Home / ಕವನ / ಕವಿತೆ / ಮನಸೇಽ

ಮನಸೇಽ

ಗೊಂದಲಗೂಡು ನರಕಸದೃಶ
ವಿಷಾನಿಲದಿಂದಾವೃತ್ತ ಭೂಮಂಡಲ ಮಧ್ಯದೊಳು
ಶಾಂತಿಬಯಸಿ ಮುಕ್ತಿಹುಡುಕುತ ಸುಳಿದಾಡಿ ಸುತ್ತಿ
ಬಸವಳಿಯುವ ಮನಸೇ
ಸುಮ್ಮನೊಮ್ಮೆ ಕೂಡು ಸಮುದ್ರದಂಡೆಯ ಮೇಲೆ

ಕಣ್ಣಾಡಿಸು ಸುತ್ತಮುತ್ತೆಲ್ಲ
ಮರಳು ಚಿಪ್ಪು ವಿಶಾಲ ಸಮುದ್ರದಲೆಗಳು
ನೋಡು ದೂರದಿಗಂತದೆಡೆಗೆ
ಸೂರ್‍ಯ ನಕ್ಕು ಮುಕ್ಕಳಿಸಿದ ಬಂಗಾರ ನೀರಿನಲೆಗಳ
ನಡುವೆ ತೇಲುವ ಹಾಯಿ ದೋಣಿಗಳ;

ಕಾಣದಿರಲಿ ಮರಳ ಮೇಲಿನ ಕಸಕಡ್ಡಿ
ಬೆನ್ನಹಿಂದಿನ ಎತ್ತರೆತ್ತದ ಜಂಬದ
ಮನೆಗಳ ಪಗಡೆಯಾಟದ ನೋಟ.

ಸುತ್ತಾಡಿ ನಗರ ಪ್ರದಕ್ಷಿಣೆ ಮಾಡು ಮನಸೇ
ಸಂಪಿಗೆ ಗುಲಾಬಿ ಪಾರಿಜಾತ ಹೂಗಿಡಮರ
ಬಳ್ಳಿಗಳ ಪರಿಮಳ ಆಸ್ವಾದಿಸು
ಸ್ವಲ್ಪ ಉಸಿರು ಬಿಗಿಹಿಡಿ ಚರಂಡಿ ತಿಪ್ಪೆಗಳೂ ಇವೆ
ಕಣ್ಣಿಗೆ ಒಳಪರದೆ ಬೀಳಲಿ ಜನ ಕಾಣದಿರಲಿ.

ನಿರಮ್ಮಳವಾಗಿ ಹಣೆಗಂಟು ಇಳಿಸು ಮನಸೇ
ಜೋಲು ಮುಖ ಎತ್ತಿ ನಗೆಹೊತ್ತು
ಸುತ್ತೆಲ್ಲ ನೋಡು ಇದು ನಿನ್ನದೇ ನಾಡು ನುಡಿ
ನಿನ್ನವರೇ ಸಂಬಂಧಿಗಳ ಕಲರವ
ಮುದ್ದಿಡುತಿದೆ ನಾಯಿ ನಿನ್ನ ಕಾಲಿಗೆ
ನಗು ರಿಂಗಣಿಸಲಿ; ಕಿವಿಗೆ ಬಿಡು ಎಣ್ಣೆ.

ಸುಮ್ಮನೆ ಕೂಡು ದೀಪದ ಬೆಳಕಿನ ದೇವನೆದುರಲಿ
ನೋಡು ಅವನ ಕಣ್ಣಲಿ ಮಿಂಚುನಗು
ತುಟಿಯಲ್ಲಿಯ ತುಂಟನಗು ಮುಡಿಗೇರಿಸಿದ ಹೂವು
ಮುಗ್ಧ ಮೊಲ, ಪುಣ್ಯಕೋಟಿ ಗೋವು;
ಕಾಣಿಸಿದರೆ ಕಾಣಿಸಲಿ ಅವನ ಸುತ್ತ ತುಂಬಿರುವ
ಹುಲಿ ಹಾವು ಕೀಟಗಳ ಹರಿದಾಟ
ನಡುವೆ ಪ್ರಶಾಂತ ಚಿತ್ಕಳೆಯ ಸಾಕಾರ.
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...