Home / ಕವನ / ಕವಿತೆ / ಸ್ಪರ್ಶ

ಸ್ಪರ್ಶ

ಎಂದೋ ಬಿದ್ದ ಕಾಳೊಂದು
ಇತ್ತೀಚಿನ ಮಳೆಗೆ ಮೊಳಕೆಯೊಡೆದು
ಎರಡೆಲೆ ಚಿಗುರಿಸಿ ನಗುತಿದೆ

ಕಾಪೌಂಡಿನಾಚೆ ಮೋಡವೇ ಹೆಪ್ಪುಗಟ್ಟಿ
ಗವ್ವೆನ್ನುವ ವಾತಾವರಣ ಮನೆಯೊಳಹೊರಗೆಲ್ಲ-
ಕುಡಿ ಮೂಡುವ ಸಂಭ್ರಮಕೆ ಕಾದೂ ಕಾದೂ
ಕೊನೆಗೆ ಸ್ನಾನ ಕಣ್ಣೀರೂ ಬಚ್ಚಲು ಮೋರಿಗೆ,
ನಕ್ಷತ್ರಕರೂ ಮಾತನಾಡಲು
ಅಲ್ಲಿಯೇ ಹೋಗುವುದಿದೆಯಲ್ಲ!
ಎರಡು ನಾಲ್ಕು ಆರೆಂಟು ಹತ್ತಿಪ್ಪತ್ತು
ಚಿಗುರೆಲೆಗಳ ಗುಂಪು ಕಂಪೌಂಡು ಮುದ್ದಿಸುತ್ತಲೇ
ಮೆಲ್ಲನೆ ಮೇಲೇರಿ ಬಳಕಾಡುವುದು
ತೊನೆದಾಡುವುದೇನು ಆಹಾ!
ನೆಲದಾಳಕ್ಕಿಳಿದು ಹೆಕ್ಕಿ ಹೆಕ್ಕಿ ನೀರು ಹೀರಿ
ಪಸರಿಸಿದ ಬೇರಿನ ಸಂಭ್ರಮ.

ಉರುಳಾಡಿದವು ನಕ್ಷತ್ರಗಳು
ಬೆಳದಿಂಗಳ ಹಾಸಿಗೆಯನೇರಿ
ಚುಮು ಚುಮು ಉಷೆ
ಜಮುರು ಮಳೆ
ಮೊನ್ನೆ ಮೊನ್ನೆಯೇ ಕಣ್ಣುಬಿಟ್ಟ
ಎಲೆಗಳ ನಡುವೆ ಮುಗುಳು
ಮೊಗ್ಗು ಹೂವುಗಳ ನಗು
ಈಗಷ್ಟೇ ತುಂಬಿಕೊಳ್ಳುತ್ತಿವೆ ಹಾಲುಗಾಳು

ಗೋಡೆಯಾಚೆ ಕಳೆಗುಂದಿ ಕೊರಳು ತುಂಬಿ
ಉಕ್ಕೇರುವ ನದಿಯೋ ನದಿ ಆಕೆ
ಒಂದಿರುಳು ಏರುಬ್ಬರ ಇಳಿದು
ಭೂಮಿ ಎಲ್ಲವೂ ಶಾಂತ

ಅನಾಥಕಂದ ಉಡಿತುಂಬಿ ಕಲಕಲಿಸಿದ್ದು
ಲಾಲಿ ಹಾಡು ಇಂಪಾಗಿ ಎಲ್ಲರೆದೆ ತಟ್ಟಿದ್ದು
ಅದು ನಕ್ಕರೆತಾನು ನಕ್ಕು
ಕಣ್ಣುರೆಪ್ಪೆಯೊಳಗಿಟ್ಟು ಕಾಯುವ ಸಂತೋಷಿ
ದಿನ ದಿನಕೂ ಚಿಗುರಿ
ಜಗದೆತ್ತರ ಬೆಳೆಯುವ ಕನಸು
ಕೊಡುತಿದೆ ಮಲ್ಲಿಗೆ ನಗುವಿನ
ಹಾಲುಗಲ್ಲಿನ ಕಂದ
ಮಳೆ-ನದಿ ಆಹಾ ಅದೇನು ಸ್ಪರ್ಷ.
*****
ಪುಸ್ತಕ: ಇರುವಿಕೆ

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...