Home / ಕವನ / ಕವಿತೆ / ಎರಡು ಕ್ಷಣ ಬದುಕಿ ಬಿಡಲೇ?

ಎರಡು ಕ್ಷಣ ಬದುಕಿ ಬಿಡಲೇ?

ಮಳೆಗಾಲದ ಆ ಸಂಜೆ
ಧೋ! ಎಂದು ಸುರಿದ ಮಳೆ
ಕೊನೆಯ ಕಂತಿನ ಹನಿ
ಟಪ್ ಟಪ್ ಹನಿ ಹನಕು
ಜಿಟಿಜಿಟಿ ಜಡಿ ಮಳೆ
ಎಲೆಗಳಿಂದ ಒಸರುವ
ಒಂದೊಂದೇ ಹನಿ ಹನಿ
ನಾಭಿಯಾಳದಿಂದ
ಹಸಿರು ಚಿಗುರವಾ ನಡುಕ
ಶೀತ ಲಹರಿಯ ಗಾಳಿ
ಮುಂಗುರುಳಿನಿಂದ ಹನಕುವ
ಒಂದೊಂದೇ ಮುತ್ತುಗಳ ಪೋಣಿಸಲೇ
ಬಿಸಿ ಉಸಿರ ದಾರದಲಿ?
ಕೊರೆವ ಚಳಿಗೆ ಬಿಸಿಬಿಸಿ ಕಾಫೀ
ಗುಟಕರಿಸಿ ಬಿಡಲೇ ಇಡಿಯಾಗಿ?
ಉರಿವ ಒಲೆ ಮುಂದೆ ಬಿಸಿ ಕಾಸುತ್ತ
ಕರಗಿ ಹೋಗಲೇ ಮೇಣದಂತೆ
ಆರಿದ ಮೇಣ ಘನವಾಗಿ
ಮೂಲದ ಆಕಾರ ಕಳೆದುಕೊಂಡು
ಇಲ್ಲವಾಗಲೇ ಜಾತ್ರೆಯಲಿ?
ನಡುಕ ತೊಡೆಯಲು
ಉರಿಸಿ ಬಿಡಲೇ ನಿನ್ನ ನೆನಪಿನ ದೀಪ
ಕತ್ತಲಾವರಿಸುವ ಮುನ್ನ
ಎರಡು ಕ್ಷಣ ಬದುಕಿ ಬಿಡಲೇ?
ಲೋಕದ ಹಂಗು ತೊರೆದು
ಆಚೆ ದಡದಲಿ ನಿಂತು
ನೆಲ ಮುಗಿಲು ಸಂಧಿಸುವಲ್ಲಿ
ಆಗಸದಲ್ಲಿ ಹಾರಿಬಿಡಲೇ?
ಎರಡು ಕ್ಷಣ ಬದುಕಿ ಬಿಡಲೇ?
*****

Tagged:

Leave a Reply

Your email address will not be published. Required fields are marked *

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...

ಒಂದೊಂದೆ ನೀರ ಹನಿಗಳು ಮುಳಿಹುಲ್ಲಿನ ಮಾಡಿನಿಂದ ಜಿನುಗಿ ತೊಟ್ಟಿಕ್ಕಿ ಆತ ಹೊದ್ದ ಕಂಬಳಿಯ ನೆನೆಸಿ ಒಳನುಸುಳಿ ಆತನ ಕುಂಡೆಯ ಭಾಗವೆಲ್ಲಾ ಒದ್ದೆಯಾದ ಕಾರಣವೋ ಹೊತ್ತಿಗೆ ಮುಂಚೆ ಎಂದೂ ಏಳದ ಹೊಲಿಯಪ್ಪ ಅಂದು ದಡಬಡಿಸಿ ಎದ್ದ. ಆತ ಮಲಗಿದ ಕಡೆಯಲ್ಲಿ ನೆಲವೆಲ್ಲಾ ಅದಾಗಲೇ ಹಸಿಯಾಗಿತ್ತಲ್ಲ. ಹ...

ಅದು ರಾಷ್ಟೀಯ ಹೆದ್ದಾರಿ ಎನ್.ಎಚ್.೧೭. ಎಡೆಬಿಡದ ವಾಹನಗಳ ಸಂಚಾರ. ಮಧ್ಯೆ ಮಧ್ಯೆ ಅಪಾಯಕಾರಿ ತಿರುವುಗಳು. ಹೊಸಬರಿಗೆ ಅಪರಿಚಿತರಿಗೆ ಮುಂದೆ ತಿರುವು ಇದೆ ಎಂದು ತಿಳಿಯಲಾಗದ, ಅವಘಡವೇನಾದರೂ ಸಂಭವಿಸಿದರೆ ನೇರವಾಗಿ ಪ್ರಪಾತದ ಪಾಲಾಗುವ ಭಯವನ್ನು ಹೊಂದಿದ ಭೀಕರ ತಿರುವುಗಳನ್ನು ಹೊಂದಿದ ವಕ...