Home / ಕಥೆ / ಕಿರು ಕಥೆ / ಚೈತನ್ಯದ ಹಬ್ಬ

ಚೈತನ್ಯದ ಹಬ್ಬ

“ತಂದೆ ತಾಯಿ, ಮಕ್ಕಳ ಹುಟ್ಟು ಹಬ್ಬ ಆಚರಿಸುವುದು ಏಕೆ”? ಎಂದು ಶಿಷ್ಯ ಗುರುಗಳಲ್ಲಿ ಕೇಳಿದ.
“ಅದು ಚೈತನ್ಯದ ಹಬ್ಬ. ಚೈತನ್ಯದ ಬೆಳವಣಿಗೆ, ವೃದ್ಧಿ ಇದರ ಸಂತೋಷವೇ ಹುಟ್ಟು ಹಬ್ಬ” ಎಂದರು ಗುರುಗಳು.
“ಅದು ಸಾವಿನಲ್ಲಿ ಕೊನೆ ಮುಟ್ಟುವುದಲ್ಲವೇ?” ಗುರುವೆ
“ಹುಟ್ಟಿಗೆ ಕೊಂಡಿ ಸಾವು. ಸಾವಿನ ಗಿಂಡಿ ಹುಟ್ಟು, ಚೈತನ್ಯಕ್ಕೆ ಸಾವಿಲ್ಲ ಅದು ಎಡವುದಿಲ್ಲ. ಬೀಳುವುದಿಲ್ಲ, ಮೃತ್ಯು ಶಯ್ಯೆಯಲ್ಲಿ ಮಲಗುವುದಿಲ್ಲ. ಚೈತನ್ಯ ಒಂದು ನಿರಂತರ ಪ್ರವಾಹ. ಅದೊಂದು ಅವಿರತ ಜೀವನದಿ. ಬತ್ತದ ಸಾಗರ, ಚೈತನ್ಯಕ್ಕೆ ಕೊಡಬೇಕಾದದ್ದು ಅಮರತ್ವದ ಪಟ್ಟ ಸಾವಿನ ಪಟ್ಟವಲ್ಲ” ಎಂದರು ಗುರುಗಳು.
“ಇದು ನಿಸರ್ಗದ ನಿಯಮವೇ ಗುರುಗಳೇ?”
“ಅಹುದು ಶಿಷ್ಯ! ಹೂವನ್ನು ನೋಡು, ಗಿಡವನ್ನು ನೋಡು, ನದಿ, ಜಲಪಾತ ಎಲ್ಲದರಲ್ಲೂ ಚೈತನ್ಯದ ಪ್ರವಾಹವಿದೆ. ಒಮ್ಮೆ ಎಲ್ಲೋ ಸಮಾಪ್ತಗೊಂಡಂತೆ ಅನಿಸಿದರು ಅದು ಮತ್ತೆ ಸಮಾವೇಶಗೊಂಡು ಮತ್ತೊಮ್ಮೆ ಎಲ್ಲೊ ಪ್ರಾದುರ್ಭವಿಸುತ್ತದೆ. ಹೂವು ಅರಳಿ ಪರಿಮಳ ಸೂಸಿ, ಬೀಜವಾಗಿ ಉದರಿ ಮತ್ತೆ ಗಿಡವಾಗಿ ಹೂ ಬಿಟ್ಟು, ಅರಳುತ್ತದೆ. ಗಂಧವಾಗುತ್ತದೆ. ಇದೊಂದು ಚೈತನ್ಯದ ಸಕ್ರಿಯ ವೃತ್ತಿ, ಚೈತನ್ಯ ನಾನಾ ರೂಪದಲ್ಲಿ ಊರ್ಧವಗಾಮಿಯಾಗಿ ಮುನ್ನಡೆಯುತ್ತದೆ.

“ಹಾಗಾದರೆ ಸಾವಿನಾಚರಣೆಯಲ್ಲಿ ನಾವು ಮಾಡುವುದೇನು ಗುರುಗಳೇ?”

“ಅದು ಸೇತುವೆ ಮೇಲೆ ಕಾಲಿಟ್ಟ ಹೆಜ್ಜೆಯಂತೆ, ದೇಹದಿಂದ ದೇಹಾತೀತಕ್ಕೆ, ಜ್ವಲಿತದಿಂದ ಉಜ್ವಲಕ್ಕೆ, ಅಂತದಿಂದ ಅನಂತಕ್ಕೆ ಸಾವಿರದೊಂದು ರಥದ ಗಾಲಿ. ಸಾವಿನಿಂದ ಚೈತನ್ಯ ಸ್ಥಗಿತವಾಗುವುದಿಲ್ಲ. ನಿಲ್ಲುವುದಿಲ್ಲ, ಅಳಿಯುವುದಿಲ್ಲ. ಅಳಿಯುವುದು ದೇಹ ಮಾತ್ರ. ಚೈತನ್ಯ ಆತ್ಮದ ನಾಗಾಲೋಟಕ್ಕೆ ಕೊನೆಯಿಲ್ಲ. ಅದು ಗಾಳಿಯಂತೆ, ಗಂಧದಂತೆ, ಕಣ್ಣಿಗೆ ಕಾಣದ ಮನದ ವೇಗದಂತೆ, ಬೆಳಕಿನ ಛಾಯೆಯಂತೆ. ನದಿಯ ಹರಿಯುವಿಕೆಯಂತೆ. ಸಾಗರದ ಮಿಲನದಂತೆ. ಅದು ಅನಂತತೆಯ ಬೆಳೆವ ಕೌಶಲ.

