Home / ಕಥೆ / ಸಣ್ಣ ಕಥೆ / ಪಂಜುಗಳ ಯುದ್ಧ

ಪಂಜುಗಳ ಯುದ್ಧ

ಚಿಕ್ಕದೇವರಾಜ ಒಡೆಯರು ರಾಜರಾದಮೇಲೆ ಮರಾಟೆಯವರು ದಂಡೆತ್ತಿ ಬರುವುದಕ್ಕೆ ಮೊದಲಾಯಿತು. ಪಟ್ಟಕ್ಕೆ ಬಂದ ಮೇಲೆ ರಾಜರು ತಮ್ಮ ದಳವಾಯಿ ಕುಮಾರಯ್ಯನನ್ನೂ ಆತನ ಮಗ ದೊಡ್ಡಯ್ಯನನ್ನೂ ತಿರುಚನಾಪಳ್ಳಿಯನ್ನು ಗೆಲ್ಲಲು ಕೊಟ್ಟು ಕಳುಹಿಸಿದರು. ಆಗ ಅಕಸ್ಮಾತ್ತಾಗಿ ಮರಾಟೆಯವರ ಒಂದು ದಂಡು ನುಗ್ಗಿ ಬಂದು ಶ್ರೀರಂಗಪಟ್ಟಣದ ಸಮೀಪದಲ್ಲಿ ಕಲಸಗೆರೆ ಕೊತ್ತತ್ತಿ ಎಂಬ ಗ್ರಾಮದ ಬಳಿ ಮೈದಾನದಲ್ಲಿ ಇಳಿದುಕೊಂಡರು.

