Home / ಕವನ / ಕವಿತೆ / ಒಳಕಲ್ಲ ಪೂಜೀ ಹಾಡು

ಒಳಕಲ್ಲ ಪೂಜೀ ಹಾಡು

ಕಲ್ಲ ಪೂಜಿ ಮಾಡಲಕ ನನ್ನ್ಯಾರು ಕರಸ್ಯಾರ।
ಸಾಲಮ್ಯಾಳಿಗಿ ಮನಿಯವಳ|| ಸುವ್ವಿ ಸುವ್ವಿ ಸುವ್ವಾಲೆ ||೧||

ಸಾಲಮ್ಯಾಳಿಗಿ ಮನಿಯಽಳ ತಂಗೆವ್ವಾ|
ಕಲ್ಲ ಪೂಜಿಽಗಿ ಕರಸ್ಯಾಳ|| ಸು…. ||೨||

ಒಳ್ಳ ಪೂಜಿ ಮಾಡಲಿಕ್ಕ ನನ್ನ್ಯಾರು ಕರಸ್ಯಾರ|
ಸಾಲ ಮ್ಯಾಳಿಽಗಿ ಮನಿಯವಳ|| ಸು… ||೩||

ಸಾಲ ಮ್ಯಾಳಿಽಗಿ ಮನಿಯವಳು ತಂಗೆವ್ವಾ|
ಒಳ್ಳೆ ಪೂಜಿಽಗಿ ಕರಸ್ಯಾಳ || ಸು…. ||೪||

ಬಲ್ಲಬಲ್ಲವರಿಽಗಿ ಪಲ್ಲಕ್ಕಿ ಕಳವ್ಯಾಳ|
ಪಿಲ್ಲ್ಯಾದಗಾಲ ಮಗಳಿಽಗಿ || ಸು… ||೫||

ಪಿಲ್ಲ್ಯಾದಗಾಲ ಮಗಳೆ ಸಂಗಮ್ಮಗ|
ಪಲ್ಲಕ್ಕಿ ಕೊಟ್ಟು ಕರಸ್ಯಾರ || ಸು…. ||೬||

ನೆಂಟನೆಂಟಿರಿಽಗಿ ಮಂಟಪ್ಪ ಖಳವ್ಯಾರ|
ಮಂಟಿಗಿಗಾಲ ಮಗಳಿಗೆ|| ಸು… ||೭||

ಮಂಟಿಗಿಗಾಲ ಮಗಳ ಸಂಗಮ್ಮಗ|
ಒಂಟಿ ಸಿಂಗರಿಸಿ ಖಳವ್ಯಾರ|| ಸು… ||೮||

ಹಂದರ ಮ್ಯಾಲಿನ ಕಣಕಿ ನಂದಿ ಮೆಯ್ದಾನವೆಂದು|
ಬಿಚ್ಚಿ ಬಿಳಿ ಎಲಿ ಹೆರವ್ಯಾರ|| ಸು… ||೯||

ಬಿಚ್ಚಿ ಬಿಳಿ ಎಲಿಯ ಹೆರವ್ಯಾರ ತಮ್ಮಽಗ||
ಅಪ್ಪ ಮಾಡ್ಯಾನ ಮದುವಿಽಯ| ಸು… ||೧೦||

ಹಂದರ ಮ್ಯಾಲಿನ ಕಣಿಕಿ ನಂದಿ ಮೆಯ್ದಾವಂದ|
ಬಿಚ್ಚಿ ಬಿಳಿಯಽಲಿ ಹರವ್ಯಾರ|| ಸು… ||೧೧||

ಬಿಚ್ಚಿ ಬಿಳಿಯಽಲಿ ಹರವ್ಯಾರ ತಮ್ಮಽಗ|
ಅಣ್ಣ ಮಾಡ್ಯಾನ ಮದುವಿಽಯ|| ಸು… ||೧೨||
*****

ಲಗ್ನಕ್ಕೆ ಬೇಕಾಗುವ ಹಿಟ್ಟಕ್ಕಿಯ ಸಾಹಿತ್ಯವನ್ನು ಸಿದ್ಧಮಾಡುವ ಕಾಲದಲ್ಲಿ ಮೊದಲಿಗೆ ಒರಳು, ಬೀಸುವಕಲ್ಲು ಮುಂತಾದವುಗಳ ಪೂಜೆ ಮಾಡಿ ಕೆಲಸವನ್ನು ಪ್ರಾರಂಭಿಸುತ್ತಾರೆ. ಆ ಪ್ರಸಂಗದ ಹಾಡಿದು.

ಛಂದಸ್ಸು:- ತ್ರಿಪದಿಯಾಗಿದೆ.

ಶಬ್ದಪ್ರಯೋಗಗಳು:- ವಳ್ಳ=ಒರಳು. ಮಂಟಗಿ=ಕಾಲಲ್ಲಿ ಧರಿಸುವ ಒಂದು ಆಭರಣ.

Tagged:

Leave a Reply

Your email address will not be published. Required fields are marked *

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...