Home / ಕವನ / ಕವಿತೆ / ಭಿಕ್ಷುಕನು

ಭಿಕ್ಷುಕನು

ಕುಂಬಳ ಸೊಟ್ಟೀಕೈಯೊಳು ಪಿಡಿದು ನಡುವಿಗೆ ಲಂಗುಟಪಟ್ಟಿಯ ಬಿಗಿದು|
ಕುಂಬಳರಾಜನ ಪಟ್ಟಣದೊಳಗೆ ನಡೆದನು ತಾಜೋಗಿ || ೧||

ಉಂಬಳಿ ತನಗೆ ಮೂಜಗವಾಗೆ ತಿಂಬುವ ಅನ್ನದ ಕೊರೆತೆಯನೀಗಿ |
ತುಂಬಿದ ಊರೊಳು ಜನಮನ ಪರಿಕಿಸೆ ನಡೆದನು ತಾಜೋಗಿ || ೨||

ಭಿಕ್ಷೆಯ ಬೇಡಲು ಬಂದಿಹೆನಮ್ಮಾ ಮತ್ಸರಿವಿರದಿರೆ ಭಿಕ್ಷೆಯ ನೀಡು |
ತುಚ್ಛರ ಮನೆಯ ಭಿಕ್ಷೆಯ ನೆಂದಿಗೂ ಗ್ರಹಿಸೆನು ನಾನಿಂದೂ || ೩ ||

ಮನೆಯಜಮಾನನು ಮೈಮುರಿ ದುಡಿದು ಹೊಲದೊಳು ಧಾನ್ಯವ ಬೆಳೆದಿರೆ ನೀ |
ನನುನಯದಿಂದಲಿ ನೀಡಲು ಭಿಕ್ಷೆಯ ಗ್ರಹಿಸುವೆ ಪ್ರೇಮದಲ್ಲಿ || ೪ ||

ಮಾನಸ ಶ್ರಮವನು ಮಾಡುತೆ ನಿನ್ನಯ ಪ್ರೇಮದಪತಿ ಧನಗಳಿಸುತಿರೆ |
ದಾನವ ಭಕುತಿಲಿ ಮಾಡಿದೊಡದನನು ಸಾನಂದದಿನಾಂ ಕೊಳ್ಳುವೆನೂ ||೫||

ಅನ್ನದ ವಸ್ತ್ರದ ಕೊರೆತೆಯನರಿಯೆನು ನನ್ನಯಗೆಳೆಯವ ಧನಪತಿಯು |
ಚಿನ್ನ ಮನದಿನೀ ನೆನ್ನೊಳು ನೀಡುವ ಭಕುತಿಯ ಭಿಕ್ಷೆಯ ಕೊಳ್ಳುವೆನು ||೬||

ಜಾತಿ ವಿಜಾತಿಯ ಭೇಧವ ನೆರಿಯೆನು ಪ್ರೀತಿಯಿಂದೆ ನೀಭಿಕ್ಷೆಯನೀಡಲು |
ಓತುಹರಿಸುವೆ ನಖಂಡಸು ಮಂಗಲೆಯಾಗುತೆ ನೀ ಪೊಳೆಯೆಂದೂ || ೭||

ಪೆಣ್ಣನು ಪೊರೆವೆನು ಪತಿರೂಪದಿ ನಾಧನ್ಯ ಸದಾಶಿವ ಮೂರುತಿಯು |
ಇನ್ನು ಜನಗಳ ಪಾಲಿಪೆ ತಂದೆಯ ರೂಪದಿ ಶ್ರೀಹರಿ ವಿಶ್ವಾತ್ಮಾ || ೮ ||

ಸಂಣಮಕ್ಕಳರೂಪದಿ ಪೊರೆವಳು ಎನ್ನಯಸತಿಜಗದಂಬೆ |
ನಿನ್ನಯ ಅತಿಥಿಯ ರೂಪದಿ ಬಂದಿಹೆ ಜಗದೊಳು ನಾನಿಂದೂ || ೯ ||

