Home / ಕವನ / ಕವಿತೆ / ಒಳಕಲ್ಲ ಪೂಜೀ ಹಾಡು

ಒಳಕಲ್ಲ ಪೂಜೀ ಹಾಡು

ಕಲ್ಲ ಪೂಜಿ ಮಾಡಲಕ ನನ್ನ್ಯಾರು ಕರಸ್ಯಾರ।
ಸಾಲಮ್ಯಾಳಿಗಿ ಮನಿಯವಳ|| ಸುವ್ವಿ ಸುವ್ವಿ ಸುವ್ವಾಲೆ ||೧||

ಸಾಲಮ್ಯಾಳಿಗಿ ಮನಿಯಽಳ ತಂಗೆವ್ವಾ|
ಕಲ್ಲ ಪೂಜಿಽಗಿ ಕರಸ್ಯಾಳ|| ಸು…. ||೨||

ಒಳ್ಳ ಪೂಜಿ ಮಾಡಲಿಕ್ಕ ನನ್ನ್ಯಾರು ಕರಸ್ಯಾರ|
ಸಾಲ ಮ್ಯಾಳಿಽಗಿ ಮನಿಯವಳ|| ಸು… ||೩||

ಸಾಲ ಮ್ಯಾಳಿಽಗಿ ಮನಿಯವಳು ತಂಗೆವ್ವಾ|
ಒಳ್ಳೆ ಪೂಜಿಽಗಿ ಕರಸ್ಯಾಳ || ಸು…. ||೪||

ಬಲ್ಲಬಲ್ಲವರಿಽಗಿ ಪಲ್ಲಕ್ಕಿ ಕಳವ್ಯಾಳ|
ಪಿಲ್ಲ್ಯಾದಗಾಲ ಮಗಳಿಽಗಿ || ಸು… ||೫||

ಪಿಲ್ಲ್ಯಾದಗಾಲ ಮಗಳೆ ಸಂಗಮ್ಮಗ|
ಪಲ್ಲಕ್ಕಿ ಕೊಟ್ಟು ಕರಸ್ಯಾರ || ಸು…. ||೬||

ನೆಂಟನೆಂಟಿರಿಽಗಿ ಮಂಟಪ್ಪ ಖಳವ್ಯಾರ|
ಮಂಟಿಗಿಗಾಲ ಮಗಳಿಗೆ|| ಸು… ||೭||

ಮಂಟಿಗಿಗಾಲ ಮಗಳ ಸಂಗಮ್ಮಗ|
ಒಂಟಿ ಸಿಂಗರಿಸಿ ಖಳವ್ಯಾರ|| ಸು… ||೮||

ಹಂದರ ಮ್ಯಾಲಿನ ಕಣಕಿ ನಂದಿ ಮೆಯ್ದಾನವೆಂದು|
ಬಿಚ್ಚಿ ಬಿಳಿ ಎಲಿ ಹೆರವ್ಯಾರ|| ಸು… ||೯||

ಬಿಚ್ಚಿ ಬಿಳಿ ಎಲಿಯ ಹೆರವ್ಯಾರ ತಮ್ಮಽಗ||
ಅಪ್ಪ ಮಾಡ್ಯಾನ ಮದುವಿಽಯ| ಸು… ||೧೦||

ಹಂದರ ಮ್ಯಾಲಿನ ಕಣಿಕಿ ನಂದಿ ಮೆಯ್ದಾವಂದ|
ಬಿಚ್ಚಿ ಬಿಳಿಯಽಲಿ ಹರವ್ಯಾರ|| ಸು… ||೧೧||

ಬಿಚ್ಚಿ ಬಿಳಿಯಽಲಿ ಹರವ್ಯಾರ ತಮ್ಮಽಗ|
ಅಣ್ಣ ಮಾಡ್ಯಾನ ಮದುವಿಽಯ|| ಸು… ||೧೨||
*****

ಲಗ್ನಕ್ಕೆ ಬೇಕಾಗುವ ಹಿಟ್ಟಕ್ಕಿಯ ಸಾಹಿತ್ಯವನ್ನು ಸಿದ್ಧಮಾಡುವ ಕಾಲದಲ್ಲಿ ಮೊದಲಿಗೆ ಒರಳು, ಬೀಸುವಕಲ್ಲು ಮುಂತಾದವುಗಳ ಪೂಜೆ ಮಾಡಿ ಕೆಲಸವನ್ನು ಪ್ರಾರಂಭಿಸುತ್ತಾರೆ. ಆ ಪ್ರಸಂಗದ ಹಾಡಿದು.

ಛಂದಸ್ಸು:- ತ್ರಿಪದಿಯಾಗಿದೆ.

ಶಬ್ದಪ್ರಯೋಗಗಳು:- ವಳ್ಳ=ಒರಳು. ಮಂಟಗಿ=ಕಾಲಲ್ಲಿ ಧರಿಸುವ ಒಂದು ಆಭರಣ.

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...