ಸತ್ಯಶರಣರ ದಾರಿ ಕಂಡು ಕೊಂಡೆ

ಓ ತಂದೆ ಶಿವತಂದೆ ಯುಗಯುಗದ ಗುರುತಂದೆ
ನಿನ್ನಿಂದಲೇ ಬೆಳಕು ಬೆಳದಿಂಗಳು
ಹಾಲು ಸಾಗರ ನೀನೆ ಪ್ರೇಮ ಸಾಗರ ನೀನೆ
ನೀನಿಲ್ಲದೀಭುವನ ಬರಿ ತಂಗಳು

ಶಾಂತಿ ಸಾಗರ ನೀನು ಪ್ರೀತಿ ಸಾಗರ ನೀನು
ನೀ ಸತ್ಯ ಶ್ರೀ ಶಿಖರ ಶ್ರೀಶೈಲವು
ಜ್ಞಾನ ಸಾಗರ ನೀನು ಕರುಣ ಸಾಗರ ನೀನು
ನೀ ಬಂದ ಈ ಭುವನ ಕೈಲಾಸವು

ನಾವೆ ಪಾರ್‍ವತಿ ನಿನಗೆ ದೇವಶಂಕರ ಗೆಲುಗೆ
ಪಂಚತತ್ತ್ವದ ಭೂಮಿ ಹೂವಾಗಲಿ
ನಿತ್ಯ ಹೊಸಮಳೆ ಬರಲಿ ಕಣ್ತುಂಬ ಬೆಳೆಬರಲಿ
ಬೆಳೆ ತುಂಬ ನೀನಕ್ಕು ತುಂಬಿಬರಲಿ

ನುಡಿಗಲಿತೆ ನಿನ್ನಿಂದ ನಡೆಗಲಿತೆ ನಿನ್ನಿಂದ
ಉಡಗಲಿತೆ ಉಣಗಲಿತೆ ಪ್ರೇಮತಂದೆ
ನಿನ್ನೊಳಗ ಉಳಕೊಂಡೆ ನಿನ್ನೊಳಗ ಪಡಕೊಂಡೆ
ಸತ್ಯ ಶರಣರ ದಾರಿ ಕಂಡುಕೊಂಡೆ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸಂಜೆ ಬಂದಾಗ ಹೊಳೆಯುತ್ತಿರಬೇಕು ಸಿಂಕು-ಹೊರ ದುಡಿಮೆಯ ಯುವ ಮಹಿಳೆಯ ಅಭಿಲಾಷೆ
Next post ಗೃಹಸ್ಥ

ಸಣ್ಣ ಕತೆ

  • ಒಂದು ಹಿಡಿ ಪ್ರೀತಿ

    ತೆಂಗಿನ ತೋಟದಲ್ಲಿ ಬಾಗಿಕೊಂಡು ಹಣ್ಣಾಗಿ ಉದುರಿದ ಅಡಕೆಗಳನ್ನು ಒಂದೊಂದಾಗಿ ಹೆಕ್ಕಿ, ಸನಿಹದಲ್ಲಿದ್ದ ಪ್ಲಾಸ್ಟಿಕ್ ಚೀಲಕ್ಕೆ ತುಂಬಿಸುತ್ತಿದ್ದಂತೆ ಪಕ್ಕದಲ್ಲಿ ಸರಕ್ಕನೆ ಹರಿದು ಹೋದ ಕೇರೆ ಹಾವಿನಿಂದಾಗಿ ಒಮ್ಮೆ ವಿಚಲಿತರಾದರು… Read more…

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

  • ಬಲಿ

    ಅವಳು ಭಾಗಶಃ ಚಟ್ಟೆಯಾದ ಕಪ್ಪು ಬಣ್ಣಕ್ಕೆ ತಿರುಗಿದ ಅಲ್ಯೂಮೀನಿಯಂ ತಟ್ಟೆಯೊಳಗೆ ಸ್ವಲ್ಪ ಹಾಲು ಸುರಿದು ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ, ಒಲೆಯ ಮೇಲಿಟ್ಟು ಮುಚ್ಚಳ ಮುಚ್ಚಿದಳು. ಒಲೆಯ… Read more…

  • ಬಾಗಿಲು ತೆರೆದಿತ್ತು

    ಆ ಮನೆಯ ಮುಂದಿನ ಬಾಗಿಲು ಯಾವಾಗಲೂ ಇಕ್ಕಿರುವುದು! ನನ್ನ ಓದುವ ಕೋಣೆಯ ಕಿಡಿಕೆಯೊಳಗಿಂದ ಆ ಮನೆಯ ಬಾಗಿಲು ಕಾಣುವುದು. ನಾನು ಕಿಡಿಕೆಯೊಳಗಿಂದ ಎಷ್ಟೋ ಸಲ ಅತ್ತ ಕಡೆ… Read more…

  • ಎರಡು ರೆಕ್ಕೆಗಳು

    ಪಶ್ಚಿಮದಲ್ಲಿ ಸೂರ್ಯ ಮುಳುಗುತ್ತಿದ್ದ ಆಕಾರದ ತುಂಬ ಒಂಥರಾ ಕೆಂಬಣ್ಣ ತುಂಬಿಕೊಂಡಿತ್ತು. ಆ ಸಂಜೆಯಲ್ಲಿ ತಣ್ಣನೆಯ ಗಾಳಿ ಆ ಭಾವನೆ ಬಂಡೆಯ ಕೋಟೆಯ ಮೇಲೆ ಹಾಯ್ದು ಹೋಯಿತು. ಎತ್ತರದ… Read more…