Home / ಕವನ / ಕವಿತೆ / ವಸುವೆಂಬ ಬೆಳದಿಂಗಳ ಬಾಲೆ

ವಸುವೆಂಬ ಬೆಳದಿಂಗಳ ಬಾಲೆ

ಕಣ್ಣೆದುರೇ ನಡೆವ ಎಷ್ಟೊಂದು ಘಟನಗೆಗಳಿಗೆ
ತಲಸ್ಪರ್ಶಿ ಸ್ಪರ್ಶ, ನೋಟ, ಸಂಶೋಧಕಳಾಗುವವಳೇ
ಹೊಸದನ್ನು ಹುಡುಕಿ ಹೆಕ್ಕಿ ಉಣಬಡಿಸುವವಳೇ
ಮೃದು ಸೌಮ್ಯ ಮಾತಿನ ಮನಸು ಗೆದ್ದವಳೇ
ಇಂದೇಕೆ ಮೌನವಾಗಿ ಮಾತನಾಡದೇ ಮಲಗಿರುವೆ.

ನಿಂತ ನೀರಾಗದೇ ಸದಾ ಹರಿವ ಹೊಳೆನೀರೆ
ಎಡಪಂಥೀಯರ ನಡುವಿನ ಜನಪರದ ಮನಸೇ
ಸ್ತ್ರೀವಾದಿ, ಮಾನವೀಯ ನೆಲೆಯ ಮಾತೇ
ಕಳ್ಳುಬಳ್ಳಿಯ ಸಂಬಂಧಗಳ ದೂರ ಸರಿಸಿ
ಬಾರದ ದಾರಿಗೆ ಹೀಗೇಕೆ ಎದ್ದು ನಡೆದೆ ವಸು?

ಕನ್ನಡ ಸಾಹಿತ್ಯ ಚರಿತ್ರೆಗೆ ಹೊಸ ಭಾಷ್ಯ ಬರೆಯಲು
ನನ್ನೊಂದಿಗೆ ನಿನ್ನ ಒಪ್ಪಂದವಾಗಿತ್ತಲ್ಲವೆ?
ನೀನು ಕೇಳಿದ ಲೇಖನ ನಾನಿನ್ನೂ ಮುಗಿಸಿಲ್ಲ
ಅರ್ಧಕ್ಕೇ ನಿಂತ ಲೇಖನ ಪೂರ್ಣವಾಗುವ ಮುನ್ನ
ಎಲ್ಲರನ್ನಗಲಿ ಹೋಗುವುದು ಸರಿಯೇ ಹೇಳು ವಸು.

ಬೇಡ ಮಾರಾಯ್ತಿ ಹೀಗೆ ಮಾಡಬೇಡ
ನಿನ್ನ ಅಸಂಖ್ಯಾತ ಗೆಳತಿ, ವಿದ್ಯಾರ್ಥಿನಿಯರಿದ್ದಾರೆ
ನಿನ್ನ ಎಷ್ಟೊಂದು ಯೋಜನೆಗಳು ಅಪೂರ್ಣವಾಗಿದೆ
ಚಲನಶೀಲ ಗತಿಯೇ ಜೀವನೋತ್ಸಾಹದ ಚಿಲುಮೆಯೇ
ಮನೆಯಲ್ಲಿ ಮಗಳು ಕಾಯುತ್ತಿದ್ದಾಳೆ ಬೇಗ ಬಾ ವಸು.

ಅರ್ಧಕ್ಕೆ ನಿಂತ ನಿನ್ನ ಶಸ್ತ್ರ ಚಿತ್ರ ಮುಗಿಸಿ
ಪೂರ್ಣಗೊಂಡು ತೆರೆಕಾಣುವ ಮುನ್ನವೇ
ಅವನಿಗೆ ವಿದಾಯ ಹೇಳುವ ಮೊದಲೇ
ನಿನ್ನ ನೂರಾರು ಕನಸುಗಳ ಮನಸಿನಲ್ಲೇ ಮುಚ್ಚಿಟ್ಟು
ಹೀಗೆ ಮರೆಯಾಗುವುದು ನ್ಯಾಯವೇ ಹೇಳು ವಸು?
*****
(ಅವನಿ ಎಂಬುದು ಡಾ.ವಸು ಅವರ ಮಗಳ ಹೆಸರು)

Tagged:

Leave a Reply

Your email address will not be published. Required fields are marked *

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...