ನನ್ನ ಕೊಲೆಗಾರ

ಯಾವ ಗೋರಿಯಲಿ ಯಾರ ಶವವಿದೆ
ಏನು ಹೆಸರು ನನಗೇನು ಗೊತ್ತು?
ಯಾವ ಚಹರೆ, ಯಾವ ಬಣ್ಣ, ಯಾರಿಗೆ ಗೊತ್ತು?
ಯಾಕೆ ಕೊಲೆಯಾದೆ, ಯಾರು ಕೊಂದರು
ಕೊಲೆಗಾರನ ಹೆಸರು ಗೊತ್ತಿಲ್ಲ ನನಗೆ,
ಗೋರಿಗಳ ನಿಶಾನೆ ಅಳಿಸಿ ಹೋಗುತ್ತಿವೆ
ಹೊದಿಸಿದ ಆ ಚಾದರದ ಮೇಲಿನ ಹೂ
ತುಸುವೇ ಪಕ್ಕಕ್ಕೆ ಸರಿಸಿ ನೋಡಿದೆ
ಅಲ್ಲಿರುವ ರಕ್ತದ ಕಲೆಗಳು ಯಾರವು?
ಯಾರಿಗೆ ಗೊತ್ತು ಕೊಲೆಗಡುಕನ ಹೆಸರು?

ಆ ಗೋರಿಯ ಬಳಿ ನಿಂತ ಅವರು
ಎರಡೂ ಕೈಗಳ ಮೇಲೆತ್ತಿ ಅಲ್ಲಾಹ್‌ನಲಿ
ಪ್ರಾರ್ಥಿಸುತ್ತಾರೆ – ದುವಾ ಹೇಳುತ್ತಿದ್ದಾರೆ ನೋಡು
ಅದು ಪುಣ್ಯವಂತರ ಸಮಾಧಿಯಿರಬೇಕು
ಹೊಸ ಚಾದರ ಹೊದಿಸಿದ್ದಾರೆ
ಮಕಮಲ್ಲಿನ ಮೃದು, ಮಲ್ಲಿಗೆ ಸುವಾಸನೆ
ಅತ್ತರು ಸಿಡಿಸಿ, ಊದುಬತ್ತಿ ಹಚ್ಚಿದ್ದಾರೆ
ಕೆತ್ತಿದ ಕುಸುರಿ ಕಲ್ಲು ನೆಟ್ಟಿದ್ದಾರೆ
ಗೋರಿಯ ನಿಶಾನೆ ಹಾಗೇ ಉಳಿದಿದೆ ನೋಡು
ನನ್ನ ಗೋರಿಯ ನಿಶಾನೆ ಅಳಿಸಿ ಹೋಗುತ್ತಿದೆ,
ನನ್ನ ಮುಖವೇ ನನಗೆ ಕಾಣುತ್ತಿಲ್ಲ
ಕಫನ್ನಿನ ಬಟ್ಟೆಯಿಂದ ಮುಚ್ಚಿದ್ದಾರೆ ನೋಡು
ನನ್ನ ಕೊಲೆಗಾರ ಗೋರಿ ಗಿಡುಗನೇ
ನಿನ್ನ ಪಾಪದ ಕೃತ್ಯಗಳನ್ನು
ನನ್ನ ಚಾದರಕ್ಕೆ ತಗುಲಿದೆ
ಈ ರಕ್ತ ಕಲೆಗಳೇ ಹೇಳುತ್ತಿವೆ
ನನ್ನ ಕೊಂದವರು ಯಾರು ಎಂದು.
ನಾನೇಕೆ ಸಾಬೀತು ಪಡಿಸಲಿ ಹೇಳು?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಾಯಿಗೆ ನಿಷೇಧ
Next post ಜುಟ್ಟು

ಸಣ್ಣ ಕತೆ

  • ಹುಟ್ಟು

    ಶಾದಿ ಮಹಲ್‌ನ ಒಳ ಆವರಣದಲ್ಲಿ ದೊಡ್ಡ ಹಾಲ್‌ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು,… Read more…

  • ಕಳಕೊಂಡವನು

    ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…

  • ಅಪರೂಪದ ಬಾಂಧವ್ಯ

    ಹೆತ್ತ ತಾಯಿ ಬಿಟ್ಟುಹೋದ ಎರಡು ಮುಂಗಸಿ ಮರಿಗಳು ಅನಾಥವಾಗಿ ಚೀರಾಡುತ್ತಿದ್ದುದು, ಮನೆಯ ಮಕ್ಕಳ ಕಣ್ಣಿಗೆ ಬಿದ್ದಿತು. "ಅಪ್ಪಾ ಇಲ್ಲಿ ನೋಡು, ಮುಂಗುಸಿ ಮರಿ ಅಳುತ್ತಾ ಇವೆ. ಅದಕ್ಕೆ… Read more…

  • ಸಂಬಂಧ

    ದೆಹಲಿಯಲ್ಲಿ ವಿಪರೀತ ಚಳಿ. ಆ ದಿನ ವಿಪರೀತ ಮಂಜು ಕೂಡಾ ಕವಿದಿತ್ತು. ದೆಹಲಿಗೆ ಬರುವ ವಿಮಾನಗಳೆಲ್ಲಾ ತಡವಾಗಿ ಬರುತ್ತಿದ್ದವು. ಸರಿಯಾಗಿ ಲ್ಯಾಂಡಿಂಗ್ ಮಾಡಲಾಗದೆ ಫೈಲೆಟ್‌ಗಳು ಒದ್ದಾಡುತ್ತಿದ್ದರು. ದೆಹಲಿಯಿಂದ… Read more…

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…