Home / ಕವನ / ಕವಿತೆ / ರತ್ನ ಬೇವಾರ್‍ಸಿ

ರತ್ನ ಬೇವಾರ್‍ಸಿ

ಐನೋರ್ ವೊಲದಲ್ ಚಾಕ್ರಿ ಮಾಡ್ತ
ಸಂಜಿ ಆಯ್ತಂದ್ರೆ
ಚಿಂತಿ ಮಾಡ್ತೀನ್- ಯೆಂಗಿರತೈತೆ
ನಂಜಿ ಎದ್ಬಂದ್ರೆ. ೧

ನಂಜಿ ನೆಪ್ಪಾಯ್ತ್! ಆದಿ ಗಿಡದಾಗ್
ಊವಾ ಜಲ್ಜಲ್ದಿ
ಕೂದಂಗೆಲ್ಲ ಯೆಚ್ಕೋಂತೈತೆ
ಆಸೆ ಬಲೆ ಬಲ್ದಿ. ೨

ಊವಾ ಕೂದ್ರಾ ಸಂತೋಸಾನಾ
ಅದನ್ ಎಲ್ ಇಡಿಸೋನೆ?
ಚಿಂತಿಸ್ತಾ ನಿಂತ್ಕೋಂತೀನ್: ‘ಅಯ್ಯೊ!
ಯಾರಿಗ್ ಮುಡಿಸೋನೆ?’ ೩

ನಾನ್ ಯೆಂಗ್ ಓಯ್ತೀನ್ ಅದೆ ಗೊತ್ತಿಲ್ದೆ
ನಿಂತಿದ್ದಂಗೇನೆ
ನಡಿತಾನಿದ್ರೆ ಬತ್ತೀನ್ ನಾ ನಂ
ಗುಡಿಸಿಲ್ ತಾಕೇನೆ. ೪

ಗುಡಿಸಿಲ್ ಬೀಗ ತುಕ್ಕ್ ಇಡದೈತೆ
ನಂಜಿ ಅಲ್ಲಿಲ್ಲ!
ಕಣ್ಣೀರ್ ತುಂಬ್ಕೊಂಡ್ ನೋಡ್ತೀನಾಗ
ಮನೆ ಮೇಲ್ ಮಳೆ ಬಿಲ್ಲ! ೫

ಗುಡಿಸಿಲ್ ಬಾಗಿಲ್ ಬೀಗದಂಗೇನೆ
ಮನಸಿನ್ ರಾಗಾನು.
‘ನಂಜಿ ಇಲ್ಲದ್ ಮನೆಗ್ ಯಾಕ್ಬರ್‍ತಿ?’
ಅಂತೈತ್ ಬೇಗಾನು! ೬

ರತ್ನನ್ ನಂಜೀಗ್ ಮುಡಿಸ್ಬೇಕಂತ
ತಂದಿದ್ ಊನೆಲ್ಲ
ನಾವಿದ್ ಗುಡಿಸಿಲ್ ಮುಂದಿಕ್ತೀನಿ-
ಬೇರೆ ತಾವಿಲ್ಲ. ೭

ಇಂಗ್ ಊ ಮುಡಿಸಿ ವೋಯ್ತೀನಂಗೇ
ಬಕ್ಕೊಂಡ್ ಮೊಕ ಮರಸಿ.
ನಾನ್ ಎಂಗ್ ಓದ್ರೆ ತಾನೇ ಏನು?
ರತ್ನ ಬೇವಾರ್‍ಸಿ! ೮
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...