ಅಸ್ಥಿಪಂಜರಗಳ ಕತೆ

ಚೀನಾದ ಬೀಜಿಂಗ್‌ನಲ್ಲಿ ಒಂದೇ ಕಡೆ ೯೭ ಅಸ್ಥಿಪಂಜರಗಳು ಅದು ಸಣ್ಣ ಮನೆಯಲ್ಲಿ ಸಿಕ್ಕಿವೆ….! ಅಲ್ಲಿಯ ಜನರೇನು ಪುರಾತತ್ವ ಶಾಸ್ತ್ರಜ್ಞರು ದಂಗು ಬಡಿದು ಹೋಗಿರುವರು.

ಈ ೯೭ ಅಸ್ಥಿಪಂಜರಗಳು ತಮ್ಮ ಕತೆ ವ್ಯಥೆಯನ್ನು ಈಗೀಗ ಅಂದರೆ.. ಆಗಸ್ಟ್ ೨೦೧೫ರಲ್ಲಿ ಹೇಳುತ್ತಿವೆ.

ಈ ೯೭ ಅಸ್ಥಿಪಂಜರಗಳು ಸುಮಾರು ಐದು ಸಾವಿರ ವರ್‍ಷಗಳಷ್ಟು ಹಳೆಯದಾದ ಸಣ್ಣ ಮನೆಯೊಂದರಲ್ಲಿದ್ದವುಗಳನ್ನು ಪುರಾತತ್ವ ಶಾಸ್ತ್ರಜ್ಞರು ಎಲ್ಲವನ್ನು ಹೊರಗೆಳೆದಿರುವರು.

ಇವೆಲ್ಲ ಭಾರಿ ಸಾಂಕ್ರಾಮಿಕ ರೋಗಕ್ಕೆ ಬಲಿಯಾದವರನ್ನು ಈಶಾನ್ಯ ಚೀನಾದ ಸಣ್ಣ ಮನೆಯಲ್ಲಿ ಒಟ್ಟಿಗೆ ಮಲಗಿಸಿ ಸುಡುತ್ತಿದ್ದರು. ಅದು ಉಳಿದವರಿಗೆ ಹರಡದಿರಲೆಂದು ಬಾಗಿಲು, ಕಿಟಕಿ, ಗವಾಕ್ಷಿ ಏನೆಲ್ಲ ಮುಚ್ಚಿ ಜಾಗ್ರತೆ ಮಾಡುತ್ತಿದ್ದರೆಂದು ಪುರಾತತ್ವ ಶಾಸ್ತ್ರಜ್ಞರು ವಿವರಿಸಿರುವರು.

ಈ ರೀತಿ ಸಾಂಕ್ರಾಮಿಕ ರೋಗಕ್ಕೆ ಬಲಿಯಾದವರಲ್ಲಿ ಹದಿಹರೆಯದವರು ಯುವಕರು-ಮಧ್ಯ ವಯಸ್ಕರು ಬಾಲಕರು ಎಲ್ಲ ರೀತಿಯ ವಯಸ್ಕರು ಇರುತ್ತಿದ್ದರೆಂದು ಅಸ್ಥಿಪಂಜರ ತಲೆಬುರುಡೆ ಇತ್ಯಾದಿಗಳನ್ನು ತೋರಿಸಿ ಅಲ್ಲಿದ್ದವರಿಗೆಲ್ಲ ವಿವರಿಸುತ್ತಿದ್ದರು.

ಈಶಾನ್ಯ ಚೀನಾದ ಈ ಭಾಗದಲ್ಲಿ ಲಿಪಿ ಇಲ್ಲದಾಗ ಇಲ್ಲಿನ ಜನರೆಲ್ಲ ಗುಂಪುಗುಂಪಾಗಿ ಸಣ್ಣ ಸಣ್ಣ ಮನೆಗಳಲ್ಲಿ ನೆಲೆಸಿದ್ದರೆಂಬುದನ್ನು ಸಂಶೋಧನೆಗಳು ಹೊರಗೆಡವಿಯಲ್ಲದೆ, ಆಹಾರಕ್ಕಾಗಿ ಮುಖ್ಯವಾಗಿ ಬೇಟೆಯಾಡುತ್ತಿದ್ದರೆಂಬುದನ್ನು ತಜ್ಞರು ಸಂಶೋಧಿಸಿರುವರು.

