Home / ಕವನ / ಕವಿತೆ / ಧಾರವಾಡದ ತಾಯಿ

ಧಾರವಾಡದ ತಾಯಿ


ಬಂದಿರುವೆನಿದೊ ಮಾಯಿ ಧಾರವಾಡದ ತಾಯಿ
ಸರ್ವಮಂಗಳೆ ನಿನ್ನ ಭಾಗ್ಯದುಡಿಗೆ;
ಜನುಮ ಜನುಮದ ಬಯಕೆ ತುಂಬಿ ನಿಂದಿಹುದಿಂದು
ಕನಸಿನಲಿ ಕಂಡ ದಿನ ಬಂತು ಕೊನೆಗೆ.


ಕೈಚಾಚಿ ಕರೆದಪ್ಪಿ ಎದೆ ತೆರೆದು ಕುಳಿತಿರಲು
ಜೀವದಲಿ ಜೀವವೇ ಇಳಿಯುತಿಹುದು;
ಎದೆಯ ಬಟ್ಟಲು ತುಂಬಿ ಪ್ರೀತಿ-ಹೊರಸೂಸಿಹುದು
ನಾನು ನೀನೆಂಬುದನೆ ಮರೆಸುತಿಹುದು.


ಬಾಲ್ಯದಿಂದಲೆ ನಿನ್ನ ತೊಡೆಯಲಾಡುವ ಮನಸು
ದಿನದಿನದಿ ಹಂಬಲದಿ ಕಂಡ ಕನಸು
ನಿನ್ನೆದೆಯ ಶ್ರೀಮಂತ ಮೃದುತಲದ ಹಾಸಿನಲಿ
ಮಲಗಿ ನಾ ಹಾಲುಂಡ ದಿನಗಳೇಸು!


ಮರದ ಎಲೆ ಅಲುಗಲೂ ಧೈವ ಕೃಪೆ ಬೇಕಂತೆ
ಇದರಲಂತಹದೇನೊ ಇರಲೆ ಬೇಕು;
ದೈವ ಕರೆದೊಯ್ದತ್ತ ನಾವು ಹೋಗಲೆ ಬೇಕು
ನಂಜಿದ್ದರೂ ಅದನು ಕುಡಿಯಬೇಕು.


ದುಃಖ ಸುಖಗಳ ಎದೆಯ ನೂರು ಹಂಬಲ ತೊರೆದು
ನಿನ್ನ ಉಡಿಯೊಂದನ್ನು ನೆನಿಸಿ ಬಂದೆ;
ನನ್ನ ಕರುಳಿನ ಬಳ್ಳಿಯಲ್ಲಿ ಅರಳಿರುವಂಥ
ಪ್ರೀತಿ ಹೂವೊಂದನ್ನು ಹೊತ್ತು ತಂದೆ.


ನಿನ್ನ ಕಣ್ಣಂಚಿನಲಿ ಮಿಂಚು ಹೊಳೆಯುತಲಿರಲು
ನನ್ನ ಎದೆವನೆಯಲ್ಲಿ ಬೆಳಕ ಬೆಳಕು
ಕರೆದು ಆಶೀರ್ವದಿಸಿ ತಾಯಿ ಬೆಳಗುತಲಿರುವ
ಕಣ್ಣ ಬೆಳಕಿನ ಪುಣ್ಯ ಇಹುದು ಸಾಕು.
*****

Tagged:

Leave a Reply

Your email address will not be published. Required fields are marked *

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...