ಕೃಪಾ ಸಾಗರ

ಕೇಳಲಾರೆಯೂ ಹರಿ ನನ್ನ ಆಲಾಪ
ನಿನಗಾಗಿ ನಾನು ಪರಿತಪಿಸಿರುವೆ
ನನ್ನ ಬಾಳಿನಾಂಗಳದಲಿ ನಿನ್ನ ರೂಪ
ಕಂಡು ನಾನು ಮೋಹಿಸಬೇಕೆಂದಿರುವೆ

ಕೊಳಲಿನ ಧನಿ ಹರಿಯಲಿ ಎಲ್ಲೆಲ್ಲೂ
ತುಂಬಲಿ ಎನ್ನ ಎದೆಯ ಬಾನಲಿ
ಮನದ ಮೂಲೆಯಲ್ಲೂ ನಿನ್ನ ಪ್ರೀತಿ ಚೆಲ್ಲು
ನಾಶಗೊಳ್ಳಲಿ ವಿಷಯ ಸುಖ ಬೇಲಿ

ಎಷ್ಟು ಆರಾಧಿಸಿಲಿ ನಿನ್ನ ಸ್ನೇಹ
ಪ್ರಸನ್ನ ನಾಗೆಯೂ ನೀನೊಮ್ಮೆ ನನ್ನ
ತುಂಬಿ ತುಳುಕಲು ಬಾಳ ಬಸಿರಲಿ ನೇಹ
ಅಂಧಕಾರ ಕರಗಿ ಆಗಲಿ ಜೊನ್ನ

ನಿನ್ನ ತೇಜೊ ಥಳಕಿನ ವದನಾರವಿಂದ
ಕಂಡು ಪುಲಕಿತ ಗೊಂಡಿದೆ ನನ್ನ ದೇಹ
ಎತ್ತೆತ್ತ ನೋಡಲೆಲ್ಲಿ ನೀನೆ ಗೋವಿಂದ
ಎನ್ನ ಬಾಳಿನ ತುಂಬ ನಿನ್ನದೆ ಮೋಹ

ಭಾಗ್ಯದ ದಿನವೆಂದು ನನಗೆ ಬಂದಿತು
ಅನುಭವಿಸಬೇಕೆಂದಿರುವೆ ಆ ದಿವ್ಯಸಂಗ
ಅದಕ್ಕಾಗಿ ನನ್ನ ಮನ ನಿತ್ಯವೂ ಬೇಡಿತು
ಮಾಣಿಕ್ಯ ವಿಠಲ ಹರಿಸಾಗರದಿಂದ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಉಮರನ ಒಸಗೆ – ೩೩
Next post ಮಲ್ಲಿ – ೧೧

ಸಣ್ಣ ಕತೆ

  • ಜಡ

    ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

  • ಕೊಳಲು ಉಳಿದಿದೆ

    ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…

  • ಕಳಕೊಂಡವನು

    ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…

  • ಬಾಗಿಲು ತೆರೆದಿತ್ತು

    ಆ ಮನೆಯ ಮುಂದಿನ ಬಾಗಿಲು ಯಾವಾಗಲೂ ಇಕ್ಕಿರುವುದು! ನನ್ನ ಓದುವ ಕೋಣೆಯ ಕಿಡಿಕೆಯೊಳಗಿಂದ ಆ ಮನೆಯ ಬಾಗಿಲು ಕಾಣುವುದು. ನಾನು ಕಿಡಿಕೆಯೊಳಗಿಂದ ಎಷ್ಟೋ ಸಲ ಅತ್ತ ಕಡೆ… Read more…