Home / ಕವನ / ಕವಿತೆ / ನಿರಾಳ

ನಿರಾಳ

ಉತ್ತಿದ ಮಣ್ಣು
ಮೈ ತುಂಬಾ ಕೆಂಗಣ್ಣಾಗಿ
ಎದೆ ತುಂಬ ಬಿಸಿ ಉಸಿರು
ಹೆಜ್ಜೆ ಇಟ್ಟಲ್ಲೆಲ್ಲ ಧೂಳು
ಮತ್ತೆ ಮತ್ತೆ ಮುಖಕೆ ರಾಚಿ
ಮಳೆಗಾಗಿ ಹಪಹಪಿಸಿ ಅಳುವ ದೈನ್ಯತೆ.

ಕಾಲಿಟ್ಟಲ್ಲೆಲ್ಲ ಒಣಗರಿಕೆ
ಬೆಟ್ಟದೊಳಗಿನ ಬೋಳು ಗಿಡಮರ
ನದಿಯ ತಳದ ಬಿರುಕು
ಬಸವಳಿದು ಬೋರಲಾದ ಮನ,
ನಕ್ಷತ್ರಗಳು ಫಳಫಳ ಹೊಳೆದದ್ದು
ನಾಡು ಧಗಧಗಿಸಿ ನೀರ್‍ಗುದುರೆಯಾದದ್ದು
ಹಿಡಿತಕ್ಕೆ ಸಿಗದ ನೋವು ನರಳಾಟ
ಕಣ್ಣೀರಿಲ್ಲದ ಅಳು.

ಗಂಟಲುಬ್ಬಿನ ಎದೆಯಾಳದ ಆರ್‍ತಧ್ವನಿ
ಏರಿ ಏರಿ ಮೇಲೇರಿ ಹಬ್ಬಿಹರವಿನೊಳಗೆ
ಗೂಡುಕಟ್ಟುತ ಮೋಡಕಾರ್‍ಮೋಡ
ಬಿಸಿಲು ನೂಕಿ ನೆರಳು ನುಗ್ಗಿ
ತುಂತುರ ಹನಿಗಳ ಚಿತ್ತ
ಕ್ಷಣಾರ್ಧದಲ್ಲಿ ನೂರಿಪ್ಪತ್ತು ವೇಷಗಳ
ಗುಡುಗು ಸಿಡಿಲು ಮಳೆಯ
ನಿಸರ್‍ಗತಂಡದ ನಾಟಕರಂಗ
ಜಾಣಹುಡುಗರ ಕಿಲಾಡಿ ಪಾತ್ರಗಳ
ಓಡಾಟ ಮೆರೆದಾಟ
ಬಿಸಿಯುಸಿರಿಗೆ ಸಂತಸದ ಕಣ್ಣೀರು
ಎಲ್ಲೆಲ್ಲೂ ನಿರಾಳ.
*****

Tagged:

Leave a Reply

Your email address will not be published. Required fields are marked *

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...

ಮಧ್ಯಾಹ್ನದ ಆರು ತಾಸಿನ ಸಮಯ. ಬಿಸಿಲು ರಣಗುಟ್ಟುತ್ತಿತ್ತು. ಕಲ್ಲವನು ಉರುವಲ ಹೊರೆಯೊಂದನ್ನು ಹೊತ್ತು ತಂದು, ಗುಡಿಸಲಿನ ಮುಂದೆ ಒಗೆದು ಬೇವಿನ ಗಿಡದ ನೆರಳಿನಲ್ಲಿ ಕುಳಿತು ಉಸ್ಸೆಂದು ಉಸುರುಗರೆದಳು. ಗುಡಿಸಲಿನೊಳಗಿಂದ ನಾಲ್ಕಾರು ಚಿಕ್ಕ ಮಕ್ಕಳು ಹೊರಗೆ ಹಾತೊರೆದು ಬಂದು, “ಅವ್...

ಬೀರ ಹಾಸಿಗೆಯಲ್ಲಿ ಹೊರಳುತ್ತಿದ್ದಾನೆ, ಕಣ್ಣಿಗೆ ನಿದ್ರೆಯಿಲ್ಲ; ಮನಸ್ಸಿಗೆ ಶಾ೦ತಿಯಿಲ್ಲ. ಸಾಯಂಕಾಲ ಊರ ಚಾವಡಿಯಲ್ಲಿ “ಹೆಚ್ಚು ಆಹಾರ ಧಾನ್ಯ ಬೆಳೆಯಿರಿ!” ಎಂಬ ವಿಷಯದ ಮೇಲೆ ಅಧಿಕಾರಿಗಳ ವ್ಯಾಖ್ಯಾನ ಕೇಳಿದ್ದನಾತ. ಆಗಿನಿಂದಲೂ ಅವನಿಗೆ ತಾನೊಂದು ಬಾವಿಯನ್ನೇಕೆ ತೋಡಬಾರದು ಎನ್ನ...