Home / ಕವನ / ಕವಿತೆ / ಮಿತ್ರ ಅಥವಾ ವೈರಿ

ಮಿತ್ರ ಅಥವಾ ವೈರಿ

ಅವನ ಒಂದು ಮಾತಿಗೆ ಕಾಯುತಿದ್ದಾರೆ ಜನ
ಅವ ಮಾತ್ರ ಮಾತಾಡುವುದಿಲ್ಲ
ಭಿತ್ತಿಮುಖಿ
ತೀರ ಮೌನಿ

ಮಾತು

ಮಾತಾಡಿ ಆಗಿಲ್ಲವೇ ಸಾಕಷ್ಟು ಇಷ್ಟೂ ಕಾಲ
ಮಾತಾಡಿ ಕೊನೆ ಮುಟ್ಟಿದವರೇ ಇಲ್ಲ

ಮಾತು ಮಾತಿನ ನಡುವಣ ಶೂನ್ಯತೆಯಷ್ಟೆ
ಅರ್ಥಗರ್ಭಿತ

ಮೌನಕಣಿವೆಯ ಅಗಾಧತೆ
ಅಲ್ಲಿ ಮಾಯವಾದವರು ಹಲವು ಜನ
ಅಲ್ಲಲ್ಲಿ ತಂಗಿದರು ಕೆಲವು ಜನ
ದಾರಿ ಮಧ್ಯೆ ಹುಲ್ಲುಗಾವಲಿನ ಪಕ್ಕ ಅಥವ ಪಟ್ಟಣ
ಪ್ರದೇಶಗಳಲ್ಲಿ

ಸ್ಥಳೀಯ ಸ್ತ್ರೀಯರ ಸಂಪರ್ಕ ಬೆಳೆಸಿದರು
ಅವರ ಹೆಸರುಗಳಿಗೇ ಮುಗ್ಧರಾದರು

ಆಮೇಲೆ ಅವರು ಸಂತೆಯಲಿ ತಮ್ಮವರ ಕಂಡಾಗ ಕೂಡ
ಉಭಯ ಕುಶಲೋಪರಿ ಮುಜುಗರದ ವಿಷಯ

ಎಜ್ರಾನ ಮುಖ ಒಂದು ಅಳಿವೆಯೆನ್ನುತ್ತಾರೆ
ಎಜ್ರಾನ ಮುಖ ಒಂದು ಒಡೆದ ಗದ್ದೆಯೆನ್ನುತ್ತಾರೆ

ಹಲವು ರೇಖೆಗಳಿರುವುದು ನಿಜ ಅದರಲ್ಲಿ
ಏನು ನೋಡುತ್ತಾನೆ ಅವನು ಗೋಡೆಯಲ್ಲಿ

ನಮಗೇನೂ ಕಾಣಿಸುವುದಿಲ್ಲ
ಬಹುಶಃ ಅದೊಂದು ನಿಗೂಢ ಲಿಪಿಯಲ್ಲಿ ಬರೆದ ಪ್ರಾಕ್ತನ ಕವಿತೆ
ಬಹುಶಃ ಅವನಿಗೂ ಅರ್ಥವಾಗುವುದಿಲ್ಲ ಅರ್ಥವಾದರೂ
ಅಂತರ ಬಹಳ ನಮ್ಮ ನಡುವೆ
ಅವನು ನೋಡುವ ದಿಕ್ಕು ನಾವು ನೋಡುವ ದಿಕ್ಕು
ಒಂದೆ ಆದರೂ
ಕಾಣುವುದರಲ್ಲಿ ಬಹಳ ವ್ಯತ್ಯಾಸವಿದೆ

ಮೊದಲೇ ಬಂದ ಎಜ್ರಾ
ನಮ್ಮ ಮಿತ್ರ ಅಥವಾ ವೈರಿ
ನಮಗೆ ಮರೆತಿದೆ ಅವನೂ
ನೆನಪಿಸುವುದಿಲ್ಲ
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...