Home / ಲೇಖನ / ಇತರೆ / ಬಿಳಿಯ ಬಣ್ಣದ ಕತೆ

ಬಿಳಿಯ ಬಣ್ಣದ ಕತೆ

ಬಿಳಿಯ ಬಣ್ಣ ಬಿಳಿಯ ಬಟ್ಟೆ ಬರೆ ಇತ್ಯಾದಿಗಳಿಂದ ಕೆಲ ಸೋಂಕುಗಳು ಬರುತ್ತಿವೆಯೆಂದು ಬೆಂಗಳೂರಿನ ಖಾಸಗಿ ವೈದ್ಯ ಕಾಲೇಜಿನ ಎಡ್ಮಂಡ್ ಫರ್‍ನಾಂಡಿಸ್ ಅವರು ನಡೆಸಿದ ಸಂಶೋಧನೆಯಿಂದ ದೃಢಪಟ್ಟಿದೆ.

ಶ್ರೀಯುತರು ತಮ್ಮ ವರದಿಯನ್ನು ಕೇಂದ್ರ ಸರ್‍ಕಾರದ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ ಶೀಘ್ರ ನಿರ್‍ಧಾರ ಕೈಗೊಳ್ಳಬೇಕೆಂದು ಎಡ್ಮಂಡ್ ಫರ್‍ನಾಂಡಿಸ್ ಅಗ್ರಹಿಸಿದ್ದಾನೆ.

ಬಿಳಿ ಬಟ್ಟೆ ಬರೆ ಧರಿಸುವವರಿಗೊಂದು ಶಾಕ್ ನೀಡಿದ್ದಾನೆ ! ಬರೀ ಬಿಳಿ ಬಟ್ಟೆ ಧರಿಸುವುದರಿಂದ ವೃತ್ತಿಪರ ವೈದ್ಯರಾಗಲು ಮದರ್ ಥೇರಿಸಾ ಆಗಲು ಸಾಧ್ಯವಿಲ್ಲ. ರೋಗಿಗಳಿಗೆ ಭರವಸೆಯ ಉತ್ತಮ ಶೂಶ್ರೂಷೆ ನೀಡುವವರಾಗಿರಬೇಕು ಎಂದು ಶಿಫಾರಸ್ಸು ಕೂಡಾ ಮಾಡಿದ್ದಾನೆ.

ಶತ ಶತಮಾನಗಳಿಂದಲೂ ಬಿಳಿ ಬಟ್ಟೆ ಧರಿಸುವುದು ವಾಡಿಕೆ ಸಂಪ್ರದಾಯವಾಗಿ ಬಂದಿದೆ. ಈ ಬಿಳಿಯ ಬಟ್ಟೆಗಳೇ ವೈರಸ್‌ಗಳನ್ನು ಹರಡುತ್ತಿದೆಯೆಂಬುದು ಹಲವರಿಗೆ ತಿಳಿದಿರುವುದಿಲ್ಲ.

ವೈದ್ಯರು- ವಿದ್ಯಾರ್ಥಿಗಳು, ಆಸ್ಪತ್ರೆಯ ಸಿಬ್ಬಂದಿ, ಬರೀಯ ಬಿಳಿ ಬಟ್ಟೆ ಧರಿಸಿ ಎಲ್ಲ ಕಡೆ, ಹೊರ ಒಳಗೆ ಅಡ್ಡಾಡುವರು. ಇದರಿಂದಾಗಿ ಸೊಂಕುಗಳು ಹರಡಲು ರೋಗ ಉಲ್ಬಣಗೊಳ್ಳಲು ಕಾರಣವಾಗಿದೆಯೆಂದು ದೃಢ ಪಡಿಸಿರುವರು.

೨೦೦೭ ರಲ್ಲಿ ಯುನೈಟೆಡ್ ಕಿಂಗ್ ಡಮ್‌ನಲ್ಲಿ ನೀಳ ತೋಳಿನ ಕೋಟ್ ಧರಿಸುವುದನ್ನು ನಿಲ್ಲಿಸುವ ಬಗ್ಗೆ ನಿಷೇಧ ಹೇರುವ ನಿರ್ಧಾರ ಕೈ ಗೊಂಡಿರುವರು.

೨೦೦೯ ರಲ್ಲಿ ಅಮೇರಿಕ ವೈದ್ಯಕೀಯ ಸಂಸ್ಥೆ ಅದನ್ನು ಅನುಸರಿಸಲು ಮುಂದಾಯಿತು. ಆದರೆ ಪ್ರತಿರೋಧದ ಹಿನ್ನಲೆಯಲ್ಲಿ ಅಂಥ ನಿರ್‍ಧಾರ ಕೈಗೊಳ್ಳಲು ಸಾಧ್ಯವಾಗಲಿಲ್ಲ ಎಂದು ಎಡ್ಮಂಡ್ ಫರ್‍ನಾಂಡಿಸ್ ತಮ್ಮ ಸಂಶೋಧನೆಯಲ್ಲಿ ವಿವರಿಸಿದ್ದಾರೆ.

ಹೀಗೆ ಸಂಶೋಧನೆ ಕೈಗೊಳ್ಳುತ್ತಾ ಹೋದಂತೆಲ್ಲ ಹೊಸ ಹೊಸ ವಿಚಾರಗಳು ಹೊರ ಹೊಮ್ಮುತ್ತವೆ!

ನಾವು-ನೀವು ಎಲ್ಲರೂ ಸೇರಿ-ಎಡ್ಮಂಡ್ ಫರ್‍ನಾಂಡಿಸ್ ಅವರಿಗೆ ಆಲ್ ದಿ ಬೆಸ್ಟ್ ಹೇಳೋಣವಲ್ಲವೇ?
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...