Home / ಕವನ / ಕವಿತೆ / ಸೂಳೆ

ಸೂಳೆ

ಥೂ….ಸೂಳೆ, ಹೇಸಿ ಪಾಪದ ಹೆಣ್ಣು
ಇವಳ ಬಾಳೇನಿಹುದು ಹಾಳು ಮಣ್ಣು
ಊರ ಕೇರಿಯ ಹೊಲಸು ಕೊಳಚೆಯಿಹ ಬೀದಿಯಲಿ
ದೇಹದಂಗಡಿಯಿಟ್ಟು ಯಜಮಾನಿಕೆ
ಗರತಿಯರ ಎದುರಿನಲಿ ಎದೆಗಾರಿಕೆ
ಎಂದು ಜನ ಕಂಡಂತೆ, ರಾಮ ಸೀತೆಯರಂತೆ
ಬಾಳಿ ಬದುಕುವ ತೆರದಿ ನುಡಿವ ಸೊಲ್ಲು
ತೆರೆದ ಹಲ್ಲು…..!
ಅವರಿವರ ಸಂಸ್ಕೃತಿಗೆ ಮತ್ತೆ ನಾಗರಿಕತೆಗೆ
ಇವಳ ಕಥೆ ಸರಿಯಾಗಿ ಸಾಗಬೇಕು;
ಇವಳಿಲ್ಲದೇ ಜಗದ ಬಾಳ ಗೋಳಿನ ಕಥೆಗೆ
ಯಾರು ಮುನ್ನುಡಿಯನ್ನು ಬರೆಯಬೇಕು?
ಹರಿನಾಮದ ಆಚಾರ್ಯರು
ಹಣೆಯ ತುಂಬ ವೀಭೂತಿಯ ಪಟ್ಟ ಹೊತ್ತ ಶರಣರು
ಮೂರು ಹೊತ್ತು ನೀರ ಮುಳುಗಿ ಮಂತ್ರ ತಂತ್ರ ಭಟ್ಟರು
ಹೊಟ್ಟೆ, ಹೊತ್ತ ಶೆಟ್ಟರು
ಕತ್ತಲಲ್ಲಿ ಕದ್ದು ಬಂದು ಇವಳ ಗುಡಿಯ ಭಕ್ತರು
ನೀತಿಯಿಂದ ಮುಕ್ತರು.
ಆದರೂನು ಇರುಳು ಕಳೆದು ಹಗಲು ಬರಲು ಮಾನ್ಯರು
ಮಹಾ ಶೀಲವಂತರು!
ಇವಳೋರ್ವಳೆ ಸೂಳೆಯೆಂದು
ಹೊಲಸು ಹೇಸಿ ಪಾಪಿಯೆಂದು
ಇವಳಿಂದಲೇ ಈ ಸಮಾಜ
ಅಧೋಗತಿಗೆ ಇಳಿಯಿತೆಂದು ವಿಷವ ಕಾರಿ ನುಡಿವರು
ಪಿಸಿ….ಪಿಸಿ….ಪಿಸಿ…. ನಗುವರು.
ವಿಧವೆಯ ಬಾಳ್- ಹಾಳಾಗಿದೆ ಮರಳಿ ಮದುವೆಯಾಗದೆ
ಹೇಗಾದರು ದಾಟಬೇಕು ಕಾಮಕಡಲ ದೈವವೆ
ಕಣ್ಣೀರಿನ ಆಸರೆ!
ಯಾರೊ ಕೊಟ್ಟ ಶಾಪದಲ್ಲಿ
ದೇಹದುರಿಯ ತಾಪದಲ್ಲಿ
ಹಾಗು ಹೀಗು “ಹೀಗಾಯಿತು” ಅಯ್ಯೋ ಕಾಲು ಜಾರಿತು
ದೇಹ ನೀರಿಗುರುಳಿತು!
ಮದುವೆಯಾಗಲಿಲ್ಲವೆಂದು ಸ್ಕೂಲಿನಲ್ಲಿ ಶಿಕ್ಷಕಿ
ಸೆರಗ ಸರಸಿ ಕಣ್ಣ ಬಲೆಯ ಬೀಸಿ ಬರುವ ನರ್ತಕಿ
ಹಾಸ್ಪಿಟಲ್ಲು ನರ್ಸಾಯಿತು ಬಿಳಿಯುಡಿಗೆಯ ಚಾಕರಿ
ಅಡುಗೆ ಮನೆಗೆ ಶರಣು ಹೊಡೆದು ಆಫೀಸಿನ ನೌಕರಿ
ಕಾಲೇಜಿನ ಕಥೆಯಾಯಿತು
ದೇಹ ಬೆಳೆದು ಬಂದಿತು!
ದೈವ ಕೃಪೆಯದೆಂತೊ ಏನೊ ಭ್ರೂಣಹತ್ಯವಾಯಿತು
ಬಾವಿ ಕೆರೆಯ ಪಾಲಾಯಿತು ಆಯುಷ್ಯವೆ ತೀರಿತು!
ಮಡಿವಂತರ ಮೂಲೋಕದಿ ಇದೊ ಇದೂ ನ್ಯಾಯ ನೀತಿ
ಶಿಲಕೆ ಪಂಚಾರತಿ!
ಮನೆ ಮನೆಯಲಿ ತೆರೆಯ ಮರೆಗೆ ಎಂಥದಯ್ಯೊ ನಾಟಕ
ರಾಮಾಯಣ ಭಾರತ!
ನಿನ್ನ ಮುಖದಿ ಏನಿಹುದೋ ಈಗಾದರು ನೋಡಿ ನಗು
ಹೊಲಸು ಕಪ್ಪು ಕಲೆಯನೆಲ್ಲ ಬೇಗ ಬೇಗ ಅಳಿಸಿಬಿಡು
ನಂತರ….
ಸೂಳೆ ಕಥೆಯ ಕೇಳಿ ಒಮ್ಮೆ ನೀನೂನು ಅತ್ತುಬಿಡು.
*****
Tagged:

Leave a Reply

Your email address will not be published. Required fields are marked *

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...