Home / ಕವನ / ಕೋಲಾಟ / ಮದುವೆಗೆ ಶೃಂಗಾರ ಗೈದ

ಮದುವೆಗೆ ಶೃಂಗಾರ ಗೈದ

(ಕೋಲಾಟದ ಪದ)

ತಾನತನ್ನನಾಲೋ ತಂದನ್ನಾನಾ
ತನನ ತಂದನ್ನಾಲೋ ತಂದನ್ನಾನಾ || ಪಲ್ಲವಿ ||

ಯಜಮನ ಗೌಡಾ ರಾಯನಲ್ಲೋ (ಲಂಬೊ ರಾಯ)
ಮಗನಿಗೆ ಮದಿಯ ಮಾಡಬೇಕಂದ || ೧ ||

ಮಗನಿಗೆ ಮದಿಯ ಮಾಡಬೇಕಂದ
ಬಾಜರ ಮನೆಗೆ ಹೋಗವನಲ್ಲೋ
ಬಾಜರ ಮನೆಗೆ ಹೋಗವನಲ್ಲೋ
ಬಾಜರ ಹೆಣ್ಣ ಕೇಳವನಲ್ಲೋ || ೨ ||

ಬಾಜರ ಹೆಣ್ಣ ಕೇಳವಾಗೆ
ಹೆಣ್ಣ ಕೇಳಿ ಭರವಸೆ ಮಾಡಿ
ಹೆಣ್ಣ ಕೇಳಿ ಭರವಸೆ ಮಾಡಿ
ತಿರಗಿ ಮನೆಗೆ ಬರುವಾನಲ್ಲೋ || ೩ ||

ತಿರಗಿ ಮನೆಗೆ ಬಂದೆಕಂಡೇ
ಹೇಳುಲೂರಿಗೆ ಹೇಳಿಕೆ ಮಾಡಿ
ಹೇಳುಲೂರಿಗೆ ಹೇಳಿಕೆ ಮಾಡಿ
ಹೇಳದಿದ್ದ ಊರಿಗೆ ಡಂಗರ ಶರದ || ೪ ||

ದೂರಿನೂರಿಗೆ ಡಂಗರ ಹೋ ಡದಿ
ಕೂಡಿಸೂರಿಗೆ ವಾಲಿ ಬರೆದ
ಕೂಡಿಸೂರಿಗೆ ವಾಲಿ ಬರೆದ
ಬೇಳೆಬೆಲ್ಲ ಶಾಮನ ಕೂಡೇ || ೫ ||

ಬೇಳೆಬೆಲ್ಲ ಶಾಮನ ಕೂಡೇ
ಬಾಕಲ ಮುಂದೆ ತೋರಣಗೈದ
ಬಾಕಲ ಮುಂದೆ ತೋರಣಗೈದ
ಬಾಗಿಲಿಗೆ ಮುತ್ತೆಲ್ಲಾ ಸುರದ || ೬ ||

ಬಾಗಿಲಿಗೆ ಮುತ್ತೆಲ್ಲಾ ಸುರದ
ದೊಣಪೆಗೆ ತೋರಣವ ಗೈದ
ದೊಣಪೆಗೆ ತೋರಣವ ಗೈದ
ಮದಿವಿಗೆ ಶೃಂಗಾರಗೈದ (ಶುಂಗಾರ) || ೭ ||

ಯಜಮಾನಗೌಡ ರಾಜನಲ್ಲೋ
ಬಾವನೆಂಟರ ಸೇರುವಾಗೇ (ಸೇಯ್ಯು)
ಬಂದು ಬಳಗ ಸೆಯ್ಯುವಾಗೆ
ಬಂದು ಬಳಗ ಸೆಯ್ಯುವಾಗೆ || ೮ ||

ಮುತ್ತಿನ ಬಾಸಿಂಗ ಸೂಡೇ
ಯಜಮಾನಗೌಡ ರಾಜನಲ್ಲೋ
ಯಜಮಾನಗೌಡ ರಾಜನಲ್ಲೋ
ಮಗನಿಗೆ ಮದಿವೆಯ ಮಾಡಬೇಕೆಂದೆ
ದಿಬ್ಬಣ ಶೋವನ ಹೋಗುವಾಗೆ || ೯ ||

ದಿಬ್ಬಣ ಶೋವನ ಹೋಗುವಾಗೆ
ವಾದಿ ಪೇಪೆ ಹೊಡವರಲ್ಲೋ
ವಾದಿ ಪೇಪೆ ಹೊಡವರಲ್ಲೋ
ಮದ್ದುಗುಂಡು ಶುಡುವಾರಲ್ಲೋ || ೧೦ ||

ದರಕಿಕ್ರೇದರ ಮುರದಂಗಲ್ಲೋ
ಆಕಾಶಬಾಣ ಬಿಡುವಾಗ
ದರಕಿತ್ರೇದರ ಮುರದಂಗಲ್ಲೋ
ಹಗಲುಬತ್ತಿ ನೋ ಡಿದರೆ || ೧೧ ||

ಹಗಲು ಇರುಳುಲಾದರಲಾಗೇ
ಕೋಣನ ಕೊಂಬ ನೋಡಿದರೆ
ದರಕಿತ್ರೇದರ ಮುರದಂಗಲ್ಲೋ
ಯಜಮಾನಗೌಡ ರಾಜನಲ್ಲೋ || ೧೨ ||

ದಿಬ್ಬಣ ಶೋವನ ಹೋಗುವಾಗೇ
ಪಟ್ಟಣದೊಳಗಿನ ಪಟ್ಟಣಶೆಟ್ಟಿ
ದಂಡು ದಾವುಳಿ ಬರತಿದಂದೇ
ಪಟ್ಣ ಬಿಟ್ಟಾಕಿ ಓಡಿಹೋದ || ೧೩ ||
*****
ಹೇಳಿದವರು: ದೇವು ನಾಗು ಗುನಗ, ಅಡಲೂರು

ಈ ಬರಹವು ಕ್ರಿಯೇಟಿವ್ ಕಾಮನ್ಸ್ ಹಕ್ಕುಪದ್ಧತಿಯ ೪.೦ ಅಂತಾರಾಷ್ಟ್ರೀಯ ಪರವಾನಗಿಯನ್ನು ಹೊಂದಿದ್ದು ವಾಣಿಜ್ಯೇತರ ಉದ್ದೇಶಕ್ಕಾಗಿ ಬಳಸಿಕೊಳ್ಳಲಾಗಿದೆ.

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...