Home / ಲೇಖನ / ವಿಜ್ಞಾನ / ಈಗ ಕುಡಿಯುವ ಕೊಳವೆ ನೀರೂ ಸಹ ವಿಷವೇ?

ಈಗ ಕುಡಿಯುವ ಕೊಳವೆ ನೀರೂ ಸಹ ವಿಷವೇ?

ಬರಗಾಲದ ಭೀಕರತೆಯಿಂದಾಗಿ ನೀರು ಎಲ್ಲಿಯೂ ಸಕ್ಕುವುದಿಲ್ಲ ಹಳ್ಳಕೊಳ್ಳ ತೊರೆ, ನದಿಗಳು ಬತ್ತಿಹೋಗಿವೆ. ಇಂಥಹ ಸಂದರ್ಭಗಳಲ್ಲಿ ಕೊಳವೆಭಾವಿಗಳನ್ನು ಕೊರೆದು ಅದರಿಂದ ನೀರು ಸಂಗ್ರಹಿಸಿ ಕುಡಿಯಲು ಉಪಯೋಗಿಸುತ್ತಿರುವುದು ಇಂದು ಸಾಮಾನ್ಯ ದೃಷ್ಯ.

ಆದರೆ ಇಂಥಹ ಕೊಳವೆ ಭಾವಿಗಳ ನೀರು ವಿಷಯುಕ್ತವಾಗಿವೆ ಎಂಬ ಸತ್ಯ ಇತ್ತೀಚಿಗೆ ಬಯಲಾಗುತ್ತಲಿದೆ. ನಗರೀಕರಣದ ಒತ್ತಡದಿಂದಾಗಿ ಸುರಂಗಗಳನ್ನು ತೋಡಿ ನೀರು ತೆಗೆಯುವ ಸಾಹಸದಿಂದಾಗಿ ಅಂತಾರ್ಜಲ ಬಿತ್ತಿಹೋಗುತ್ತಲಿದೆ. ಹೀಗಾಗಿ ಈ ಸುರಂಗ ಭಾವಿಗಳನ್ನು ೧೦೦ ರಿಂದ ೫೦೦ ಅಡಿಗಳವರೆಗೂ ಕೊರೆಯಲಾಗುತ್ತದೆ. ಇದು ತೀವ್ರವಾಗತೊಡಗಿದಂತೆ ‘ಆರ್ಸನಿಕ್’, ಅಂಶವು ಹೆಚ್ಚಿನ ಪ್ರಮಾಣದಲ್ಲಿ ಅಂತರಜಲದ ಜೊತೆಗೆ ಸೇರಿಕೊಳ್ಳುತ್ತದೆ. ಥೈಲ್ಯಾಂಡಿನಂತಹ ದೇಶಗಳು ಈ ಹಿಂದೆಯೇ ಆರ್ಸನಿಕ್, ವಿಷಪ್ರಾಶನದಿಂದ ಬಳಲಿ ಪಾಠ ಕಲಿತಿವೆ. ಥೈಲ್ಯಾಂಡಿನ ಕೆಲವು ಪ್ರದೇಶಗಳಲ್ಲಿ ಮಳೆಯ ನೀರನ್ನು ಸಿಮೆಂಟ್ ಜಾಡಿಗಳಲಿ ಸಂಗ್ರಹಿಸಿ ಬಳಸಿಕೊಳ್ಳಲಾಗುತ್ತದೆ. ಅಲ್ಲಿ ವರ್ಷದ ಹತ್ತು ತಿಂಗಳ ಕಾಲ ಕುಡಿಯಲು ಮತ್ತು ಅಡಿಗೆ ತಯಾರಿಕೆಗೆ ಬೇಕಾಗುವ ನೀರನ್ನು ಇಂಥಹ ಮಳೆಯ ನೀರಿನ ಸಂಗ್ರಹದಿಂದಲೇ ಪೂರೈಸಿಕೊಳ್ಳಲಾಗುತ್ತದೆ. ಪಶ್ಚಿಮ ಬಂಗಾಳದ ೮೪೦ ಹಳ್ಳಿಗಳಲ್ಲಿ ಲಕ್ಷಾಂತರ ಜನರು ಅರ್ಸನಿಕ್ ವಿಷ ಪ್ರಾಶನದಿಂದ ನರಳುತ್ತಿದ್ದಾರೆ. ನೆಲದಾಳದಲ್ಲಿರುವ ಕಬ್ಬಿಣದ ಪೈರೈಟ್ಗಳು ಕೊಳವೆ ಭಾವಿಗಳ ಮೂಲಕ ಆಮ್ಲಜನಕದ ಸಂಪರ್ಕಕ್ಕೆ ಬಂದಾಗ ಅಪಾಯಕಾರಿಯಾದ ಆರ್ಸನಿಕ್ ಬಿಡುಗಡೆ ಹೊಂದಿ ಅಂತರ್ಜಲವನ್ನು ಸೇರುತ್ತದೆ. ನೀರಿನೊಂದಿಗೆ ಸೇರುವ ಈ ಆರ್ಸೆನಿಕ್ ಮನುಷ್ಯರಿಗೂ, ಪ್ರಾಣಿಗಳಿಗೂ ಅತ್ಯಂತ ಅಪಾಯಕಾರಿಯಾಗಿದೆ.

ಸಾಮಾನ್ಯವಾಗಿ ಇಂತಹ ಸಮಸ್ಯಗಳಿಗೆ ಸರಳವಾದ ಸುಲಭವಾದ ಮತ್ತು ಕಡಿಮೆ ಖರ್ಚಿನ ಮಾರ್ಗಗಳಿವೆ. ಆದರೆ ಹಲವಾರು ಕಾರಣಗಳಿಂದಾಗಿ ಇಂಥಹ ಪರ್ಯಾಯ ವ್ಯವಸ್ಥೆಗೆ ಒಪ್ಪಿಗೆ ಸಿಗುವುದಿಲ್ಲ ಮುಖ್ಯವಾಗಿ ಮಳೆ ನೀರನ್ನು ಸಂಗ್ರಹಿಸಿ ಇರುವುದು. ಜಲಮೂಲಗಳಿಂದ ನೀರನ್ನು ಪಡೆಯುವುದು. ಮುಂತಾದ ಕ್ರಮಗಳನ್ನು ಅನುಸರಿಸಬೇಕಿದೆ.
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...