Home / ಲೇಖನ / ವಿಜ್ಞಾನ / ಲೈಂಗಿಕ ಆಸಕ್ತಿ ಕೆರಳಿಸುವ “ವಯಾಗ್ರ” ಮಾತ್ರೆ

ಲೈಂಗಿಕ ಆಸಕ್ತಿ ಕೆರಳಿಸುವ “ವಯಾಗ್ರ” ಮಾತ್ರೆ

ಕೆಲವು ಸಲ ಪ್ರಾಪ್ತ ನಡುವಯಸ್ಸಿನ ಪುರುಷರಿಗೆ ಲೈಂಗಾಸಕ್ತಿಕುಂದಿರುತ್ತದೆ. ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳಲು ನಿರುತ್ಸಾಹ, ಜನನೇಂದ್ರಿಯ ಸಪ್ಪೆತನ, ಇವುಗಳಾಗವುದು ಸಹಜ. ಇದಕ್ಕೆ ಕಾರಣ ವಿಪರೀತ ಚಿಂತೆ, ಯೋಚನೆಗಳು, ಪೌಷ್ಠಿಕ ಆಹಾರದ ಕೊರತೆ, ಅಪರಾಧಿ ಪ್ರಜ್ಞೆ ಇವುಗಳಿಂದಾಗಿ ಪುರುಷರನ್ನು ನಿಶಕ್ತಿಗೊಳಗಾಗುತ್ತದೆ. ಈ ಬಗೆಗೆ ಚಿಂತಿಸುವಂತಾಗುತ್ತದೆ. ಇಂಥವರು ಉದ್ರೇಕಗೊಂಡು, ಲೈಂಗಿಕ ಕ್ರಿಯೆಯಲ್ಲಿ ಯಶಸ್ವಿಯಾಗಲು ಇತ್ತೀಚೆಗೆ “ವಯಾಗ್ರ” ಎಂಬ ಮಾತ್ರೆಯನ್ನು ಕಂಡುಹಿಡಿಯಲಾಗಿದೆ. ಮಾತ್ರವಲ್ಲ ಈ ಮಾತ್ರೆಯನ್ನು ಕಂಡು ಹಿಡಿದವರಿಗೆ ೧೯೯೮ರಲ್ಲಿ ನೊಬೆಲ್ ಪುರಸ್ಕಾರವನ್ನು ಸಹ ನೀಡಲಾಗಿದೆ. ಪುರುಷರ ಲೈಂಗಿಕ ದುರ್ಬಲತೆಯನ್ನು ನಿವಾರಿಸಲು, ಜನನೇಂದ್ರಿಯವನ್ನು ಉದ್ರೇಕಗೊಳಿಸಲು ಈ ಮಾತ್ರೆಯನ್ನು ಕಂಡು ಹಿಡಿಯಲಾಗಿದ್ದು ಆಂಗ್ಲ ಭಾಷೆಯ VIGORI (ಶಕ್ತಿ) ಮತ್ತು NIAGAR (ವಿಖ್ಯಾತ ನಯಾಗಾರ ಜಲಪಾತ) ಗಳ ಸಂಯುಕ್ತರೂಪವಾಗಿದೆ. VIAGAR ಪೈಜರ್ ಸಂಸ್ಥೆಯ ವಿಜ್ಞಾನಿಗಳ ಕೊಡುಗೆಯಾಗಿದೆ. ಇವರು ಈ ಮೊದಲು ‘ಸಿಲ್ಡೆನಾಶಿಲ್’ ಎಂಬ ಮದ್ದನ್ನು ಮೂಲತಃ ಅತಿರಕ್ತದೊತ್ತಡವನ್ನು ತಗ್ಗಿಸಲು ಹಾಗೂ ಹೃದಯಶೂಲೆಯನ್ನು ನಿಗ್ರಹಿಸಲು ತಯಾರಿಸಿದ್ದರು. ಈ ಮದ್ದು ಲೈಂಗಿಕ ಸಾಮರ್‍ಥ್ಯವನ್ನು ಹೆಚ್ಚಿಸಲೂ ಸಹ ಅನುಕೂಲವೆಂಬ ಸತ್ಯವನ್ನು ಕಂಡು ಒಂದು ವಿಚಿತ್ರ ಸನ್ನಿವೇಶದಲ್ಲಿ ಪ್ರಯೋಗಾರ್‍ಥ. ಸಿಲ್ಟೆಸಾಫಿಲ್, ಅನ್ನು ಕೆಲವರು ಸ್ವಯಂ ಸೇವಕರಿಗೆ ನೀಡಲಾಗಿತ್ತು. ಈ ಮಾತ್ರೆಗಳು ಅವರ ಲೈಂಗಿಕ ಸಾಮರ್‍ಥ್ಯವನ್ನು ಹೆಚ್ಚಿಸಲು ನೆರವಾದವು. ಅಂದೆ ಸಿಲ್ಡೆನಾಷಿಲ್ ಮಾತ್ರೆಗೆ ‘ವಯಾಗ್ರ’ ಎಂದು ಕರೆಯಲಾಯಿತು.
*****

Tagged:

Leave a Reply

Your email address will not be published. Required fields are marked *

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...