ಚೈತನ್ಯಕ್ಕೆ ಮುಖವಿಲ್ಲದ ಸಾವಿರ ಮುಖ. ಕೈಕಾಲಿಲ್ಲದ ಸಾವಿರ ಕೈಕಾಲು, ಹೃದಯ ಬಡಿತವಿಲ್ಲದ ಸಾವಿರ ಹೃದಯಸ್ಪಂದನ. ಚೈತನ್ಯ ಜೀವನ ನಂದನವನ, ಚೈತನ್ಯ ತುಂಬಿದ ನಾವು ಅಮೃತ ಬಿಂದು. ಮಣ್ಣಿನ ಈ ಕೊಡ, ಹಾಲು ಜೇನಿನ ಕೊಡ.” ಎಂದರು ಗುರುಗಳು.

“ಹಾಗಾದರೆ ಹುಟ್ಟು, ಸಾವು ಒಂದು ಶುರು ಒಂದೆ ಕೊನೆಯಿಲ್ಲವೇ? “ಇಲ್ಲ ಶಿಷ್ಯ! ಒಂದು ಅರ್ಥದಲ್ಲಿ ಎರಡೂ ಆದಿಯೇ. ಹುಟ್ಟೊಂದು ಆದಿ, ಸಾವೊಂದು ಹಾದಿಯ ಆದಿ, ಹಾದಿಗೆ ಮತ್ತೆ ಬದುಕುಂಟು, ಬಾಳುಂಟು, ಅಂದಾಗ ಸಾವಿನ ಜೋಡಿಗೆ ಹುಟ್ಟು, ಇದೆಯೆ ವಿನಹ ಸಾವಿಗೆ ಜೋಡಿಯಾಗಿ ಸಾವಿಲ್ಲ.

ಸಾವೆಂಬ ಪದದಲ್ಲಿ ಅಂತ್ಯವಿಲ್ಲ, ಅದು ಅಂತವಿಲ್ಲದ ಅನಂತ. ಸಾವು ಸಾವಿರಕ್ಕೆ ಹೋಗುವದಾರಿ. ಸಾವು ಹೆದರುವ ದಾರಿಯಲ್ಲಿ. ಸಾವು ಚಿಗುರಿಗೆ, ಚಿನ್ಮಯಕೆ ಕೈ ಬೆರಳು, ತೋರು ಬೆರಳು, ಚಿಲುಮೆಯ ಚಿರಂತನಕ್ಕೆ ಕೈ ತೋರುವ ಕುರುಹು ಎಂದಾಗ ಶಿಷ್ಯ ಧ್ಯಾನ ಮಗ್ನನಾಗಿ ಮತ್ತೆ ಪ್ರಶ್ನಿಸಿದ.

“ಗುರುವೆ! ಹಾಗಾದರೆ ಸಾವಿಗೇಕೆ ಜನರು ಅಂಜುತ್ತಾರೆ?”

“ಕಾಣದ್ದು ಕತ್ತಲೆ. ತಿಳಿಯದ್ದು ಕಾಡುತ್ತದೆ. ಅದಕ್ಕೆ ಅಂಜುವುದು ಅಲ್ಲ ಕಿರಣ ಮೂಡಿದರೆ ಅಂಜಿಕಯಿಲ್ಲ” ಎಂದರು ಗುರುಗಳು.

“ಗುರುವರ್ಯಾ! ಹುಟ್ಟು ಸಾವು ನಮ್ಮ ಎರಡು ಕಣ್ಣು, ಎರಡು ಕೈಕಾಲು, ಎರಡು ಕಿವಿಯಂತೆ ಅಲ್ಲವೇ?”

“ಅಹುದು ಶಿಷ್ಯ! ಒಂದು ಬುದ್ಧಿ, ಒಂದು ಹೃದಯದಲ್ಲಿ ಇವೆರಡನ್ನೂ ತುಂಬಿ ಒಂದಾಗಿ ಮಾಡಿಕೋ ತಿಳಿವುತಂದುಕೋ” ಎಂದಾಗ ಶಿಷ್ಯನ ಎದೆ ತುಂಬಿ ಬಂದಿತು.
*****

Tagged:

Leave a Reply

Your email address will not be published. Required fields are marked *

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...