್ ಚಿತ್ರ ನೋಡುಗರನ್ನು ಮಂತ್ರ ಮುಗ್ಧರನ್ನಾಗಿಸಿತ್ತು! ಸಾಕ್ಷಾತ್ ಕಾಳಿಕಾದೇವಿಯೇ ಆಕಾಶದಿಂದ ಧರೆಗಿಳಿದು ಬಂದಿದ್ದಳೆಂಬಂತೆ ಎದ್ದು ಕಾಣುತ್ತಿತ್ತು!

ಈಗೀನ ಪ್ರಕೃತಿ ಮಾತೆ ಹಿಂದೆಂದಿಗಿಂತಲೂ ಹೆಚ್ಚೆಚ್ಚು ಮಾನವನ ದುರಾಸೆಗಳಿಗಾಗಿ ನಾನಾ ರೀತಿಯ ಅತ್ಯಾಚಾರ ಅನಾಚಾರ… ಹಿಂಸೆ… ಅವಮಾನ, ಕ್ರೌರ್ಯ, ಬಲಿಗೆ ತುತ್ತಾಗಿ ನಿರಂತರವಾಗಿ ಮಾನವನ ಘೋರ ದಾಳಿಗಳಿಗೆ ಒಳಗಾಗುತ್ತಿರುವಳು. ಇದನ್ನೆ ಕಂಡು ರೋಸಿ ಹೋಗಿ ಇಂದು ಭೂಮಿಯನ್ನು ರಕ್ಷಿಸಲು ತಾಯಿ ಕಾಳಿಕಾ ಮಾತೆಯೇ ಪ್ರಚಂಡಾವತಾರ ಎತ್ತಲು ಕಾಲ ಸನಿಹವಾಗಿದೆಯೆಂಬ ಸಂದೇಹ ಸಾರಲು ಈ ಚಿತ್ರವೆಂದು ಕಲಾವಿದ ಆಂಡ್ರ್ಯೂ ಜೋನ್ಸ್ ತನ್ನ ಅಳಲನ್ನು ಅಂದು ತೋಡಿಕೊಂಡಿರುವನು.

ಇಲ್ಲಿ ನ್ಯೂಯಾರ್ಕಿನ ಜನಪ್ರಿಯ ಎಂಪೈರ್ ಬಿಲ್ಡಿಂಗ್‌ನ ಮೇಲೆ ಆಗಾಗ ಇಂಥ ಹಲವು ಚಿತ್ರಗಳನ್ನು ಪ್ರದರ್ಶಿಸುವುದು ಸರ್ವೇ ಸಾಮಾನ್ಯವಾಗಿದೆ. ಈಗ ಕಾಳಿ ಕತೆ ಜನರ ಮನದಲ್ಲಿ ನೆಲೆಯೂರಲಿ ಎಂದಿಗೂ ಈ ಪ್ರದರ್ಶನದ ಘನ ಉದ್ದೇಶವೆಂದು ಕಲಾವಿದ ಸಾರಿಕೊಂಡಿದ್ದಾನೆ.

ನಮ್ಮಲ್ಲಿಯೂ ಸಾಹಿತಿಗಳಿಗೆ, ಕಲಾವಿದರಿಗೆ ಇಂಥಾದೊಂದು ವೇದಿಕೆ ನಿರ್ಮಾಣವಾಗಬೇಕು. ಅದಕ್ಕಾಗಿ ನಾವು ನೀವು ಕಾಯೋಣವಲ್ಲವೇ?
*****

Tagged:

Leave a Reply

Your email address will not be published. Required fields are marked *

ಭಾಗ ೧ ಒಂದು ಯುನಿವರ್ಸಿಟೀನಲ್ಲಿ ಆಧ್ಯಾಪಕನಾಗಿರುವ ನಾನು ಕ್ಯಾಂಪಸ್ ಆವರಣದೊಳಗೇ ಇರುವ ಫ್ಲಾಟೊಂದರಲ್ಲಿ ಹೆಂಡತಿ ಮಕ್ಕಳ ಜತೆ ಮನೆ ಮಾಡಿಕೊಂಡಿದ್ದೇನೆ. ಮನೆ ಮತ್ತು ಆಫೀಸಿಗೆ ಹೆಚ್ಚೇನೂ ದೂರವಿಲ್ಲದ ಕಾರಣ ವಾಹನಗಳಿಗೆ ವೃಥಾ ಕಾಸು ಖರ್ಚು ಮಾಡಬೇಕಾದುದಿಲ್ಲ. ಮಧ್ಯಾಹ್ನ ಲಂಚಿಗೆ ಕೂಡ ಮನ...

ಬಣಸಾಲೆ ಮುಂದಿನಿಂದ ಹೆಜ್ಜೆ ಹಾಕುವಾಗ ಹೊತ್ತು ಕಂತಿದ್ದು ಲಕ್ಷ್ಯಕ್ಕೆ ಬಂದಿರಲಿಲ್ಲ. ಆಚೀಚಿನ ಹನೆಮರದೆತ್ತರದ ತೇಗ-ಮಾವುಗಳ ಟಿಸಿಲುಗಳಲ್ಲಿ ಹಕ್ಕಿಗಳ ಗರಿ ಒದರುವ ಸರಪರ. ತಾರಕ ಸ್ವರದ ಮಕ್ಕಳಾಟ ವೀಕ್ಷಿಸುತ್ತಾ ರಸ್ತೇಲಿ ಬಿದ್ದಿದ್ದ ಸಣ್ಣ ಸಣ್ಣ ಕಲ್ಲುಗಳನ್ನು ಕಾಲಿನಿಂದ ಚಿಮ್ಮುತ್ತಾ...

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...