– ಹೀಗೆ ಸಂಶೋಧನೆಗಳು ತೀವ್ರಗೊಳ್ಳುತ್ತಾ ಹೋದಂತೆಲ್ಲ ಏನೆಲ್ಲ ರಹಸ್ಯಗಳು ಹೊಸ ಹೊಸ ಆವಿಷ್ಕಾರಗಳು ಹೊರಗೆ ಬೀಳಬಹುದೆಂದು ಕಾದು ನೋಡೋಣವಲ್ಲವೇ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸುಮ್ಮನೇಕೆನ್ನನೆಲೆ ವಿಧಿಯೆ ಕಾಡಿಸುವೆ?
Next post ಗುಡಿಯಾ

ಸಣ್ಣ ಕತೆ

  • ಗಿಣಿಯ ಸಾಕ್ಷಿ

    ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…

  • ಕರಿ ನಾಗರಗಳು

    ಚಿತ್ರ: ಆಂಬರ್‍ ಕ್ಲೇ ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್‌ ನೀರು ಹರಿಯುತ್ತಿದ್ದ… Read more…

  • ಪ್ರಕೃತಿಬಲ

    ಮಕರ ಸಂಕ್ರಮಣದ ಮಹೋತ್ಸವದ ದಿವಸವದು, ಸೂರ್ಯನಾರಾಯಣನು ಉತ್ತರಾಯಣನಾಗಿ ಸೃಷ್ಟಿಶೋಭೆಯೆಂಬ ಮಹಾಪ್ರದರ್ಶನ ಸಮಾರಂಭವನ್ನು ಜಗತ್ತಿಗೆ ತೋರಿಸುವನಾದನು. ಈ ಅದ್ವಿತೀಯವಾದ ಪ್ರದರ್ಶನವನ್ನು ನೋಡಲಪೇಕ್ಷಿಸುವವರು ಪರಮ ರಮಣೀಯವಾದ ಬೆಂಗಳೂರು ಪಟ್ಟಣಕ್ಕೆ ಬಂದು… Read more…

  • ದಾರಿ ಯಾವುದಯ್ಯಾ?

    ಮೂವತೈದು ವರ್‍ಷಗಳ ನಂತರ ಅಮಲ ನಿನ್ನೂರಿಗೆ ಬರುತ್ತಿದ್ದೇನೆ ಅಂತ ಫೋನ ಮಾಡಿದಾಗ ಮೃಣಾಲಿನಿಗೆ ಆಶ್ಚರ್‍ಯ ಮತ್ತು ಆತಂಕ ಕಾಡಿದವು. ಬರೋಬ್ಬರಿ ಮೂವತ್ತೈದು ವರ್ಷಗಳ ಹಿಂದೆ ವಿಶ್ವವಿದ್ಯಾಲಯದ ಕ್ಯಾಂಪಸ್… Read more…

  • ಮನೆಮನೆಯ ಸಮಾಚಾರ

    ಪ್ರಮೋದನಗರದ ಸಮೀಪದಲ್ಲಿ ಹೂವಿನಹಳ್ಳಿಯೆಂಬದೊಂದು ಗ್ರಾಮವಿರುವದು. ಅಲ್ಲಿ ಪ್ರೌಢರಾಯನೆಂಬ ದೊಡ್ಡ ವೃತ್ತಿವಂತನಾದ ಗೃಹಸ್ಥನಿದ್ದನು. ಪ್ರೌಢರಾಯರಿಗೆ ಇಬ್ಬರು ಗಂಡುಮಕ್ಕಳೂ, ಒಬ್ಬ ಹೆಣ್ಣು ಮಗಳೂ ಇದ್ದರು. ರಾಯರ ಹಿರಿಯ ಮಗನಾದ ರಾಮಚಂದ್ರರಾಯನು… Read more…