Home / ಕವನ / ಕವಿತೆ / ವಸುವೆಂಬ ಬೆಳದಿಂಗಳ ಬಾಲೆ

ವಸುವೆಂಬ ಬೆಳದಿಂಗಳ ಬಾಲೆ

ಕಣ್ಣೆದುರೇ ನಡೆವ ಎಷ್ಟೊಂದು ಘಟನಗೆಗಳಿಗೆ
ತಲಸ್ಪರ್ಶಿ ಸ್ಪರ್ಶ, ನೋಟ, ಸಂಶೋಧಕಳಾಗುವವಳೇ
ಹೊಸದನ್ನು ಹುಡುಕಿ ಹೆಕ್ಕಿ ಉಣಬಡಿಸುವವಳೇ
ಮೃದು ಸೌಮ್ಯ ಮಾತಿನ ಮನಸು ಗೆದ್ದವಳೇ
ಇಂದೇಕೆ ಮೌನವಾಗಿ ಮಾತನಾಡದೇ ಮಲಗಿರುವೆ.

ನಿಂತ ನೀರಾಗದೇ ಸದಾ ಹರಿವ ಹೊಳೆನೀರೆ
ಎಡಪಂಥೀಯರ ನಡುವಿನ ಜನಪರದ ಮನಸೇ
ಸ್ತ್ರೀವಾದಿ, ಮಾನವೀಯ ನೆಲೆಯ ಮಾತೇ
ಕಳ್ಳುಬಳ್ಳಿಯ ಸಂಬಂಧಗಳ ದೂರ ಸರಿಸಿ
ಬಾರದ ದಾರಿಗೆ ಹೀಗೇಕೆ ಎದ್ದು ನಡೆದೆ ವಸು?

ಕನ್ನಡ ಸಾಹಿತ್ಯ ಚರಿತ್ರೆಗೆ ಹೊಸ ಭಾಷ್ಯ ಬರೆಯಲು
ನನ್ನೊಂದಿಗೆ ನಿನ್ನ ಒಪ್ಪಂದವಾಗಿತ್ತಲ್ಲವೆ?
ನೀನು ಕೇಳಿದ ಲೇಖನ ನಾನಿನ್ನೂ ಮುಗಿಸಿಲ್ಲ
ಅರ್ಧಕ್ಕೇ ನಿಂತ ಲೇಖನ ಪೂರ್ಣವಾಗುವ ಮುನ್ನ
ಎಲ್ಲರನ್ನಗಲಿ ಹೋಗುವುದು ಸರಿಯೇ ಹೇಳು ವಸು.

ಬೇಡ ಮಾರಾಯ್ತಿ ಹೀಗೆ ಮಾಡಬೇಡ
ನಿನ್ನ ಅಸಂಖ್ಯಾತ ಗೆಳತಿ, ವಿದ್ಯಾರ್ಥಿನಿಯರಿದ್ದಾರೆ
ನಿನ್ನ ಎಷ್ಟೊಂದು ಯೋಜನೆಗಳು ಅಪೂರ್ಣವಾಗಿದೆ
ಚಲನಶೀಲ ಗತಿಯೇ ಜೀವನೋತ್ಸಾಹದ ಚಿಲುಮೆಯೇ
ಮನೆಯಲ್ಲಿ ಮಗಳು ಕಾಯುತ್ತಿದ್ದಾಳೆ ಬೇಗ ಬಾ ವಸು.

ಅರ್ಧಕ್ಕೆ ನಿಂತ ನಿನ್ನ ಶಸ್ತ್ರ ಚಿತ್ರ ಮುಗಿಸಿ
ಪೂರ್ಣಗೊಂಡು ತೆರೆಕಾಣುವ ಮುನ್ನವೇ
ಅವನಿಗೆ ವಿದಾಯ ಹೇಳುವ ಮೊದಲೇ
ನಿನ್ನ ನೂರಾರು ಕನಸುಗಳ ಮನಸಿನಲ್ಲೇ ಮುಚ್ಚಿಟ್ಟು
ಹೀಗೆ ಮರೆಯಾಗುವುದು ನ್ಯಾಯವೇ ಹೇಳು ವಸು?
*****
(ಅವನಿ ಎಂಬುದು ಡಾ.ವಸು ಅವರ ಮಗಳ ಹೆಸರು)

Tagged:

Leave a Reply

Your email address will not be published. Required fields are marked *

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...