ಒಡೆಯರು ಆಗಲೇ ದೊಡ್ಡಯ್ಯನನ್ನು ಕೆಲವು ಸೇನೆಯೊಡನೆ ಶ್ರೀರಂಗಪಟ್ಟಣಕ್ಕೆ ಕಳುಹಿಸುವಂತೆ ದಳವಾಯಿ ಕುಮಾರಯ್ಯನಿಗೆ ಹೇಳಿ ಕಳುಹಿಸಿದ್ದರು. ದೊಡ್ಡಯ್ಯನು ಕಾವೇರೀ ಪುರದ ಕಣಿವೆಯ ಮಾರ್ಗವಾಗಿ ಬರುತ್ತಿದ್ದನು. ಅಷ್ಟರಲ್ಲಿ ಮೊರಾಟೆಯವರ ದಂಡು ಬಂದು ಪ್ರತ್ಯಕ್ಷವಾಗಲು ರಾಜರು ದೊಡ್ಡಯ್ಯನಿಗೆ “ಈ ಕಲಸಗೆರೆ ಕೊತ್ತತ್ತಿ ಗ್ರಾಮದ ಬಳಿ ಇಳಿದಿರುವ ಮರಾಟೆಯವರ ಸೈನ್ಯದ ಸಮೀಪಕ್ಕೆ ಯಾರೂ ಅರಿಯದಂತೆ ಸಂಚರಿಸತಕ್ಕದ್ದು; ಅಲ್ಲಿ ಸೇರಿದ ಕೂಡಲೆ ನಮ್ಮ ದಂಡಿನಲ್ಲಿರುವ ೨-೩ ಸಾವಿರ ದನದ ಕೊಂಬುಗಳಿಗೆ ಅಪಾಯವಿಲ್ಲದ ಹಾಗೆ ಪಂಜುಗಳನ್ನು ಕಟ್ಟಿ ಮೂರು ಕಡೆಯಿಂದಲೂ ಸೈನ್ಯವು ತಮ್ಮನ್ನು ಸುತ್ತಿಕೊಂಡಿತೆಂಬ ಭ್ರಾಂತಿಯು ಮರಾಟೆಯವರ ಮನಸ್ಸಿನಲ್ಲಿ ಹುಟ್ಟುವಂತೆ ಅವುಗಳನ್ನು ರಾತ್ರಿಯಲ್ಲಿ ಚದರಿಸತಕ್ಕದ್ದು; ಅವರು ಭ್ರಾಂತರಾದ ವೇಳೆಯಲ್ಲಿ ನೀವು ಅವರನ್ನು ತಾಗತಕ್ಕದ್ದು. ಸಮಯಕ್ಕೆ ಸಹಾಯಮಾಡುವಂತೆ ಶ್ರೀರಂಗಪಟ್ಟಣದಿಂದ ಬೇರೊಂದು ಸೈನ್ಯವನ್ನು ಕಳುಹಿಸುತ್ತಿದ್ದೇವೆ” ಎಂದು ಆಜ್ಞೆ ಮಾಡಿದರು. ದೊಡ್ಡಯ್ಯ ಮುಂತಾದ ಸೇನಾನಾಯಕರು ಅದರಂತೆಯೇ ದನಗಳಿಗೆ ಪಂಜುಗಳನ್ನು ಕಟ್ಟಿಸಿ ಮೂರು ದಿಕ್ಕಿಗೂ ಓಡಿಸಿ, ಉಳಿದ ದಿಕ್ಕಿನಿಂದ ಸಂಚರಿಸುತ್ತ ಮರಾಟೆಯವರ ಮೇಲೆ ಬಿದ್ದರು. ಮರಾಟೆಯವರಿಗೆ ದಿಕ್ಕು ತೋಚದಂತಾಗಿ ತಾರುಮಾರಾಗಿ ಪಲಾಯನಮಾಡಿದರು. ಬೆಳಕು ಹರಿದಾಗ ಅವರ ಉಗ್ರಾಣವೆಲ್ಲವೂ ದೊಡ್ಡಯ್ಯನ ಕೈಗೆ ಬಂತು. ಮರಾಟೆಯವರ ನಾಯಕರ ತಲೆಗಳನ್ನು ಕತ್ತರಿಸಿ ಸೈನಿಕರು ದೊಡ್ಡಯ್ಯನಿಗೆ ಸಮರ್ಪಿಸಿದರು. ದೊಡ್ಡಯ್ಯನು ಆ ತಲೆಗಳನ್ನು ತೆಗೆಸಿಕೊಂಡು ದೊರೆಗಳ ಸನ್ನಿಧಿಗೆ ಬಂದು ಅಡ್ಡ ಬಿದ್ದು ಎಲ್ಲ ಸಂಗತಿಯನ್ನೂ ಬಿನ್ನಯಿಸಿದನು. ಒಡೆಯರು ಆ ತಲೆಗಳಲ್ಲಿ ಶ್ರೀರಂಗಪಟ್ಟಣದ ಕೋಟೆ ಬಾಗಲಿಗೊಂದನ್ನೂ ಮೈಸೂರು ಕೋಟೆ ಬಾಗಲಿಗೊಂದನ್ನೂ ಕಟ್ಟಿಸಿದರು. ದೊಡ್ಡಯ್ಯ ಮುಂತಾದ ಸೇನಾ ನಾಯಕರಿಗೆ ಬಹಳ ಸನ್ಮಾನವು ದೊರೆಯಿತು.
*****
[ವಂಶರತ್ನಾಕರ, ಪುಟ ೧೦೮, ವಂಶಾವಳಿ ೧೧೪-೫, ವಿಲ್ಕ್ಸ್, ಪುಟ ೬೧]

Tagged:

Leave a Reply

Your email address will not be published. Required fields are marked *

ಬಣಸಾಲೆ ಮುಂದಿನಿಂದ ಹೆಜ್ಜೆ ಹಾಕುವಾಗ ಹೊತ್ತು ಕಂತಿದ್ದು ಲಕ್ಷ್ಯಕ್ಕೆ ಬಂದಿರಲಿಲ್ಲ. ಆಚೀಚಿನ ಹನೆಮರದೆತ್ತರದ ತೇಗ-ಮಾವುಗಳ ಟಿಸಿಲುಗಳಲ್ಲಿ ಹಕ್ಕಿಗಳ ಗರಿ ಒದರುವ ಸರಪರ. ತಾರಕ ಸ್ವರದ ಮಕ್ಕಳಾಟ ವೀಕ್ಷಿಸುತ್ತಾ ರಸ್ತೇಲಿ ಬಿದ್ದಿದ್ದ ಸಣ್ಣ ಸಣ್ಣ ಕಲ್ಲುಗಳನ್ನು ಕಾಲಿನಿಂದ ಚಿಮ್ಮುತ್ತಾ...

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...