Home / ಕವನ / ಅನುವಾದ / ಇರುಳ ದೇವಿ

ಇರುಳ ದೇವಿ

ಬೇಗ ಪಡುವ ತೆರೆಯ ತುಳಿದು,
ಇರುಳ ದೇವಿ, ಬಾ.
ಮಬ್ಬುಗವಿಯೊಳೊಬ್ಬಳಿದ್ದು,
ಹಗಲು ಸಮೆಯದಾಗ ಹೆಣೆದ
ಸೊಗದ ಭಯದ ಕನಸ ಬೀರಿ,
ಉಬ್ಬಿಸುತ್ತ, ಬೆದರಿಸುತ್ತ,
ಬಾ, ಬೇಗ, ಬಾ.
ಅರಿಲ ಹೂವು ನೆಯ್ದ ಕಪ್ಪು
ದುಗುಲವುಟ್ಟು ಬಾ.
ಹಗಲ ಕಣ್ಗೆ ಕುರುಳ ಕವಿಸಿ,
ಮುತ್ತುಕೊಟ್ಟು ದಣಿಸಿ ಕಳಿಸಿ,
ಸುತ್ತ ಸುಳಿದು, ನಾಡಿನಲ್ಲಿ
ಮಂಕು ತಳಿದು, ಶಂಕೆಯಳಿದು
ಅರಸುವೆನಗೆ ಬಾ.
ಕರಗಿ ಮಂಜು, ಬೆಳಕು ಬರಲು,
ನಿನಗೆ ಸುಯ್ದೆನು.
ಅರಳ ತಳಿರ ಮೇಲೆ ಬಿಸಿಲ
ಹೊರೆಯ ಹೇರಿ, ಏರಿ ಹಗಲು
ಬೇಡವಾದ ಬಳಗದಂತೆ,
ಕಾಡಿ ತಂಗುತಿರಲು, ಬಾಡಿ
ನಿನಗೆ ಸುಯ್ದೆನು.
ನಿನ್ನ ತಮ್ಮ ಸಾವು ಬಂದು,
ವರಿಸು ಎಂದನು.
ನಿನ್ನ ಕಂದ ನಿದ್ದೆ ಬಂದು,
ಕಣ್ಣ ಹೊಸಕಿ, ಜೇನ ಮುಸುಕಿ,
ಅಪ್ಪಿಕೊಳಲೆ, ಬಳಿಯೊಳೊರಗಿ?
ಒಪ್ಪು, ನಲ್ಲೆ ಎಂದನದಕೆ
ಒಲ್ಲೆ ಎಂದೆನು.
ನೀನು ಸತ್ತಮೇಲೆ ಸಾವು
ಬೇಗ, ಆಗಲೇ!
ನೀನು ಹೋದಮೇಲೆ ನಿದ್ದೆ-
ಕೇಳಬಲ್ಲೆ ವರವನವರ,
ಕೇಳಿಕೊಳ್ಳುವೆನಮ್ಮ ನಿನ್ನ,
ಒಲುಮೆಯಿರುಳೆ, ಬಯಕೆ ಸಲಿಸು
ಬೇಗ, ಬಾ, ಬಾ.
*****
SHELLEY : To The Night
Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...