ಉಪ್ಪಿನ ಋಣ

ಉಪ್ಪಿನ ಋಣ

“ಉಪ್ಪಿಗಿಂತ ರುಚಿಯಿಲ್ಲ. ತಾಯಿಗಿಂತ ಬಂಧುವಿಲ್ಲ” ಎಂಬ ಗಾದೆ ಮಾತೇ ಇದೆ. ಉಪ್ಪಿನ ಋಣ ತೀರದು. ಯಾರ ಬಳಿ ಉಪ್ಪು ಸಾಲವಾಗಿ ಪಡೆಯಬಾರದು. ರಾತ್ರಿ ಸಮಯ ಉಪ್ಪು ಮನೆಗೆ ತರಬಾರದು. ಉಪ್ಪು, ಅಡಿಗೆ ಎಣ್ಣೆ, ಬೆಲ್ಲ ಒಂದೇ ಸಾರಿ ತರಬಾರದು ಶುಭ ಸೂಚನೆಗಳಲ್ಲ!

ಮನೆಯಲ್ಲಿ ಉಪ್ಪು ಯಾವಾಗಲೂ ಇರುವಂತೆ ನೋಡಿಕೊಳ್ಳಬೇಕು. ಯಾವುದಕ್ಕೆ ಬಡತನವಿದ್ದರೂ ಉಪ್ಪಿಗೆ ಕೊರತೆಯಿರದಂತೆ ನೋಡಿಕೊಳ್ಳಬೇಕು.

ರಾತ್ರಿ ಹೊತ್ತು- ಶುಭ ಸಮಾರಂಭಗಳಲ್ಲಿ ಉಪ್ಪನ್ನು ಸಕ್ಕರೆಯೆಂದು ಕರೆಯಬೇಕು. ಮನೆಯಲ್ಲಿ ಸಕ್ಕರೆಯಿಲ್ಲದಿದ್ದರೆ ಹಾನಿಯಿಲ್ಲ. ಆದರೆ ಉಪ್ಪು ಇಲ್ಲದಿದ್ದರೆ, ಏನು ತಿಂದರೂ ನಾಲಿಗೆಗೆ ರುಚಿ ಹತ್ತದು.

ಕಡಿಮೆ ರಕ್ತದೊತ್ತಡ ಇರುವವರು ಮೂರು ಹೊತ್ತು ಆಹಾರದಲ್ಲಿ ಉಪ್ಪು ಅಧಿಕವಿರುವಂತೆ ನೋಡಿಕೊಂಡು ಸೇವಿಸುವುದು ಒಳಿತು.

ಉಪ್ಪು ನೀರು- ಉಪ್ಪು ಅಧಿಕವಿರುವ ಆಹಾರ ಪದಾರ್ಥಗಳನ್ನು ಸೇವಿಸಿದರೆ ನಿದ್ದೆ ಬರುವುದು.

ಸಣ್ಣ ಕರುಳು ದೊಡ್ಡ ಕರುಳಿನಲ್ಲಿರುವ ಗ್ಯಾಸ್‌ನ್ನು ಉಪ್ಪು ಶಮನಗೊಳಿಸುವುದು. ಉಪ್ಪು ಎಲುಬುಗಳನ್ನು ಬಲಿಷ್ಠಗೊಳಿಸುವುದು.

ಜೀರ್‍ಣಕ್ರಿಯೆಗೆ ಉಪ್ಪು ಬೇಕೇ ಬೇಕು.

ಬುದ್ಧಿಶಕ್ತಿಯನ್ನು ವೃದ್ಧಿಗೊಳಿಸಲು ಉಪ್ಪು ಬೇಕೇಬೇಕು. ಸಕ್ಕರೆ ಖಾಯಿಲೆಯಿರುವವರಿಗೆ ಇನ್ಸುಲಿನ್ ಉತ್ಪತ್ತಿಯಾಗಲು ಉಪ್ಪುಬೇಕೇ ಬೇಕು.

