ಶರಣಗಾನವು ಸುರಿಯಲಿ

ನಿತ್ಯ ನೆನೆನೆನೆ ಸತ್ಯ ಶಿವನನು
ಶರಣ ಗಾನವು ಸುರಿಯಲಿ
ನಿತ್ಯ ವಚನದ ಗಂಧ ಹರಡಲಿ
ವಿಶ್ವ ಸುಂದರವಾಗಲಿ

ಯುಗದ ಕೊನೆಯಲಿ ಕೂಗಿ ಬರುವನು
ಶಿವನು ಸಂಗಮನಾಥನು
ಇಗೋ ಸಂಗಮ ವಿಶ್ವ ಗಮಗಮ
ಜಗವ ಜಂಗಮ ಗೈವನು

ಸರಳ ಜೀವನ ಸಹಜ ಭಾವನ
ಬೆಳ್ಳಿ ಬೆಳಕನು ಕೊಡುವನು
ಜೀವ ಶಿಕ್ಷಣ ಆತ್ಮ ಶಿಕ್ಷಣ
ನೀಡಿ ರಕ್ಷಣೆಗೈವನು

ವಿಮಲ ಬದುಕಿನ ಕಮಲ ಜೀವನ
ಶಾಂತಿ ಶೀತಲ ಗೈವನು
ನಾವು ನವಿಲಿನ ನಾಟ್ಯ ಗೈಯಲು
ಜ್ಞಾನ ಮಂಚವ ಕೊಡುವನು

ಮನದ ಕನ್ನಡಿ ಮಿನುಗಿ ಹೊಳೆಯಲಿ
ಚಂದ್ರ ತಾರೆಯು ಸುರಿಯಲಿ
ಹಾಲು ಹರಿಯಲಿ ಜೇನು ಸುರಿಯಲಿ
ಭೂಮಿ ಸ್ವರ್‍ಗವ ತೂಗಲಿ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಾನೆಂಬ ಭಾವದಲ್ಲಿ ಹುಟ್ಟುವ ಕವಿತೆಗಳು
Next post ಕಾಮುಕ

ಸಣ್ಣ ಕತೆ

  • ಬಾಗಿಲು ತೆರೆದಿತ್ತು

    ಆ ಮನೆಯ ಮುಂದಿನ ಬಾಗಿಲು ಯಾವಾಗಲೂ ಇಕ್ಕಿರುವುದು! ನನ್ನ ಓದುವ ಕೋಣೆಯ ಕಿಡಿಕೆಯೊಳಗಿಂದ ಆ ಮನೆಯ ಬಾಗಿಲು ಕಾಣುವುದು. ನಾನು ಕಿಡಿಕೆಯೊಳಗಿಂದ ಎಷ್ಟೋ ಸಲ ಅತ್ತ ಕಡೆ… Read more…

  • ದುರಾಶಾ ದುರ್ವಿಪಾಕ

    "ಒಳ್ಳೇದು, ಅವನನ್ನು ಒಳಗೆ ಬರಹೇಳು" ಎಂದು ಪ್ರೇಮಚಂದನು- ಘನವಾದ ವ್ಯಾಪಾರಸ್ಥನು- ಆಢ್ಯತೆಯಿಂದ, ತಾನು ಆಡುವ ಒಂದೊಂದು ಶಬ್ದವನ್ನು ತೂಕಮಾಡಿ ಚಲ್ಲುವಂತೆ ಸಾವಕಾಶವಾಗಿ ನುಡಿದನು. ಬಾಗಿಲಲ್ಲಿ ನಿಂತಿದ್ದ ವೃದ್ಧ… Read more…

  • ಗೋಪಿ

    ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…

  • ಸಂಶೋಧನೆ

    ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…