Home / ಕವನ / ಕವಿತೆ / ಬಯೋಡಾಟಾ ಬದಲಿಸಬೇಕಂತೆ

ಬಯೋಡಾಟಾ ಬದಲಿಸಬೇಕಂತೆ

ಹೂವು ತೋರಣಗಳ ಛತ್ರಚಾಮರಗಳಿಂದಲಕೃತ ವೇದಿಕೆ
ಕಣ್ಮನ ಸೆಳೆವ ರೆಶ್ಮೆ ಪಂಚೆಯುಡುಗೆ ತೊಡುಗೆ
ವಜ್ರವೈಡೂರ್‍ಯಗಳ ಕಿರೀಟಧರಿಸಿದ ಶ್ರೀರಾಮಚಂದ್ರ
ಸುಶೋಭಿತ ಚಂದ್ರವದನೆ ಸೀತೆಯ ಪಟ್ಟಾಭಿಷೇಕ
ಮನಮೋಹಕ ಚಿತ್ತಾಕರ್‍ಷಕ
ಕ್ಯಾಲಂಡರದೊಳಗಿನ ದೃಶ್ಯಕಾವ್ಯ.

ದೇವದೇವೋತ್ತಮ ಪುರುಷೋತ್ತಮ ರಾಮನೆಂದರೆ
ರಾಜಾರಾಮ ರಘುಕುಲತಿಲಕನೆಂದರೆ
ಪಿಳಿಪಿಳಿ ಕಣ್ಣು ಹೊಸಪೀಳಿಗೆಯವುಗಳಿಗೆ
ರಾಮನವತಾರದ ಬಟ್ಟೆತೊಟ್ಟು
ಕುಸಂಬರಿ ಪಾನಕ ಸವಿದು
ದಿನದ ರಜೆ ಕಳೆದುಬಿಟ್ಟರೆ
ಹಿರಿಯರ ರಾಮನಾಮಸ್ಮರಣೆ ಏನೆಂದು
ಯಾಕೆಂದು ಗೊತ್ತಾಗದೆ ಗಲಿಬಿಲಿ.

ಭಕ್ತಿಭಾವ ನಂಬಿಕೆ ವಿಶ್ವಾಸಗಳ ಬಗೆಗೆ ಹೇಳಿದ್ದಾದರೆ
ಅದೆಂತಹ ನಾಮಬಲ, ಹೇಗಿದ್ದನಾತ
ಅವನ ಓದು ಕೆಲಸ ಹೆಂಡತಿ ಮಕ್ಕಳು ಏನೆಂದು
ನಿನ್ನ ಬಯೋಡಾಟಾ ಕೇಳುತ್ತಾರೆ ರಾಮಾ-

ಮೊದಲ ಸುತ್ತಿನ ನಿನ್ನ ಪರಿಚಯ ಕೇಳಿದ್ದೇ ಸಾಕು
ಈಗ ನೂರಾರು ಪ್ರಶ್ನೆಗಳ ಮೂಟೆಹೊತ್ತು ಬಂದಿದ್ದಾರೆ.
ದೇವನಾಗಿದ್ದರೆ…
ಗೊತ್ತಾಗಬೇಕಿತ್ತು ಮಾಯಾಜಿಂಕೆಯ ಬೆನ್ನುಹತ್ತಿ
ದಂಡಕಾರಣ್ಯದಲಿ ಸೀತೆಯನ್ನು ಬಿಟ್ಟು ಹೋದನೇಕೆ?-
ಹದಿನಾಲ್ಕು ವರ್ಷ ಮಕ್ಕಳಾಗದಂತೆ
ಅದಾವ ನಾರುಬೇರು ಕೊಟ್ಟು ಸೀತೆಗೆ ಸಮಾಧಾನಿಸಿದನಂತೆ?
ರಾವಣ, ಸೀತಾಪರಹಣ, ಮರುಪಟ್ಟಾಭಿಷೇಕ
ಅಬ್ಬಬ್ಬಾ! ಹೌದು, ಆದರೆ….
ದೇವನಾಗಿದ್ದರೆ, ರಾಜನಾಗಿದ್ದರೆ, ಹೋಗಲಿ ಪುರುಷೋತ್ತಮನಾಗಿದ್ದರೆ…
ಹಾದಿಹೋಕರ ಮಾತಿಗೆ ಬೆಲೆಕೊಟ್ಟು
ಹೆಂಡತಿಗೆ ಅಪಮಾನಸಿ ಅಗ್ನಿಪರೀಕ್ಷೆ ಮಾಡಿಸಿದನೇಕೆ?-
ತುಂಬು ಬಸುರಿಯನು ನದಿದಾಟಿಸಿ ಕಾಡಿಗೆ ಬಿಟ್ಟಿದ್ದೇಕೆ?

ಮಕ್ಕಳಾದರೂ ಮರಳಿನೋಡದ ಜನಪಾಲಕ
ಪ್ರಜೆಗಳ ಪರಾಕದಮಲಿಗೆ ಹೆಂಡತಿ ಮಕ್ಕಳಿಗೆ
ಅಪಾತ್ರನಾದ ರಾಮರಾಮ ಅದ್ಹೇಗೆ ದೇವಮಾನವನಂತೆ?-
ಅವನೊಬ್ಬ ಪುರುಷರಲಿ ಪುರುಷನಷ್ಟೇ
ಅವನ ಬಯೋಡಾಟಾ ಬದಲಿಸಬೇಕು.

ನಿರ್ಭಿಡೆಯ ಮಕ್ಕಳು ಕಥೆ ಹಿಂಜುತ್ತಿವೆ
ನೀನೇ ಉತ್ತರಹೇಳು ರಾಮಾ.
ವಿಜ್ಞಾನ ದೇವಕಣ ಸೃಷ್ಠಿಯ ಆದಿ ಅನಂತದ
ನಿಗೂಢದೊಳಹೊಕ್ಕು ಝಾಲಾಡಿಸಿ ಸತ್ಯ ಬಹಿರಂಗಿಸುವ
ಈ ಹೊಸ ದೇವರುಗಳಿಗೆ ಬೆರಗಾಗುವುದಬಿಟ್ಟು
ಬೇರೇನೂ ಉಳಿಯಲಿಲ್ಲ ರಾಮಾ
ರಾಮ ರಾಮಾ.
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...