ಕಾಮುಕ

ನಾನು ಕಾಮುಕನೆಂದು ಹಳಿಯುವರು. ಗ್ರಂಥಗಳ-
ನೋದಿ ನರಕವೆ ಲೇಸು ಈ ಪಶುವಿಗೆನ್ನುವರು.
ನಾಲ್ಕು ದಿನ ತಮ್ಮ ಮಲಬದ್ಧತೆಯ ಕಳೆದವರು
ಇವನು ವ್ರಣಕಾಯನೆಂದೊರಯುವರು ಪಂಥಗಳ
ಡಾಂಭಿಕರು ಜರೆಯುವರು ಅಂಥ ಇಂಥವುಗಳಾ
ವಂಧಾನದವನೆಂದು. ಈ ಜನರ ಕೊಲ್ಲಲೆನೆ
ಒಂದು ಕೊಂತವು ಸಾಕು, ಜೋಡೆಯೊಡನೊಂದು ದಿನ
ಸುಮ್ಮನಿಹೆ ನಗೆಗೇಡು, ಕೊಲಲಿಂಥ ತಂತುಗಳ?

ಕಾಮಾಂಧನೆನಬೇಡಿ ನಾನಿರಲು ಕಾಮಾಂಧ,
ನೀವಹುದು ಧರ್‍ಮಾಂಧ, ವಿದ್ಯಾಂಧ, ಶ್ರದ್ಧಾಂಧ,
ಜನ್ಮಾಂಧ! ನಿಮಗೇನು ಹೊನ್ನು ಗೋರಿಯ ಕಟ್ಟಿ
ಕೈಮುಗಿದು ನಿಂತಿಲ್ಲ ಕಾಳನವ. ಸದೆಬಡೆದು
ನನ್ನೊಡನೆ ಮಣ್ಣಿನಲಿ ಕೊಡೆದೆಳೆಯುವನು ಮೆಟ್ಟಿ
ನಿಮ್ಮೌಪನಿಷದ-ಪ್ರಾಣಗಳನಂಗಕೆ ತೊಡೆದು!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಶರಣಗಾನವು ಸುರಿಯಲಿ
Next post ಕಾಡುತಾವ ನೆನಪುಗಳು – ೩೨

ಸಣ್ಣ ಕತೆ

  • ಇಬ್ಬರು ಹುಚ್ಚರು

    ಸದಾಶಿವನಿಗೆ ಹೀಗೆ ಹುಚ್ಚನಾಗಿ ಅಲೆಯುವ ಅಗತ್ಯ ಖಂಡಿತಕ್ಕೂ ಇರಲಿಲ್ಲ. ಅವನಿಗೊಂದು ಹಿತ್ತಿಲು ಮನೆಯೂ, ಹಿತ್ತಿಲಲ್ಲಿ ಸಾಕಷ್ಟು ಫಲ ಕೊಡುವ ಗೇರು ಮರಗಳೂ ಇದ್ದವು. ದಿನಕ್ಕೆ ಸಾವಿರ ಬೀಡಿ… Read more…

  • ಬಿರುಕು

    ಚಂಪಾ ಹಾಲು ತುಂಬಿದ ಲೋಟ ಕೈಯಲ್ಲಿ ಹಿಡಿದು ಒಳಗೆ ಬಂದಳು. ಎಂದಿನಂತೆ ಮೇಜಿನ ಮೇಲಿಟ್ಟು ಮಾತಿಲ್ಲದೆ ಹೊರಟು ಹೋಗುತ್ತಿದ್ದ ಅವಳು ಹೊರಡುವ ಸೂಚನೆಯನ್ನೇ ತೋರದಿದ್ದಾಗ ಮೂರ್‍ತಿ ಬೆಚ್ಚಿ… Read more…

  • ಮನೆಮನೆಯ ಸಮಾಚಾರ

    ಪ್ರಮೋದನಗರದ ಸಮೀಪದಲ್ಲಿ ಹೂವಿನಹಳ್ಳಿಯೆಂಬದೊಂದು ಗ್ರಾಮವಿರುವದು. ಅಲ್ಲಿ ಪ್ರೌಢರಾಯನೆಂಬ ದೊಡ್ಡ ವೃತ್ತಿವಂತನಾದ ಗೃಹಸ್ಥನಿದ್ದನು. ಪ್ರೌಢರಾಯರಿಗೆ ಇಬ್ಬರು ಗಂಡುಮಕ್ಕಳೂ, ಒಬ್ಬ ಹೆಣ್ಣು ಮಗಳೂ ಇದ್ದರು. ರಾಯರ ಹಿರಿಯ ಮಗನಾದ ರಾಮಚಂದ್ರರಾಯನು… Read more…

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…

  • ಮುದುಕನ ಮದುವೆ

    ಎಂಬತ್ತುನಾಲ್ಕು ವರ್ಷದ ನಿವೃತ್ತ ಡಾಕ್ಟರ್ ಶ್ಯಾಮರಾಯರಿಗೆ ೩೮ ವರ್ಷದ ಗೌರಮ್ಮನನ್ನು ಮದುವೆಯಾದಾಗ ಅದು ವೃತ್ತಪತ್ರಿಕೆಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಬಂದು ಒಂದು ರೀತಿಯ ಆಶ್ಚರ್ಯ, ಕೋಲಾಹಲ ಎಬ್ಬಿಸಿತ್ತು. ಡಾ.… Read more…