ಅಂಗುಲ ಹುಳವೊಂದು

ಅಂಗುಲ ಹುಳವೊಂದು ತನ್ನ ಬದುಕ
ಅಂಗುಲ ಅಂಗುಲ ಅಳೆಯುತಿದೆ

ಯಾವುದೊ ಸಿಹಿಯೆಲೆಯಾಸೆ
ಯಾವುದೊ ಇಬ್ಬನಿ ಬಯಕೆ
ಈ ಹುಳವಿನ ತಲೆಯೊಳ ಹೊಕ್ಕು
ಹರೆಯುಸಿತಿದೆ ತೆವಳಿಸುತಿದೆ
ದಾರಿ ಸಾಗುವುದಿದೆ ಬಹಳ ದೂರ

ಪಕ್ಕದಲೇ ಒಂದು ಕಾಗೆ
ಎಡ ತಲೆಬಾಗಿಸಿ ಬಲ ತಲೆಬಾಗಿಸಿ
ತನ್ನ ಕೊಕ್ಕನು ಮೊನೆಮಾಡಿಕೊಳ್ಳುತಿದೆ
ಆಗಲೆ ಅದರ ರೆಕ್ಕೆಗಳೂ ಸಹ
ಎರಗಲು ತಯಾರಾಗುತಿವೆ

ಸಂಗಾತಿಯ ದನಿ ಕೇಳಿ ಹೊರಟ ಒಂದು ಕೀಟ
ತನ್ನ ಬೇಟ ಹುಡುಕುತ್ತಿದೆ ಊಟ ಹುಡುಕುತ್ತಿದೆ
ಈ ಹೂವು ಒಳ್ಳೆದೊ ಆ ಹೂವು ಒಳ್ಳೆದೊ
ಎಂದು ಅಲ್ಲಲ್ಲಿ ಸವಿದು ನೋಡುತಿದೆ

ಸಮೀಪದಲ್ಲೆ ಒಂದು ಮಾರ್‍ಜಾಲ
ತನ್ನುಗುರನೊಳಕ್ಕೆಳೆದು ಮೆಲ್ಲ
ಹೆಜ್ಜೆ ಹಾಕುತಿದೆ ಸದ್ದು ಮಾಡದೆಯೆ
ಏನದರ ಏಕಾಗ್ರ ಏನದರ ಸಾಧನೆ
ಸೆಟೆದು ಮೈ ಬಿಲ್ಲು ಬಾಣ
ಗುರಿ ಸೇರುವ ತನಕ

ಅಂತೆಯೇ ಒಂದು ಜೇಡ
ಅಂತೆಯೇ ಒಂದು ಹಲ್ಲಿ ಕೂಡ
ಅಂತೆಯೇ ಇಡಿ ಜೀವಜಾಲ

ಬ್ರಹ್ಮ ಬಗೆದ ಸಂಗೀತ ಮೇಳ
ತಂತಿಗಳು ಎಷ್ಟೊ ತಾಳಗಳು ಎಷ್ಟೊ
ಮಿಡಿವ ಹೃದಯಗಳೆಷ್ಟೊ
ತುಡಿವ ರಾಗಗಳೆಷ್ಟೊ
ಕೊಂದು ಕೂಗವೇ ಜೀವಗಳ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಜುಟ್ಟು
Next post ಉಮರನ ಒಸಗೆ – ೫೧

ಸಣ್ಣ ಕತೆ

  • ನಿಂಗನ ನಂಬಿಗೆ

    ಹೊಸಳ್ಳಿ ನೋಡುವದಕ್ಕೆ ಸಣ್ಣದಾದರೂ ಕಣ್ಣಿಗೆ ಅಂದವಾಗಿದೆ. ಬೆಳವಲ ನಾಡಿನಲ್ಲಿ ಬರಿ ಬಯಲೆಂದು ಟೀಕೆ ಮಾಡುವವರಿಗೆ ಹೊಸಳ್ಳಿ ಕೂಗಿ ಹೇಳುತ್ತಿದೆ - ತಾನು ಮಲೆನಾಡ ಮಗಳೆಂದು ! ಊರ… Read more…

  • ತನ್ನೊಳಗಣ ಕಿಚ್ಚು

    ಶಕೀಲಾ ಇನ್ನೂ ಮನೆಗೆ ಬಂದಿಲ್ಲ ಮೈಮೇಲೆ ಮುಳ್ಳುಗಳು ಎದ್ದಂಗಾಗದೆ. ಅಸಲು ಜೀವಂತ ಅದಾಳೋ? ಉಳಿದಾಳೆ ಜಿಂದಾ ಅಂಬೋದಾದ್ರೆ ಎಲ್ಲಿ? ಕತ್ಲೆ ಕವ್ಕತಾ ಅದೆ. ಈಗಷ್ಟೇ ಒಂದು ಗಂಟೆ… Read more…

  • ಅಂತರಂಗ ಶುದ್ಧಿ ಬಹಿರಂಗ ಶುದ್ಧಿ

    ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…

  • ದೇವರ ನಾಡಿನಲಿ

    ೧೯೯೮ ಜೂನ್ ತಿಂಗಳ ಮೊದಲ ವಾರದಲ್ಲಿ ನಾ ದೇವರನಾಡಿನಲಿ, ವಿಭಾಗೀಯ ಸಾರಿಗೆ ಅಧಿಕಾರಿ ಎಂದು, ವಿಭಾಗೀಯ ಕಛೇರಿ ಮಂಗಳೂರು ವಿಭಾಗ ಅಂದರೆ.... ದಕ್ಷಿಣ ಕನ್ನಡ ಜಿಲ್ಲೆಯಲ್ಲಿ... ಹರ್ಷದಿ,… Read more…

  • ಜೋತಿಷ್ಯ

    ತಮಿಳು ಮೂಲ: ಕೊನಷ್ಟೈ "ನೀವು ಏನು ಬೇಕಾದರೂ ಹೇಳಿ, ನನಗೆ ಜ್ಯೋತಿಷ್ಯದಲ್ಲಿ ನಂಬಿಕೆ ತಪ್ಪುವುದಿಲ್ಲ. ಅದರಲ್ಲಿಯೂ ರಾಮಲಿಂಗ ಜೋಯಿಸರಲ್ಲಿ ಪೂರ್ಣ ನಂಬಿಕೆ"ಎಂದಳು ಕಮಲಾ. ಸಮಯ, ಸಂಧ್ಯಾ ಕಾಲ.… Read more…