Home / ಕವನ / ಕವಿತೆ / ನೀಲಗಂಗಾನ ಹಾಡು

ನೀಲಗಂಗಾನ ಹಾಡು

ತಾಯಿ ತಂದಿಽ ಸತ್ತು ಇಂದಿಽಗ್ಹನ್ನೆರಡೊ ವರುಷ ||
ಇಂದಽ ನಮ ನೀಲ-ಗಂಗನ ಭಾವ ಬಂದಾನಽ | ಸೂಯಿ||
ಇಂದಽ ನಿಮ ನೀಲ-ಗಂಗನ ಖಳುವಬೇಕವ್ವಾ| ಸೂಯಿ||
* * *

ಅಚ್ಚೀ ಬಿಂಡಿಽ ಬಿಽಡು ಇಚ್ಚಿ ಬಿಂಡಿಽ ಬಿಽಡು||
ನಡುವಿಽನ ಬಿಂಡ್ಯಾನ ಸೀರಿ ಉಟಿಗ್ವಾ ನಿಲಗಂಗಾ| ಸೂಯಿ||

ಅಚ್ಚೀ ಭರಣೀ ಬಿಽಡು ಇಚ್ಚೀ ಭರಣೀ ಬಿಽಡು||
ನಡುವಿನ ಭರಣ್ಯಾನ ವಸ್ತಾ ಇಟಿಗ್ವಾ ನಿಲಗಂಗಾ| ಸೂಯಿ||
ಎಡಕೊಮ್ಮ ಹೊಳ್ಳವ್ವಾ ಬಲಕೊಮ್ಮ ಹೊಳ್ಳೆವ್ವಾ ||
ನಿಂತ ಗೆಳದ್ಯಾರಿಗಿ ಹೇಳವ್ವಾ ತಂಗಿಽ| ಸೂಯಿ||
ಬಿಸಲಽ ಬಡಿದರ ಶೆಲ್ಲ್ಯಾ ಮುಸುಕ ಹಾಕಣ್ಣಾ| ಸೂಯಿ||
ನೀರಡಿಕ್ಯಾದರ ಗಿಂಡಿಲಿ ನೀರ ಕುಡಿಸಣ್ಣ| ಸೂಯಿ||
* * *

ತೆವರಿಗ್ಹೊಡಿಯುವ ಕುದುರಿ ತೆಗ್ಗೀಗಿ ಹೊಡೆದಾನ||
ಮೈಯ ಕೈಯಗಳು ಮುಟ್ಟಿಲ್ಹೋಗ್ಯಾನ| ಸೂಯಿ||
ಸಿಟ್ಟೀಲಿ ನೀಲಗಂಗಾ ಮಡವ ಧುಮಕ್ಯಾಳ| ಸೂಯಿ||
* * *

ಆ ಊರ ಹಾದೀಲಿ (ಬತ್ತಲ) ಕುದರಿಽ ಬರತದ||
ಆಣ್ಣಾ ಸಹದೇವಣ್ಣಾ ಒಬನೇ ಬರತಾನ| ಸೂಯಿ||
ಮಡದೀ ನೀಲಗಂಗಾನ ಖಳುವಲಿಲ್ಲೇನ| ಸೂಯಿ||
ಆ ಊರ ಹಾದೀಲಿ ಏಳ್ಮಂದಿ ಕಳ್ಳಽರು||
ಮೈಯಽ ಕೈಯಗಳು ಮುಟ್ಟಲ್ಹೋಸಗ್ಯಾರೋ| ಸೂಯಿ||
ಸಿಟ್ಟೀಲಿ ನೀಲಗಂಗಾ ಮಡವ ಧುಮಕ್ಯಾಳೋ| ಸೂಯಿ||
ಮೊನ್ನಿಽನ ರಾತುರಲಿ ಸಪನಽವು ಬಿಽದ್ದಿತೊ||
ಮುತ್ತಿನ ತೂರಾಯಿಗಿ ಬೆಂಕಿ ಹೆತ್ತಿತ್ತೊ| ಸೂಯಿ||
ಇಽವು ಸುದ್ದಿಗಳವರಕ್ಕಽಗ ಒಯ್ಯೋ| ಸೂಯಿ||
* * *

ತಂಗಿಽ ನೀಲಗಂಗಾ ಏನ ಹೇಳ್ಯಾಳೊ| ಸೂಯಿ||
ಆ ಊರ ಹಾದೀಲಿ ಏಳ್ಮಂದಿ ಕಳ್ಳಽರ||
ಮೈಯ ಕೈಯಗಳು ಮುಟ್ಟಲ್ಹೋಗ್ಯಾರೊ || ಸೂಯಿ||
ಸಿಟ್ಟೀಲಿ ನೀಲಗಂಗಾ ಮಡವ ಧುಮಕ್ಯಾಳೊ| ಸೂಯಿ||

ತಾಯ್ತಂದಿ ಸಾಯಾಽಗ ಐಯ್ದಿನದ ಕೂಸಿದ್ದ್ಯ|
ಖಾರಿಕ ತೆಯ್ದ್ಹಾಕಿ ಸಲಹಿದನಲ ತಂಗಿಽ| ಸೂಯಿ||
ತಾಯ್ತಂದಿ ಸಾಯಾಗ ಏಳ್ದಿನದ ಕೂಸಿದ್ದಿ||
ಅಂಜರದ್ಹಣ್ಹಾಕಿ ಸಲವಿದನಲ ತಂಗಿ| ಸೂಯಿ||
*****

Tagged:

Leave a Reply

Your email address will not be published. Required fields are marked *

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...