Home / ಲೇಖನ / ಇತರೆ / ಉಪ್ಪಿನ ಋಣ

ಉಪ್ಪಿನ ಋಣ

“ಉಪ್ಪಿಗಿಂತ ರುಚಿಯಿಲ್ಲ. ತಾಯಿಗಿಂತ ಬಂಧುವಿಲ್ಲ” ಎಂಬ ಗಾದೆ ಮಾತೇ ಇದೆ. ಉಪ್ಪಿನ ಋಣ ತೀರದು. ಯಾರ ಬಳಿ ಉಪ್ಪು ಸಾಲವಾಗಿ ಪಡೆಯಬಾರದು. ರಾತ್ರಿ ಸಮಯ ಉಪ್ಪು ಮನೆಗೆ ತರಬಾರದು. ಉಪ್ಪು, ಅಡಿಗೆ ಎಣ್ಣೆ, ಬೆಲ್ಲ ಒಂದೇ ಸಾರಿ ತರಬಾರದು ಶುಭ ಸೂಚನೆಗಳಲ್ಲ!

ಮನೆಯಲ್ಲಿ ಉಪ್ಪು ಯಾವಾಗಲೂ ಇರುವಂತೆ ನೋಡಿಕೊಳ್ಳಬೇಕು. ಯಾವುದಕ್ಕೆ ಬಡತನವಿದ್ದರೂ ಉಪ್ಪಿಗೆ ಕೊರತೆಯಿರದಂತೆ ನೋಡಿಕೊಳ್ಳಬೇಕು.

ರಾತ್ರಿ ಹೊತ್ತು- ಶುಭ ಸಮಾರಂಭಗಳಲ್ಲಿ ಉಪ್ಪನ್ನು ಸಕ್ಕರೆಯೆಂದು ಕರೆಯಬೇಕು. ಮನೆಯಲ್ಲಿ ಸಕ್ಕರೆಯಿಲ್ಲದಿದ್ದರೆ ಹಾನಿಯಿಲ್ಲ. ಆದರೆ ಉಪ್ಪು ಇಲ್ಲದಿದ್ದರೆ, ಏನು ತಿಂದರೂ ನಾಲಿಗೆಗೆ ರುಚಿ ಹತ್ತದು.

ಕಡಿಮೆ ರಕ್ತದೊತ್ತಡ ಇರುವವರು ಮೂರು ಹೊತ್ತು ಆಹಾರದಲ್ಲಿ ಉಪ್ಪು ಅಧಿಕವಿರುವಂತೆ ನೋಡಿಕೊಂಡು ಸೇವಿಸುವುದು ಒಳಿತು.

ಉಪ್ಪು ನೀರು- ಉಪ್ಪು ಅಧಿಕವಿರುವ ಆಹಾರ ಪದಾರ್ಥಗಳನ್ನು ಸೇವಿಸಿದರೆ ನಿದ್ದೆ ಬರುವುದು.

ಸಣ್ಣ ಕರುಳು ದೊಡ್ಡ ಕರುಳಿನಲ್ಲಿರುವ ಗ್ಯಾಸ್‌ನ್ನು ಉಪ್ಪು ಶಮನಗೊಳಿಸುವುದು. ಉಪ್ಪು ಎಲುಬುಗಳನ್ನು ಬಲಿಷ್ಠಗೊಳಿಸುವುದು.

ಜೀರ್‍ಣಕ್ರಿಯೆಗೆ ಉಪ್ಪು ಬೇಕೇ ಬೇಕು.

ಬುದ್ಧಿಶಕ್ತಿಯನ್ನು ವೃದ್ಧಿಗೊಳಿಸಲು ಉಪ್ಪು ಬೇಕೇಬೇಕು. ಸಕ್ಕರೆ ಖಾಯಿಲೆಯಿರುವವರಿಗೆ ಇನ್ಸುಲಿನ್ ಉತ್ಪತ್ತಿಯಾಗಲು ಉಪ್ಪುಬೇಕೇ ಬೇಕು.

ಕಾಲ್ಸಿಯಂ ಪ್ರೋಟೀನ್ ಕಡಿಮೆ ಇರುವವರೆಲ್ಲ ಉಪ್ಪು ತುಸು ಹೆಚ್ಚು ಸೇವಿಸಬೇಕು.

ಉಪ್ಪು ಉಪ್ಪು… ಉಪ್ಪಿಲ್ಲದೆ ನೆನಪಿನ ಶಕ್ತಿ ಕೂಡಾ ಕಡಿಮೆಯಾಗುವುದು. ಉಪ್ಪೇ ಅಧಿಕ ರಕ್ತದೊತ್ತಡಕ್ಕೆ ಕಾರಣೀಭೂತವಾಗಿ ಕಾಡುವುದೆಂಬುದನ್ನು ನೆನಪಿಸುತ್ತಾ ಉಪ್ಪಿನ ಋಣವನ್ನು ಇಲ್ಲಿಗೆ ತೀರಿಸುತ್ತಿದ್ದೇನೆ.
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...