Home / ಲೇಖನ / ಇತರೆ / ನಾಯಿಗೆ ನಿಷೇಧ

ನಾಯಿಗೆ ನಿಷೇಧ

ಇಟಲಿಯ ದಕ್ಷಿಣ ಭಾಗದಲ್ಲಿರುವ ಕ್ಯಾಂಪೇನಿಯ ಪ್ರಾಂತ್ಯದ ಕೊಂಟ್ರೋನ್ ಪಟ್ಟಣದಲ್ಲಿ ಮೇಯರ್ ಬಲು ಸ್ಟ್ರಾಂಗ್! ಇಡೀ ವಿಶ್ವದಲ್ಲೇ ಇಲ್ಲದ ಆದೇಶವನ್ನು ಇವರು ಮಾಡಿರುವರು.

ಅಬ್ಬಾ! ಮೇಯರ್‌ ಎಂದರೆ ಹೀಗಿರಬೇಕು. ಜನರಿಂದ ಆಯ್ಕೆಯಾಗಿ ಜನರು ಸಾಕಿದ ನಾಯಿಗಳು ಮಧ್ಯಾಹ್ನ ೨ ರಿಂದ ೪ ಗಂಟೆಯ ಅವಧಿಯಲ್ಲಿ ಯಾವುದೇ ಕಾರಣಕ್ಕೂ… ಬೊಗಳದಂತೆ ಅದರ ಮಾಲೀಕರು ನೋಡಿಕೊಳ್ಳಬೇಕೆಂದು ಆದೇಶಿಸಿರುವರು! ಕಾರಣ- ಈ ವೇಳೆಯಲ್ಲಿ ಪಟ್ಟಣದ ಜನರು ವಿಶ್ರಾಂತಿಯಲ್ಲಿರುವರು. ಕಿರು ಸಕ್ಕರೆ ನಿದ್ರೆಯಲ್ಲಿರುವರು. ಅವರ ಭಂಗಕ್ಕೆ ನಾಯಿಯ ಬೊಗಳು ಅಡ್ಡಿಯಾಗಬಾರದು! ಭಪ್ಪರೆ… ಜನರ ಬಗ್ಗೆ ಇಷ್ಟು ಕಾಳಜಿಯೇ..?

ಈ ಸಮಯದಲ್ಲಿ ನಾಯಿ ಬೊಗಳಿದರೆ ಅದರ ಮಾಲೀಕರಿಗೆ ರೂ. ೩೫,೦೦೦ ಅಂದರೆ ೫೦೦ ಯೂರೊಗಳವರೆಗೆ ದಂಡ ವಿಧಿಸಲಾಗುವುದೆಂದು ಮೇಯರ್ ಆದೇಶ ನೀಡಿರುವರು.

-ಹೀಗೆ ಮಧ್ಯಾಹ್ನ ೨ ರಿಂದ ೪ ರವರೆಗಿನ ಹಗಲು ವಿರಾಮದ ಅವಧಿಯಲ್ಲಿ ಅಲ್ಲದೆ ರಾತ್ರಿ ವೇಳೆಯೂ ನಾಯಿಗಳು ಶಬ್ದ ಮಾಡದಂತೆ ನಾಯಿ ಸಾಕುವವರು ಎಚ್ಚರ ವಹಿಸಬೇಕೆಂದೂ ಆದೇಶದಲ್ಲಿ ಮೇಯರ್‌ ಸ್ಪಷ್ಟವಾಗಿ ಆಗ್ರಹಿಸಿರುವರು.

ಇಷ್ಟೇ ಅಲ್ಲದೇ ಸಾರ್‍ವಜನಿಕ ಸ್ಥಳಗಳಲ್ಲಿ ಯಾವುದೇ ಯಾರದೇ ನಾಯಿಗಳನ್ನು ಒಂಟಿಯಾಗಿ ಬಿಡಾಡಿಯಾಗಿ ಬಿಡಬಾರದು!! ಹೀಗೆ ಬಿಟ್ಟರೆ ಅದಕ್ಕೂ ಮಾಲೀಕರು ದಂಡ ಕಟ್ಟಬೇಕು. ನಾಯಿ ಮೂತ್ರ ಮಾಡಿದರೆ- ಮಲ ವಿಸರ್ಜಿಸಿದರೆ ಅದನ್ನು ನೀರು ಹಾಕಿ ಮಾಲೀಕರೇ ಸ್ವಚ್ಛಗೊಳಿಸಬೇಕು! ಇಲ್ಲವಾದರೆ ದಂಡ ಸ್ಥಳದಲ್ಲೇ ಕಟ್ಟಿ ನಾಯಿ ಒಯ್ಯಬೇಕು.

ಹೇಗಿದೆ ಮೇಯರ್‌ ಆದೇಶ?! ಈಗೀಗ ಇಟಲಿಯ ಜನರು ನಾಯಿಗಳನ್ನು ಸಾಕುವುದನ್ನು ಕೈಬಿಟ್ಟಿರುವರು. ನಾಯಿ ರುಚಿಗೆ ಅಂಟಿಕೊಂಡವರು ನಾಯಿ ಬಾಯಿಗೆ ಕ್ಯಾಪ್ ಹಾಕಿ ಭದ್ರಗೊಳಿಸಿ ಸಾಕುತ್ತಿರುವರು ಹೆಚ್ಚು ರಚ್ಚೆ ಹಿಡಿದು ಬೊಗಳಿದ ನಾಯಿಯನ್ನು ಕೊಂದು ತಿಂದು ತೃಪ್ತಿ ಪಟ್ಟುಕೊಂಡು ಬೀಗುವರು.

ಆಹಾ! ನಮ್ಮಲ್ಲಿ ಬೆಂಗಳೂರಿನಲ್ಲಿ ಮೈಸೂರು, ಹುಬ್ಬಳ್ಳಿ, ಧಾರವಾಡ, ಗುಲ್ಬರ್‍ಗ, ಬೆಳಗಾವಿಯಲ್ಲಿ ಮೇಯರ್‌ಗಳೆಲ್ಲ ಈ ರೀತಿ ಆದೇಶ ಹೊರಡಿಸಿದರೆ ಹೇಗೆ? ಕಾದು ನೋಡೋಣವಲ್ಲವೇ?
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...