Home / ಲೇಖನ / ಇತರೆ / ನಾಯಿಗೆ ನಿಷೇಧ

ನಾಯಿಗೆ ನಿಷೇಧ

ಇಟಲಿಯ ದಕ್ಷಿಣ ಭಾಗದಲ್ಲಿರುವ ಕ್ಯಾಂಪೇನಿಯ ಪ್ರಾಂತ್ಯದ ಕೊಂಟ್ರೋನ್ ಪಟ್ಟಣದಲ್ಲಿ ಮೇಯರ್ ಬಲು ಸ್ಟ್ರಾಂಗ್! ಇಡೀ ವಿಶ್ವದಲ್ಲೇ ಇಲ್ಲದ ಆದೇಶವನ್ನು ಇವರು ಮಾಡಿರುವರು.

ಅಬ್ಬಾ! ಮೇಯರ್‌ ಎಂದರೆ ಹೀಗಿರಬೇಕು. ಜನರಿಂದ ಆಯ್ಕೆಯಾಗಿ ಜನರು ಸಾಕಿದ ನಾಯಿಗಳು ಮಧ್ಯಾಹ್ನ ೨ ರಿಂದ ೪ ಗಂಟೆಯ ಅವಧಿಯಲ್ಲಿ ಯಾವುದೇ ಕಾರಣಕ್ಕೂ… ಬೊಗಳದಂತೆ ಅದರ ಮಾಲೀಕರು ನೋಡಿಕೊಳ್ಳಬೇಕೆಂದು ಆದೇಶಿಸಿರುವರು! ಕಾರಣ- ಈ ವೇಳೆಯಲ್ಲಿ ಪಟ್ಟಣದ ಜನರು ವಿಶ್ರಾಂತಿಯಲ್ಲಿರುವರು. ಕಿರು ಸಕ್ಕರೆ ನಿದ್ರೆಯಲ್ಲಿರುವರು. ಅವರ ಭಂಗಕ್ಕೆ ನಾಯಿಯ ಬೊಗಳು ಅಡ್ಡಿಯಾಗಬಾರದು! ಭಪ್ಪರೆ… ಜನರ ಬಗ್ಗೆ ಇಷ್ಟು ಕಾಳಜಿಯೇ..?

ಈ ಸಮಯದಲ್ಲಿ ನಾಯಿ ಬೊಗಳಿದರೆ ಅದರ ಮಾಲೀಕರಿಗೆ ರೂ. ೩೫,೦೦೦ ಅಂದರೆ ೫೦೦ ಯೂರೊಗಳವರೆಗೆ ದಂಡ ವಿಧಿಸಲಾಗುವುದೆಂದು ಮೇಯರ್ ಆದೇಶ ನೀಡಿರುವರು.

-ಹೀಗೆ ಮಧ್ಯಾಹ್ನ ೨ ರಿಂದ ೪ ರವರೆಗಿನ ಹಗಲು ವಿರಾಮದ ಅವಧಿಯಲ್ಲಿ ಅಲ್ಲದೆ ರಾತ್ರಿ ವೇಳೆಯೂ ನಾಯಿಗಳು ಶಬ್ದ ಮಾಡದಂತೆ ನಾಯಿ ಸಾಕುವವರು ಎಚ್ಚರ ವಹಿಸಬೇಕೆಂದೂ ಆದೇಶದಲ್ಲಿ ಮೇಯರ್‌ ಸ್ಪಷ್ಟವಾಗಿ ಆಗ್ರಹಿಸಿರುವರು.

ಇಷ್ಟೇ ಅಲ್ಲದೇ ಸಾರ್‍ವಜನಿಕ ಸ್ಥಳಗಳಲ್ಲಿ ಯಾವುದೇ ಯಾರದೇ ನಾಯಿಗಳನ್ನು ಒಂಟಿಯಾಗಿ ಬಿಡಾಡಿಯಾಗಿ ಬಿಡಬಾರದು!! ಹೀಗೆ ಬಿಟ್ಟರೆ ಅದಕ್ಕೂ ಮಾಲೀಕರು ದಂಡ ಕಟ್ಟಬೇಕು. ನಾಯಿ ಮೂತ್ರ ಮಾಡಿದರೆ- ಮಲ ವಿಸರ್ಜಿಸಿದರೆ ಅದನ್ನು ನೀರು ಹಾಕಿ ಮಾಲೀಕರೇ ಸ್ವಚ್ಛಗೊಳಿಸಬೇಕು! ಇಲ್ಲವಾದರೆ ದಂಡ ಸ್ಥಳದಲ್ಲೇ ಕಟ್ಟಿ ನಾಯಿ ಒಯ್ಯಬೇಕು.

ಹೇಗಿದೆ ಮೇಯರ್‌ ಆದೇಶ?! ಈಗೀಗ ಇಟಲಿಯ ಜನರು ನಾಯಿಗಳನ್ನು ಸಾಕುವುದನ್ನು ಕೈಬಿಟ್ಟಿರುವರು. ನಾಯಿ ರುಚಿಗೆ ಅಂಟಿಕೊಂಡವರು ನಾಯಿ ಬಾಯಿಗೆ ಕ್ಯಾಪ್ ಹಾಕಿ ಭದ್ರಗೊಳಿಸಿ ಸಾಕುತ್ತಿರುವರು ಹೆಚ್ಚು ರಚ್ಚೆ ಹಿಡಿದು ಬೊಗಳಿದ ನಾಯಿಯನ್ನು ಕೊಂದು ತಿಂದು ತೃಪ್ತಿ ಪಟ್ಟುಕೊಂಡು ಬೀಗುವರು.

ಆಹಾ! ನಮ್ಮಲ್ಲಿ ಬೆಂಗಳೂರಿನಲ್ಲಿ ಮೈಸೂರು, ಹುಬ್ಬಳ್ಳಿ, ಧಾರವಾಡ, ಗುಲ್ಬರ್‍ಗ, ಬೆಳಗಾವಿಯಲ್ಲಿ ಮೇಯರ್‌ಗಳೆಲ್ಲ ಈ ರೀತಿ ಆದೇಶ ಹೊರಡಿಸಿದರೆ ಹೇಗೆ? ಕಾದು ನೋಡೋಣವಲ್ಲವೇ?
*****

Tagged:

Leave a Reply

Your email address will not be published. Required fields are marked *

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...