Home / ಕವನ / ಕವಿತೆ / ನಂ ನಂ ಮಾತು

ನಂ ನಂ ಮಾತು

ಪುಟ್ನಂಜಿ! ಬಿರ್‍ಬಿರ್‍ನೆ ಬಾಗಿಲ್ನ ತೆರದಿಕ್ಕು
ಬೇವಾರ್‍ಸಿ ಬಂದೌನೆ ಕಾಯ್ತೌನೆ- ತಡವಾದ್ರೆ
ಗಾಳ್ಯಾಗಿ ಬಂದು ಬಡದೇನು. ೧

ನನ್ ರತ್ನ! ನೀ ಬಂದು ಬಡಿಗಿಡಿಯೋದ್ ಎಲ್ಬಂತು?
ಗಾಳ್ಯಾಗಿ ನೀ ಬಂದ್ರೆ ನನಗೇನು-ನಾನೊಂದು
ಮೀನಾಗಿ ವೊಳೆಯಾಗ ಮುಳುಗೇನು. ೨

ಮೀನಾಗಿ ನೀ ನೀರ್‍ಗೆ ಮೋಚ್‌ಗೀಚ್ಕೊಂಡ್ರೇನಂತೆ
ನಿನ್ಗೆ ನಾ ಸುಂಸುಂಕೆ ಬಿಟ್ಟೇನ- ಬೆಸ್ತ್ರೋವ
ನಾನಾಗಿ ಬಂದು ನಿಂಗ್ ಇಡದೇನು. ೩

ಮೀನನಿಡಿಯಲು ನೀನು ಬೆಸ್ತನಾದ್ರ್ ಏನೀಗ
ಮೋಡ್ವಾಗಿ ನಾನ್ ಆರಿ ವೋಗೇನು-ಆಕಾಸ
ದಲ್ಲೆಲ್ಲ ಮೆಲ್ಮೆಲ್ನೆ ಜಾರೇನು. ೪

ಮೋಡ್ವಾಗಿ ಮೇಗಡೇ ಮೇಲ್ಮೆಲ್ನೆ ನೀ ವೋಗು
ಅನಿಮಳೆ ರೂಪಾವ ತಾಳೇನು-ನಾ ಬಂದು
ನಿನ್ ಜೊತೆಗೆ ಆಯಾಗಿ ಬಾಳೇನು. ೫

ಅನಿಮಳೆ ನೀನಾಗಿ ನನ್ನೇನ್ರ ಮುಟ್ಬಂದ್ರೆ
ಬೂಮೀಲಿ ಅಸರುಲ್ಲು ಆದೇನು-ವುಲ್ಲಾಗಿ
ನಿನ್ ಮರ್‍ತು ವೊರ್‍ವಾಗಿ ಬೆಳದೇನು ೬

ನೀನ್ ಅಸರು ವುಲ್ಲಾಗಿ ಬೆಳೆದು ಬಾ ಬೇಬೇಗ
ಕುರಿಯಾಗಿ ಆರಾರ್‍ತ ಬಂದೇನು-ನಿನ್ ತಬ್ಬಿ
ಮುತ್ತಿಕ್ಕಿ ಮುಕ್ಕಿ ನಾ ಮುಗಿಸೇನು. ೭

ಕುರಿಯಾಗಿ ನೀ ಬಂದು ವುಲ್ಲ ಮುಕ್ಕೋದಾದ್ರೆ
ವೊಲಿಯೋವ ಸೂಜಿ ನಾನ್ ಆದೇನು- ಚಿಪ್ಪಿಗನ
ಬಟ್ಟೇಲಿ ವೊಕ್ಕು ನಾ ನಡದೇನು. ೮

ಸೂಜಾಗಿ ಚಿಪ್ಪಿಗನ ಬಟ್ಟೇಲಿ ನೀನೋದ್ರೆ
ದಾರಾದ ಬದಕ ನಾನ್ ಇಡದೇನು-ನೆಗ ನೆಗ್ತ
ಸೂಜೀಯ ಯಿಂದೇನೆ ಬಂದೇನು. ೯
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...