ಕಾಲ್ಸಿಯಂ ಪ್ರೋಟೀನ್ ಕಡಿಮೆ ಇರುವವರೆಲ್ಲ ಉಪ್ಪು ತುಸು ಹೆಚ್ಚು ಸೇವಿಸಬೇಕು.

ಉಪ್ಪು ಉಪ್ಪು… ಉಪ್ಪಿಲ್ಲದೆ ನೆನಪಿನ ಶಕ್ತಿ ಕೂಡಾ ಕಡಿಮೆಯಾಗುವುದು. ಉಪ್ಪೇ ಅಧಿಕ ರಕ್ತದೊತ್ತಡಕ್ಕೆ ಕಾರಣೀಭೂತವಾಗಿ ಕಾಡುವುದೆಂಬುದನ್ನು ನೆನಪಿಸುತ್ತಾ ಉಪ್ಪಿನ ಋಣವನ್ನು ಇಲ್ಲಿಗೆ ತೀರಿಸುತ್ತಿದ್ದೇನೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಒಲ್ಲದ ಕೊಡಿಗೆ
Next post ನನ್ನ ಲೇಖನಿ

ಸಣ್ಣ ಕತೆ

  • ತೊಳೆದ ಮುತ್ತು

    ಕರ್ನಾಟಕದಲ್ಲಿ ನಮ್ಮ ಮನೆತನವು ಪ್ರತಿಷ್ಠಿತವಾದದ್ದು. ವರ್ಷಾ ನಮಗೆ ಇನಾಮು ಭೂಮಿಗಳಿಂದ ಎರಡು- ಮೂರು ಸಾವಿರ ರೂಪಾಯಿಗಳ ಉತ್ಪನ್ನ. ನಮ್ಮ ತಂದೆಯವರಾದ ರಾವಬಹಾದ್ದೂರ ಅನಂತರಾಯರು ಡೆಪುಟಿ ಕಲೆಕ್ಟರರಾಗಿ ಪೆನ್ಶನ್ನ… Read more…

  • ಒಂದು ಹಿಡಿ ಪ್ರೀತಿ

    ತೆಂಗಿನ ತೋಟದಲ್ಲಿ ಬಾಗಿಕೊಂಡು ಹಣ್ಣಾಗಿ ಉದುರಿದ ಅಡಕೆಗಳನ್ನು ಒಂದೊಂದಾಗಿ ಹೆಕ್ಕಿ, ಸನಿಹದಲ್ಲಿದ್ದ ಪ್ಲಾಸ್ಟಿಕ್ ಚೀಲಕ್ಕೆ ತುಂಬಿಸುತ್ತಿದ್ದಂತೆ ಪಕ್ಕದಲ್ಲಿ ಸರಕ್ಕನೆ ಹರಿದು ಹೋದ ಕೇರೆ ಹಾವಿನಿಂದಾಗಿ ಒಮ್ಮೆ ವಿಚಲಿತರಾದರು… Read more…

  • ಎರಡು ಪರಿವಾರಗಳು

    ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ… Read more…

  • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

    ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…

  • ಅಜ್ಜಿಯ ಪ್ರೇಮ

    ಎರಡನೆಯ ಹೆರಿಗೆಯಲ್ಲಿ ಅಸು ನೀಗಿದ ಮಗಳು ಕಮಲಳನ್ನು ಕಳಕೊಂಡ ತೊಂಬತ್ತು ವರ್ಷದ ಜಯಮ್ಮನಿಗೆ ಸಹಿಸಲಾಗದ ಸಂಕಟವಾಗಿತ್ತು. ಹೆಣ್ಣು ಮಗುವಿಗೆ ಜನ್ಮವಿತ್ತು ತನ್ನ ಇಹದ ಯಾತ್ರೆಯನ್ನು ಮುಗಿಸಿ ಹೋದ… Read more…