ಸನ್ನುತ ಬಿಜ್ಜೆಯ ವಿತರಣ ಕಾರ್ಯವ ಸರಸತಿರೂಪದಿ ಮಾಡುವೆನೂ |
ಇನ್ನುನಾನು ಮಾಡದ ಕಾಯಕವದು ಜಗದೊಳಗೇನುಂಟು || ೧೦||

ಕಪ್ಪು ಸಂತೆಯಿಂ ಜನಗಳು ದುಡ್ಡನು ಗಳಿಸುವರೆಂಬ ದೂರನುಕೇಳುತೆ |
ತಪ್ಪನು ತಿದ್ದಲು ಜಗದಲಿ ಬಂದಿಹೆ ಜೋಗಿಯ ವೇಷದಲಿ || ೧೧ ||

ವಕ್ಕಲಿಗರು ತಾ ರೊಕ್ಕದ ಆಶಿಲಿ ಹೊಲಬೀಳ್ಗೆಡಹುತೆ ಪೀಡಿಪರೊಡೆಯ ನ|
ಚೊಕ್ಕು ಭೂಮಿಯನು ಮಾಡುತೆ ಬೆಳೆಯಲು ಬುದ್ಧಿಯ ಹೇಳುವೆನೂ || ೧೨ ||

ಚಿಕ್ಕಮಕ್ಕಳು ಬಸವಮೋಹನರು ಜಗದಿ ಮಾಡಿದ ಬೋಧೆಗಳಾ |
ಚೊಕ್ಕಮನದಿ ಜನ ತಿಳಿದು ನಡೆದೊಡೆನಾನಲಿನೆನು ಸಂತಸದಿ || ೧೩||

ಶಿವಾ ಮಾದೇವಾ ನಾನೇ ಶಿವಾ ನೀತಿಗೆಟ್ಟವಗೆ ಎಲ್ಲಿ ಶಿವಾ||
*****

Tagged:

Leave a Reply

Your email address will not be published. Required fields are marked *

ಭಾಗ ೧ ಒಂದು ಯುನಿವರ್ಸಿಟೀನಲ್ಲಿ ಆಧ್ಯಾಪಕನಾಗಿರುವ ನಾನು ಕ್ಯಾಂಪಸ್ ಆವರಣದೊಳಗೇ ಇರುವ ಫ್ಲಾಟೊಂದರಲ್ಲಿ ಹೆಂಡತಿ ಮಕ್ಕಳ ಜತೆ ಮನೆ ಮಾಡಿಕೊಂಡಿದ್ದೇನೆ. ಮನೆ ಮತ್ತು ಆಫೀಸಿಗೆ ಹೆಚ್ಚೇನೂ ದೂರವಿಲ್ಲದ ಕಾರಣ ವಾಹನಗಳಿಗೆ ವೃಥಾ ಕಾಸು ಖರ್ಚು ಮಾಡಬೇಕಾದುದಿಲ್ಲ. ಮಧ್ಯಾಹ್ನ ಲಂಚಿಗೆ ಕೂಡ ಮನ...

ಬಣಸಾಲೆ ಮುಂದಿನಿಂದ ಹೆಜ್ಜೆ ಹಾಕುವಾಗ ಹೊತ್ತು ಕಂತಿದ್ದು ಲಕ್ಷ್ಯಕ್ಕೆ ಬಂದಿರಲಿಲ್ಲ. ಆಚೀಚಿನ ಹನೆಮರದೆತ್ತರದ ತೇಗ-ಮಾವುಗಳ ಟಿಸಿಲುಗಳಲ್ಲಿ ಹಕ್ಕಿಗಳ ಗರಿ ಒದರುವ ಸರಪರ. ತಾರಕ ಸ್ವರದ ಮಕ್ಕಳಾಟ ವೀಕ್ಷಿಸುತ್ತಾ ರಸ್ತೇಲಿ ಬಿದ್ದಿದ್ದ ಸಣ್ಣ ಸಣ್ಣ ಕಲ್ಲುಗಳನ್ನು ಕಾಲಿನಿಂದ ಚಿಮ್ಮುತ್ತಾ...

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...